ಬೀದರ.07ಜೂನ್.25:- ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇತ್ತಿಚಿಗೆ ಬೀದರ ವಿಭಾಗದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾoತ ಫುಲೇಕರ್ ಅವರು ಕೋಳಾರ ಇಂಡಸ್ಟಿçಯಲ್ ಏರಿಯಾದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಉದ್ದೇಶಿತ ಮಿನಿ ಬಸ್ ತಂಗುದಾಣ ಹಾಗೂ ಸಿಬ್ಬಂದಿ ವಸತಿ ಗೃಹ ಪ್ಲಾಟ್ ನಂ. 16(ಬಿ) ದಲ್ಲಿ ಮತ್ತು ಈಗಾಗಲೇ ನಿಗಮದ ವಿಭಾಗೀಯ ಕಾರ್ಯಾಗಾರ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆಯಲ್ಲಿರುವ ಪ್ಲಾಟ್ ನಂ. 132 (ಎ) ದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಕರಸಾ ಬೀದರ ವಿಭಾಗದ ಅಧಿಕಾರಿಳು, ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.