09/06/2025 1:24 PM

Translate Language

Home » ಲೈವ್ ನ್ಯೂಸ್ » ರೈತರಿಗೆ ಕೃಷಿ ಮತ್ತು ಶಿಕ್ಷಣ ಸಾಲ ನಿರಾಕರಿಸದಂತೆ. ಸಂಸದ ಶ್ರೀ ಸಾಗರ ಖಂಡ್ರೆ.

ರೈತರಿಗೆ ಕೃಷಿ ಮತ್ತು ಶಿಕ್ಷಣ ಸಾಲ ನಿರಾಕರಿಸದಂತೆ. ಸಂಸದ ಶ್ರೀ ಸಾಗರ ಖಂಡ್ರೆ.

Facebook
X
WhatsApp
Telegram

ಬೀದರ್.04.ಮಾರ್ಚ.25:- ಬೀದರ ಲೋಕಸಭಾ ಸಂಸದರಾದ ಶ್ರೀ ಸಾಗರ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ಇಂದು ಬೀದರ ಜಿಲ್ಲಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಜಿಲ್ಲಾ ಲೀಡ್ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಸಲಹಾ ಸಮಿತಿ (DCC) ಹಾಗೂ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ (DLRC) ಸಭೆ ನಡೆಯಿತು.

ಬ್ಯಾಂಕ್ ಅಧಿಕಾರಿಗಳೊಂದಿಗೆ ನಡೆದ ಈ ಸಭೆಯಲ್ಲಿ, ಪಿಎಂ ವಿಶ್ವಕರ್ಮ, ಮುದ್ರಾ, ಪಿಎಂಇಜಿಪಿ ಮತ್ತು ಪಿಎಂ ಸೋಶಿಯಲ್ ಸೆಕ್ಯೂರಿಟಿ ಯೋಜನೆಗಳು ಸೇರಿದಂತೆ ಕೃಷಿ ಸಾಲ, ಶಿಕ್ಷಣ ಸಾಲಗಳ ಅನುಷ್ಠಾನ ಮತ್ತು ಪ್ರಗತಿಯ ಕುರಿತು ಪರಿಶೀಲನೆ ನಡೆಯಿತು.

ಬ್ಯಾಂಕುಗಳು ರೈತರಿಗೆ ಕೃಷಿ ಸಾಲ ನಿರಾಕರಿಸದಂತೆ ಹಾಗೂ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲಗಳನ್ನು ಆರ್‌ಬಿಐ ನಿಯಮದಂತೆ ಯಾವುದೇ ಭದ್ರತೆ (Security) ಪಡೆಯದೇ ನೀಡಲು ಕ್ರಮ ಕೈಗೊಳ್ಳಬೇಕೆಂದು ಸಂಸದ ಸಾಗರ ಖಂಡ್ರೆ ಅವರು ಅಧಿಕಾರಿಗಳಿಗೆ ಸೂಚಿಸಿದರು. ರೈತರು ಮತ್ತು ವಿದ್ಯಾರ್ಥಿಗಳು ಸಾಲ ಪಡೆಯುವಲ್ಲಿ ಯಾವುದೇ ಅಡೆತಡೆಯಾಗಬಾರದು ಎಂಬುದಾಗಿ ಅವರು ಕಟ್ಟುನಿಟ್ಟಾಗಿ ಆದೇಶಿಸಿದರು.

ಜನತೆಗೆ ಸುಲಭ ಬ್ಯಾಂಕಿಂಗ್ ಸೇವೆ ಒದಗಿಸುವ ನಿಟ್ಟಿನಲ್ಲಿ ಭಾಲ್ಕಿ ತಾಲೂಕಿನ ಮೆಹಕರ್ ಮತ್ತು ಔರಾದ್ (B)ನಲ್ಲಿ ನೂತನ ಎಸ್‌ಬಿಐ ಶಾಖೆ ತೆರೆಯುವ ಸಾಧ್ಯತೆಗಳ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶಿಸಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!