09/06/2025 2:59 AM

Translate Language

Home » ಲೈವ್ ನ್ಯೂಸ್ » ಶರಣರಿಗೆ ಕಾಯಕವೇ ಜೀವಾಳವಾಗಿತ್ತು – ಸುರೇಖಾ ಕೆ.ಎ.ಎಸ್.

ಶರಣರಿಗೆ ಕಾಯಕವೇ ಜೀವಾಳವಾಗಿತ್ತು – ಸುರೇಖಾ ಕೆ.ಎ.ಎಸ್.

Facebook
X
WhatsApp
Telegram


ಬೀದರ.10.ಫೆಬ್ರುವರಿ.25:-ಸಮಾಜದಲ್ಲಿ ಕಾಯಕನಿಷ್ಠೆಯ ಆದರ್ಶವನ್ನು ತಿಳಿಸಿಕೊಟ್ಟವರು ಶರಣರು. ತಮ್ಮ ಕಾಯ ಹಾಗೂ ಕಾಯಕದಲ್ಲಿಯೇ ಕೈಲಾಸವನ್ನು ಕಂಡು ಬಾಳಿದ ಮಹಾನುಭಾವರು ಬಸವಾದಿಶರಣರು ಎಂದು ಬೀದರ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾದ ಸುರೇಖಾ ಕೆ.ಎ.ಎಸ್. ಅವರು ಹೇಳಿದರು.


ಅವರು ಇಂದು ಬೀದರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾಯಕ ಶರಣರ ಜಯಂತಿಯ ಕಾರ್ಯಕ್ರಮದಲ್ಲಿ ಪೂಜೆಸಲ್ಲಿಸಿ ಮಾತನಾಡಿದರು.


ವೃತ್ತಿ ಮನುಷ್ಯನಿಗೆ ಶೋಭೆ, ಗೌರವ ತರುತ್ತದೆ. ಸತ್ಕರ್ಮದ ಕಾಯಕದಿಂದ ವ್ಯಕ್ತಿ ಉದಾತ್ತನಾಗುತ್ತಾನೆ. ಜೀವನದಲ್ಲಿ ಸದಾ ಕಾಯಕನಿರತರಾಗಬೇಕೆಂಬುದು ಶರಣರ ಧ್ಯೇಯ ಹಾಗೂ ಆದರ್ಶವಾಗಿತ್ತು. ಯಾವ ಕಾಯಕವೂ ದೊಡ್ಡದಲ್ಲ, ಚಿಕ್ಕದಲ್ಲ.

ಮನಸ್ಸಿನಿಂದ ಮಾಡುವ ಕಾಯಕವೇ ದೊಡ್ಡದೆಂದು ನಂಬಿದವರು ಶರಣರು. ಮಾದಾರ ಚನ್ನಯ್ಯ, ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ, ಉರಿಲಿಂಗ ಪೆದ್ದಿ, ಮಾದಾರ ಧೂಳಯ್ಯರವರಂತಹ ಮುಂತಾದ ಮಹಾನ್ ಶರಣರು ತಮ್ಮ ಕಾಯಕದ ಆದರ್ಶದಿಂದ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿದವರು. ಯಾರೂ ದುಡಿಯದೇ ಪ್ರಸಾದ ಸೇವಿಸಬಾರದೆಂಬ ಮೌಲ್ಯವನ್ನು 12ನೆಯ ಶತಮಾನದಲ್ಲಿಯೇ ಹೇಳಿದಂತಹ ಮಹನೀಯರಾಗಿದ್ದರೆಂದು ಕುಲಸಚಿವರು ಹೇಳಿದರು.


     ಸಮಾರಂಭದಲ್ಲಿ ಮೌಲ್ಯಮಾಪನ ಕುಲಸಚಿವರಾದ ಪ್ರೊ.ಪರಮೇಶ್ವರ ನಾಯ್ಕ.ಟಿರ ಅವರು ಮಾತನಾಡಿ, ಶರಣರು ತಾವು ಮಾಡುವ ಕಾಯಕನಿಷ್ಠೆ ಹಾಗೂ ತಮ್ಮ ವಚನಗಳಿಂದಲೇ ಇಂದಿಗೂ ಜೀವಂತವಾಗಿದ್ದಾರೆ, ಮಾದರಿಯಾಗಿದ್ದಾರೆ. ಶರಣರ ಸಮಾನತೆಯ ಸಿದ್ಧಾಂತ ಸಾರ್ವಕಾಲಿಕ  ಮೌಲ್ಯವಾಗಿದೆ. ಶರಣರು ಎಲ್ಲರನ್ನೂ ಸಮಾನವಾಗಿ ಕಂಡರು. ಇವನಾರವನೆನ್ನದೆ, ಇವನಮ್ಮವನೆಂದರು. ಶರಣರು ಆರೋಗ್ಯಕರ ಸಮಾಜಕ್ಕಾಗಿ ಹಂಬಲಿಸಿದರು ಎಂದರು.


      ಕನ್ನಡ ಉಪನ್ಯಾಸಕರಾದ ರಾಮಚಂದ್ರ ಗಣಾಪೂರ ಅವರು ಮಾತನಾಡಿ, ಶರಣರು ಕಾಯಕ ಪರಂಪರೆಗೆ ಮೌಲ್ಯವನ್ನು, ಅರ್ಥವನ್ನು ತಂದುಕೊಟ್ಟವರು. ಆ ಮೂಲಕ ತಮ್ಮ ನಡೆ-ನುಡಿಯಿಂದ, ಕಾಯಕನಿಷ್ಠೆಯಿಂದ ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಮಹತ್ವದ ಕೊಡುಗೆಯನ್ನು ನೀಡಿದರು. ಶರಣರು ಮೊದಲು ನಡೆದರು, ನಂತರ ನುಡಿದರು. ಹೀಗಾಗಿ ನಮಗೆ ನಡೆನುಡಿಯ ಆದರ್ಶಗಳ ಅವಶ್ಯಕತೆಯಿದೆ ಎಂದರು.


ಈ ಸಮಾರಂಭದಲ್ಲಿ ಬೀದರ ವಿಶ್ವವಿದ್ಯಾಲಯದ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿವರ್ಗದವರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!