ಬೀದರ.04.ಜೂನ್.25:- ಕರ್ನಾಟಕ ಸರ್ಕಾರದ ಆದೇಶದನ್ವಯ ಕ್ರೈಸ್ ಅಡಿಯಲ್ಲಿ ಬೀದರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ
1)ಮೊರಾರ್ಜಿ ದೇಸಾಯಿ/
2) ಅಟಲ್ ಬಿಹಾರಿ ವಾಜಪೇಯಿ /
3) ಡಾ.ಬಿ.ಆರ್. ಅಂಬೇಡ್ಕರ್/
4) ಕಿತ್ತೂರು ರಾಣಿ ಚೆನ್ನಮ್ಮ /
5) ಇಂದಿರಾಗಾoಧಿ ವಸತಿ ಶಾಲೆಗಳಲ್ಲಿ
2025-26 ನೇ ಶೈಕ್ಷಣಿಕ ಸಾಲಿಗೆ 6 ನೇ ತರಗತಿಗೆ ದಾಖಲಾತಿ ಮಾಡಿಕೊಳ್ಳುವುದಕ್ಕೆ ಸಂಬoಧಿಸಿದoತೆ ಕರ್ನಾಟಕ ಪರೀಕ್ಷಾ ಪ್ರಾಧೀಕಾರದಿಂದ ಪ್ರವೇಶ ಪರೀಕ್ಷೆ ನಡೆಸಿ ಅಂಕಗಳ (ಮೆರಿಟ್) ಆಧಾರದ ಮೇಲೆ ಸರ್ಕಾರದ ನಿಗದಿಪಡಿಸಿದ ಮೀಸಲಾತಿಯನ್ವಯ ಪ್ರವೇಶ ನೀಡಲಾಗುತ್ತಿದೆ.
ಕರ್ನಾಟಕ ಪರೀಕ್ಷಾ ಪ್ರಾಧೀಕಾರದಿಂದ ಸೀಟು ಹಂಚಿಕೆ ಮಾಡಿದ ಮೇಲೆ ಉಳಿದ ಖಾಲಿಯಿರುವ ಸ್ಥಾನಗಳ ತುಂಬುವಲ್ಲಿ ಬಹಳಷ್ಟು ದೂರುಗಳು, ಆಕ್ಷೇಪಣೆಗಳು ಬರುತ್ತಿವೆ.
ಹೀಗಾಗಿ 6ನೇ ತರಗತಿ ಮತ್ತು ಇತರ ತರಗತಿಗಳಲ್ಲಿ ಖಾಲಿಯಿರುವ ಸೀಟುಗಳನ್ನುಮೀಸಲಾತಿ ಮತ್ತು ಮೇರಿಟ್ ಅನ್ವಯ ಆಯ್ಕೆ ಮಾಡಲು ಸರ್ಕಾರ ಆಯಾ ಜಿಲ್ಲೆಗಳ ಕಂದಾಯ ಉಪ ವಿಭಾಗಗಳ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮೀತಿಯನ್ನು ರಚನೆ ಮಾಡಿದೆ.
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು, ಪ್ರಾಂಶುಪಾಲರು, ಹಿರಿಯ ಶಿಕ್ಷಕರು ಸಮಿತಿ ಸದಸ್ಯರಾಗಿದ್ದು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆಂದು ಬೀದರ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಾಖಲಾತಿಗಾಗಿ ಮಕ್ಕಳನ್ನು ಆಯ್ಕೆ ಮಾಡುವಾಗ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳ ಅಂಕಗಳು (ಮೆರಿಟ್) ಆಧಾರದ ಮೇಲೆ ಮೀಸಲಾತಿ ನಿಯಮಗಳಿಗೆ ಅನುಗುಣವಾಗಿ ಯಾವುದೇ ಶಿಫಾರಸ್ಸುಗಳನ್ನು ಪರಿಗಣಿಸದೇ ಆಯ್ಕೆ ಮಾಡಲಾಗುತ್ತದೆ.
ಜೊತೆಗೆ ವಿಶೇಷ ವರ್ಗಗಳ ವಿದ್ಯಾರ್ಥಿಗಳಿಗೆ 6ನೇ ತರಗತಿಗೆ ಪರೀಕ್ಷೆ ಇಲ್ಲದೆ ನೇರ ದಾಖಲಾತಿ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಈ ಬಗ್ಗೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಿಸೌಕರ್ಯವಂಚಿತ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಸರ್ಕಾರದ ಘನ ಉದ್ದೇಶ ಈಡೇರಿಸುವ ನಿಟ್ಟಿನಲ್ಲಿ ಅವಶ್ಯಕತೆಯಿರುವ ಪ್ರತಿಯೊಬ್ಬ ಮಗು ಈ ಸೌಲಭ್ಯ ಪಡೆಯಲು ಕ್ರಮ ವಹಿಸಲಾಗಿದೆ.
ಸರ್ಕಾರದ ಈ ಸೌಲಭ್ಯವನ್ನು ಕೆಲವು ಜನ ದುರುಪಯೋಗ ಪಡಿಸಿಕೊಂಡು ನಕಲು ಮತ್ತು ನೈಜತೆಯಿಲ್ಲದ ಪ್ರಮಾಣ ಪತ್ರಗಳನ್ನು ಪಡೆದುಕೊಂಡು ಪ್ರವೇಶ ಕೋರಿ ಶಾಲೆಗೆ ಬರುತ್ತಿರುವ ಬಗ್ಗೆ ದೂರುಗಳು ಸ್ವೀಕೃತವಾಗಿವೆ.
ಇದರಿಂದ ಘನ ಸರ್ಕಾರದ ನೈಜ ಉದ್ದೇಶಕ್ಕೆ ಧಕ್ಕೆ ಬರುವುದಲ್ಲದೆ ನಿಜವಾದ ಅವಶ್ಯಕತೆ ಇರುವ ಮಕ್ಕಳಿಗೆ ಅವರ ಅವಕಾಶದಿಂದ ವಂಚಿಸಿದoತಾಗುತ್ತದೆ.
ಇದನ್ನು ಗಂಭೀರವಾಗಿ ಪರಗಣಿಸಿ ಸಂಬoಧಿಸಿದ ಪ್ರಾಧೀಕಾರದಿಂದ ನೀಡಲಾದ ನೈಜ ಪ್ರಮಾಣ ಪತ್ರದ ದೃಢಪಡಿಸಿಕೊಂಡು ಪ್ರವೇಶ ನೀಡಲಾಗುವುದು. ಪರಿಶೀಲನೆ ಮಾಡುವ ಸಂದರ್ಭದಲ್ಲಿ ಪ್ರಮಾಣ ಪತ್ರ ಸುಳ್ಳೆಂದು ಸಾಬೀತಾದಲ್ಲಿ ಪ್ರವೇಶ ರದ್ದು ಪಡಿಸಿ ಪ್ರಮಾಣ ಪತ್ರ ಸಲ್ಲಿಸಿದವರ ಮತ್ತು ನೀಡಿದವರ ಮೇಲೆ ಕಾನೂನು ರಿತ್ಯ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು.
ಕಾರಣ ಸಾರ್ವಜನಿಕರು ಮಧ್ಯವರ್ತಿಗಳಿಂದ ಯಾವುದೇ ರೀತಿ ವಂಚನೆಗೊಳಗಾಗಬಾರದೆoದು ಅವರು ತಿಳಿಸಿದ್ದಾರೆ.