10/06/2025 6:21 AM

Translate Language

Home » ಲೈವ್ ನ್ಯೂಸ್ » ವೈಜ್ಞಾನಿಕತೆ ಚಿಂತನೆಯಿಂದ ಮೌಢ್ಯತೆ ನಾಶವಾಗುತ್ತದೆ – ಶಾಸಕ ಎ ಆರ್ ಕೆ.

ವೈಜ್ಞಾನಿಕತೆ ಚಿಂತನೆಯಿಂದ  ಮೌಢ್ಯತೆ ನಾಶವಾಗುತ್ತದೆ – ಶಾಸಕ ಎ ಆರ್ ಕೆ.

Facebook
X
WhatsApp
Telegram

ಚಾಮರಾಜನಗರ .05.ಮೇ.25:-ಯಳಂದೂರು: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಯಳಂದೂರು ತಾಲ್ಲೂಕು ವತಿಯಿಂದ ಶ್ರೀಭಗೀರಥ ಜಯಂತಿಯು ಭಾನುವಾರ ಅದ್ದೂರಿಯಾಗಿ ನಡೆಯಿತು.

ಶಾಸಕ ಎ ಆರ್ ಕೃಷ್ಣಮೂರ್ತಿ ರವರು ಬೆಳ್ಳಿ ರಥದಲ್ಲಿರಿಸಿದ ಶ್ರೀಭಗೀರಥ ಮಹರ್ಷಿಗಳ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ಮೆರವಣಿಯಲ್ಲಿ ಶಾಸಕರು, ಉಪ್ಪಾರ ಸಮುದಾಯ ಮುಖಂಡರು ಕುಣಿದು ಕುಪ್ಪಳಿಸಿದರು.

ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಉಪ್ಪಾರ ಸಮುದಾಯದ ಜನರು ಆಗಮಿಸಿದರು. 

ತಾಲ್ಲೂಕು ಕಛೇರಿಯಿಂದ ಎಸ್ ಬಿ ಐ ಸರ್ಕಲ್, ಬಳೇಪೇಟೆ ಸರ್ಕಲ್, ವಾಲ್ಮೀಕಿ ವೃತ್ತ, ಬಸ್ ನಿಲ್ದಾಣದ ಮೂಲಕ  ಸಹಸ್ರಾರು ಸಂಖ್ಯೆಯಲ್ಲಿ ಮೆರವಣಿಗೆ ಸಾಗಿತು.ಮೆರವಣಿಯಲ್ಲಿ ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ಸತ್ತಿಗೆಗಳು ಇನ್ನಷ್ಟು ಮೆರೆಗು ನೀಡಿತು.

ಯುವಕರು ಡಿಜೆ ಸಾಂಗ್ಸ್ ಹೆಜ್ಜೆಹಾಕಿ ಕುಣಿದು ಕುಪ್ಪಳಿಸಿದರು.

ಬಿ ಆರ್ ಹಿಲ್ಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ಕೆಲಕಾಲ ನಿಲ್ಲುವಂತಾಯಿತು.

ನಂತರ ಮಧ್ಯಾಹ್ನ ಕಾಲೇಜು ಆವರಣದಲ್ಲಿ ವೇದಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಶಾಸಕ ಎ ಆರ್ ಕೃಷ್ಣಮೂರ್ತಿ ಮಾತನಾಡಿ.

ಉಪ್ಪಾರ ಸಮುದಾಯವು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ರಾಜಕೀಯವಾಗಿ ಹೊರಹೊಮ್ಮಬೇಕು.

ವೈಜ್ಞಾನಿಕ ಚಿಂತನೆ ಮೂಡಿದರೆ ಮೌಢ್ಯತೆ ಎಂಬುವುದು ನಾಶವಾಗುತ್ತದೆ. 

