ಬೀದರ.25.ಜನೆವರಿ.25.ಇಂದು ಭಾಲ್ಕಿ ನಗರದಲ್ಲಿ ಪ್ರತಿಷ್ಠಿತ ಭಾರತ ಪಬ್ಲಿಕ್ ಶಾಲೆ, ಭಾಲ್ಕಿ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟ 2025ರಲ್ಲಿ ಸಂಸದರಾದ ಸಾಗರ ಖಂಡ್ರೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡೆ ವಿದ್ಯಾರ್ಥಿಗಳಿಗೆ ಶಿಸ್ತು, ಮತ್ತು ತಾಳ್ಮೆ ಬೆಳೆಸುವಲ್ಲಿ ಮಹತ್ವವಾದ ಪಾತ್ರ ವಹಿಸುತ್ತದೆ. ಸಮಗ್ರ ಶಿಕ್ಷಣ ನೀಡುವುದರ ಜೊತೆಗೆ ಕ್ರೀಡೆಯ ಮೇಲೆಯೂ ವಿಶೇಷ ಕಾಳಜಿ ವಹಿಸಿರುವ ಭಾರತ ಪಬ್ಲಿಕ್ ಶಾಲೆಯ ಅಧ್ಯಕ್ಷರಾದ ಶ್ರೀ ಪ್ರವೀಣ್ ಹಣಮಶೆಟ್ಟಿ, ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರ ತಂಡಕ್ಕೆ ಸಂಸದರು ಅಭಿನಂದನೆಗಳನ್ನು ಸಲ್ಲಿಸಿದರು.
ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮತ್ತು ಕ್ರೀಡೆಯಲ್ಲಿ ಉತ್ತುಂಗ ಸಾಧಿಸಲೆಂದು ಸಂಸದರಾದ ಸಾಗರ ಖಂಡ್ರೆ ಅವರು ಶುಭ ಹಾರೈಸಿದರು.
