08/06/2025 7:47 PM

Translate Language

Home » ಲೈವ್ ನ್ಯೂಸ್ » ರೈತರಿಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

ರೈತರಿಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

Facebook
X
WhatsApp
Telegram

ಯಾದಗಿರಿ.04.ಜೂನ್.25: ಸರ್ಕಾರದ ವಿವಿಧ ಯೋಜನೆಯಡಿ ಸಹಾಯಧನ ಪಡೆಯಲು ರಾಜ್ಯದ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು (ಜಿಲ್ಲಾ ಪಂಚಾಯಿತಿ) ತೋಟಗಾರಿಕೆ ಉಪ ನಿರ್ದೇಶಕ ರಾಘವೇಂದ್ರ ತಿಳಿಸಿದ್ದಾರೆ.

ತೋಟಗಾರಿಕೆ ಇಲಾಖೆಯ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಘಟಕಗಳಾದ ಪ್ರದೇಶ ವಿಸ್ತರಣೆ, ಎರೆಹುಳು ತೊಟ್ಟಿ, ವೈಯಕ್ತಿಕ ಕೃಷಿ ಹೊಂಡ, ಪುನಶ್ಚೇತನ, ವೀಡ್ ಮ್ಯಾಟ್, ಪ್ಲಾಸ್ಟಿಕ್ ಹೊದಿಕೆ, ನೆರಳು ಪರದೆ ಮತ್ತು ಹಸಿರು ಮನೆ, ಪಕ್ಷಿ ನಿರೋದಕ ಬಲೆ, ಯಾಂತ್ರೀಕರಣ, ಪ್ಯಾಕ್‌ಹೌಸ್, ಈರುಳ್ಳಿ ಶೇಖರಣೆ ಘಟಕ, ಅಣಬೆ ಉತ್ಪಾದನೆ ಘಟಕ, ಹಣ್ಣು ಮಾಗಿಸುವ ಘಟಕ, ತಳ್ಳುವ ಗಾಡಿ ಹಾಗೂ ಸಮಗ್ರ ಕೀಟ, ಪೋಷಕಾಂಶ ನಿರ್ವಹಣೆಗಾಗಿ ಸಹಾಯಧನ ಪಡೆಯಲು ರೈತರಿಂದ ಅರ್ಜಿ ಆಹ್ವಾನಿಸಿದೆ.

ಹೆಚ್ಚಿನ ಮಾಹಿತಿಗಾಗಿ ಯಾದಗಿರಿ (ಜಿಪಂ) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ (91645 70011), ಶಹಾಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (99019 19133), ಸುರಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ (8217748605), ಸಹಾಯಕ ತೋಟಗಾರಿಕೆ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರಗಳಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್

http://bcwd.karnataka.gov.in,

 http://sevasindhuservices.karnataka.gov.in

ನಲ್ಲಿಅಥವಾ ಸಹಾಯವಾಣಿ ಸಂಖ್ಯೆ: 8050370006 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!