 ಇಂದು ಉಪ್ಪಾರ ಸಮುದಾಯದಲ್ಲಿ ಹೆಚ್ಚು ಹೆಚ್ಚು ಸರಕಾರಿ ಕೆಲಸವನ್ನು ತೆಗೆದುಕೊಳ್ಳುತ್ತಿದ್ದಾರೆ.  ಸಾಧನೆಮಾಡಬೇಕಾದರೆ  ಭಗೀರಥ ಪ್ರಯತ್ನ ಮಾಡಬೇಕು, ಮಹಿಳೆಯರು ಸಬಲರಾಗಬೇಕು, ದುಂದುವೆಚ್ಚ ಕಡಿಮೆ ಮಾಡಬೇಕಾಗಿದೆ. ನಿಮ್ಮ ಮಕ್ಕಳಿಗೆ ಶಿಕ್ಷಣಕೊಡಿ ಅವಾಗ ನೀವು ರಾಜಕೀಯವಾಗಿ ಒಗ್ಗಟಾಗಬಹುದು.

ಮುಖ್ಯಭಾಷಣಕಾರ ಪ್ರಿಯಾ ಶಂಕರ್ ಮಾತನಾಡಿ ಭಗೀರಥ ಮಹರ್ಷಿರವರ ವಿಚಾರಗಳನ್ನು ತಿಳಿಸಿದರು.

ಎಸ್ ಎಸ್ ಎಲ್ ಸಿ, ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.

( ಬಾಕ್ಸ್ ಮೆರವಣಿಗೆಯಲ್ಲಿದಷ್ಟು ಜನರು ವೇದಿಕೆ ಕಾರ್ಯಕ್ರಮಗಳಲ್ಲಿ ಇರಲಿಲ್ಲ ಭಾಷಣ ಖಾಲಿ ಕುರ್ಚಿಗಳಿಗೆ ಮೀಸಲಾಗಿತ್ತು. ಪ್ರತಿ ಹಳ್ಳಿಯಿಂದಲ್ಲೂ ಮನೆಗೊಬ್ಬರಂತೆ ಬಂದಿದ್ದ ಉಪ್ಪಾರ ಜನಾಂಗದವರು ಮೆರವಣಿಗೆ ಮುಗಿದ ಮೇಲೆ ಮನೆಗೆ ನೆಡೆದರು ಆದರೆ ವೇದಿಕೆ ಕಾರ್ಯಕ್ರಮದಲ್ಲಿ ಜನರು ಏಕೆ? ಇರಲಿಲ್ಲವೆಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತದೆ.)

ಈ ಸಂದರ್ಭದಲ್ಲಿ  ಅಧ್ಯಕ್ಷೆ ಲಕ್ಷ್ಮೀ, ಉಪಾಧ್ಯಕ್ಷೆ ಶಾಂತಮ್ಮ, ಜಿಲ್ಲಾ ಗ್ಯಾರಂಟಿ ಅಧ್ಯಕ್ಷ ಚಂದ್ರು, ತಹಶೀಲ್ದಾರ್ ಬಸವರಾಜ್, ತಾಲ್ಲೂಕು ಗ್ಯಾರಂಟಿ ಅಧ್ಯಕ್ಷ ಪ್ರಭುಪ್ರಸಾದ್, ಜಿಪಂ ಮಾಜಿ ಉಪಾಧ್ಯಕ್ಷರುಗಳಾದ ಯೋಗೇಶ್ ಜೆ, ಸಿದ್ದರಾಜು,   ತಾಲ್ಲೂಕು ಭಗೀರಥ ಸಂಘದ ಅಧ್ಯಕ್ಷ ಡಿ ಎನ್ ನಾಗರಾಜು, ಮಾಜಿ ತಾಪಂ ಸದಸ್ಯ ನಾಗರಾಜು, ಕಂದಹಳ್ಳಿ ನಂಜುಂಡಸ್ವಾಮಿ, ಸಿದ್ದಪ್ಪಸ್ವಾಮಿ ಪಪಂ ಮುಖ್ಯಾಧಿಕಾರಿ ಮಹೇಶ್ ಕುಮಾರ್, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್, ಪಪಂ ಸದಸ್ಯ ಸುಶೀಲಾ, ಉಪ್ಪಾರ ಸಮುದಾಯದ ಯಜಮಾನರು,  ಮುಖಂಡರು ಹಾಗೂ ಸಾರ್ವಜನಿಕರು ಹಾಜರಿದ್ದರು

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!