ಯಳಂದೂರು19. ಜೂನ್.25:- : ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎ ಆರ್ ಕೃಷ್ಣಮೂರ್ತಿ ರವರು ಕ್ಷೇತ್ರದಲ್ಲಿ ಉತ್ತಮ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ರಾಜ್ಯಪಾಲರಾಗಿದ್ದ ದಿವಂಗತ ಬಿ ರಾಚಯ್ಯನವರ ಸುಪುತ್ರರಾಗಿದ್ದು ರಾಜಕೀಯ ಕುಟುಂಬದಿಂದ ಬಂದಿರುತ್ತಾರೆ. ಮೂರು ಬಾರಿ ಶಾಸಕರಾಗಿ ಜಿಲ್ಲೆಯಲ್ಲಿ ಅನೇಕ ಜನಪರ ಕಾರ್ಯವನ್ನು ಮಾಡಿದ್ದಾರೆ.
ಇವರು ರಾಜಕೀಯ ಮುತ್ಸದ್ದಿಯಾಗಿದ್ದು ಅಪಾರ ರಾಜಕೀಯ ಜ್ಞಾನವುಳ್ಳವರಾಗಿದ್ದಾರೆ ಕ್ಯಾಬಿನೆಟ್ ಪುನರ್ ರಚನೆಯಲ್ಲಿ ಕಾಂಗ್ರೇಸ್ ಪಕ್ಷದ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಪರಮೇಶ್ವರ್ ರವರು ಎ ಆರ್ ಕೃಷ್ಣಮೂರ್ತಿ ರವರಿಗೆ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನವನ್ನು ನೀಡಿಬೇಕಾಗಿದೆ. ಇವರಿಂದ ಚಾಮರಾಜನಗರ ಜಿಲ್ಲೆಯು ಇನ್ನಷ್ಟು ಅಭಿವೃದ್ಧಿಯಾಗುತ್ತದೆ. ಎಂದು ಕೆಸ್ತೂರು ಗ್ರಾಮದ ಕಾಂಗ್ರೇಸ್ ಮುಖಂಡರಾದ ಪಿ ರಾಮಕೃಷ್ಣ, ನಾಗಣ್ಣ, ಬಿ ನಾಗರಾಜು ಹಾಗೂ ಮಾದಪ್ಪ ಚಿಕ್ಕನಿಂಗವರು ಆಗ್ರಹಿಸಿದರು.
