08/06/2025 9:07 PM

Translate Language

Home » ಲೈವ್ ನ್ಯೂಸ್ » ‘ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ನಡತೆ ಆಧಾರ ಸ್ಥಂಬ’ಡಾ.ಪೃಥ್ವಿರಾಜ ಸುದರ್ಶನ ಲಕ್ಕಿ.

‘ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ನಡತೆ ಆಧಾರ ಸ್ಥಂಬ’ಡಾ.ಪೃಥ್ವಿರಾಜ ಸುದರ್ಶನ  ಲಕ್ಕಿ.

Facebook
X
WhatsApp
Telegram

ಔರಾದ.26.ಮೇ.25 ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಔರಾದ್ ಬಿ ನಲ್ಲಿ ಪ್ರೇರಣಾ ಯೋಜನೆ ಅಡಿಯಲ್ಲಿ ಬಿಎ, ಬಿಎಸ್ಸಿ ,ಬಿಕಾಂನ ನಾಲ್ಕನೆಯ ಮತ್ತು ಆರನೆಯ ಸೆಮಿಸ್ಟರ್ ನ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಮತ್ತು ಪರಿಸರ ಸಂರಕ್ಷಣ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಯೋಜನೆಯ ಸಮನ್ವಯ ಅಧಿಕಾರಿಯಾದ ಡಾ ಸಂಜೀವಕುಮಾರ ತಾಂದಳೆ ಯವರು ಯೋಜನೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ಪೃಥ್ವಿರಾಜ ಸುದರ್ಶನ ಲಕ್ಕಿ ಯವರು ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ ಆಗಬೇಕಾದರೆ ಉತ್ತಮ ನಡತೆಯು ಆಧಾರ ಸಂಭವಾಗಿದೆ ಎಂದು ಹಾಗೂ ದುಶ್ಚಟಗಳಿಂದ ದೂರವಿರಬೇಕೆಂದು ವಿದ್ಯಾರ್ಥಿಗಳಿಗೆ ಮನನ ಮಾಡಿಕೊಟ್ಟರು, 

ಅಧ್ಯಕ್ಷೀಯ ಸ್ಥಾನವನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಅಂಬಿಕಾದೇವಿ ಮಾತನಾಡುತ್ತಾ ವಿದ್ಯಾರ್ಥಿಗಳು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಮೂಲಕ ಪರಿಸರ ಸಂರಕ್ಷಣೆ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು ಕನ್ನಡ ವಿಭಾಗದ ಅಧ್ಯಾಪಕ ಶ್ರೀ ರಾಮಣ್ಣ ಉಪ್ಪಾರ ನಿರೂಪಿಸಿದರು, ಗಣಕ ವಿಜ್ಞಾನ ವಿಭಾಗದ ಅಧ್ಯಾಪಕರಾದ ಡಾ. ಪದ್ಮಾಂಜಲಿ ಅವರು ವಂದಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀ ಮಹೇಶಕುಮಾರ್ ಆರ್ ಶ್ರೀ ವಿನಾಯಕ್ ಕೊತ್ಮಿರ್, ಡಾ. ಊರ್ವಶಿ ಕೋಡ್ಲಿ ಡಾ. ಪದ್ಮಾಂಜಲಿ ಕುಮಾರಿ ಗುಡದಮ್ಮ, ಡಾ. ದಯಾನಂದ ಭಾವಗೆ, ಶ್ರೀ ಮುಲಗೆ ಸುಬ್ಬಣ್ಣ, ಶ್ರೀ ಆನಂದ್ ದುಂಬಾಳೆ, ಶ್ರೀ ಪಾಂಡುರಂಗ, ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!