ಬೀದರ ೧೨ರಂದು ಹನುಮ ಜಯಂತ್ಯುತ್ಸವ:
ಬೀದರ್ನಲ್ಲಿ ಭವ್ಯ ಶೋಭಾಯಾತ್ರೆ
ಬೀದರ್: ಶ್ರೀರಾಮ ಭಕ್ತ, ಸಂಕಟಮೋಚನ ಶ್ರೀ ಹನಮಾನ ಜಯಂತ್ಯುತ್ಸವ ಇದೇ ೧೨ರಂದು (ಶನಿವಾರ) ಬೀದರ್ ನಗರದಲ್ಲಿ ಅದ್ಧೂರಿಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ನಿಮಿತ್ತ ಸಾಂಸ್ಕೃತಿಕ ವೈಭವದೊಂದಿಗೆ ಭವ್ಯ ಶೋಭಾಯಾತ್ರೆ ನಡೆಯಲಿದೆ ಎಂದು ಭಜರಂಗ ದಳ ಜಿಲ್ಲಾ ಸಂಯೋಜಕ ಭೀಮಣ್ಣಾ ಸೋರಳ್ಳಿ ಆಣದೂರ ತಿಳಿಸಿದ್ದಾರೆ.
ನಗರದ ಜನವಾಡಾ ರಸ್ತೆಯ ಪ್ರಸಿದ್ಧ ರೋಕಡೆ ಹನುಮಾನ ಮಂದಿರದಲ್ಲಿ ಜಯಂತ್ಯುತ್ಸವ ನಿಮಿತ್ತ ಅಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ನಂತರ ಸಂಜೆ ೪ಕ್ಕೆ ಅಲ್ಲಿಂದ ಭವ್ಯ ಶೋಭಾಯಾತ್ರೆ ಆರಂಭವಾಗಲಿದೆ. ಜಿಲ್ಲಾ ವಿಶ್ವ ಹಿಂದು ಪರಿಷತ್ ಸಹಯೋಗದಲ್ಲಿ ಭಜರಂಗ ದಳದ ವತಿಯಿಂದ ಜಯಂತಿಯನ್ನು ಯಶಸ್ವಿ ಹಾಗೂ ಅಚ್ಚುಕಟ್ಟಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹನುಮಾನ ಮಂದಿರದಿoದ ಶುರುವಾಗುವ ಶೋಭಾಯಾತ್ರೆ ಜನವಾಡಾ ರಸ್ತೆ, ಡಾ. ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಚೌಬಾರಾ, ಗವಾನ ಚೌಕ್, ಶಹಾಗಂಜ್ ಮುಖಾಂತರ ಮತ್ತೆ ಹನುಮಾನ ಮಂದಿರಕ್ಕೆ ಬಂದು ಕೊನೆಗೊಳ್ಳಲಿದೆ. ವಿಶ್ವ ಹಿಂದು ಪರಿಷತ್ ಕೇಂದ್ರೀಯ ಸಹ ಕಾರ್ಯದರ್ಶಿ ಹಾಗೂ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣದ ಉಸ್ತುವಾರಿಗಳಾದ ಎನ್. ಗೋಪಾಲ್ಜಿ ಅವರು ಶೋಭಾಯಾತ್ರೆಗೆ ಚಾಲನೆ ನೀಡುವರು. ಶೋಭಾಯಾತ್ರೆ ಬಸವೇಶ್ವರ ವೃತ್ತಕ್ಕೆ ಆಗಮಿಸಿದಾಗ ಅಲ್ಲಿ ಗೋಪಾಲ್ಜಿ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಬೌದ್ಧಿಕ ನೀಡುವರು. ಶಾಸಕರು, ಗಣ್ಯರು, ವಿವಿಧ ಸಂಘಟನೆ, ಸಮಾಜದ ಮುಖಂಡರು ಪಾಲ್ಗೊಳ್ಳುವರು ಎಂದು ವಿವರಿಸಿದ್ದಾರೆ.