ಕಲಬುರಗಿ .23.ಏಪ್ರಿಲ್.25: ಕೇಂದ್ರದ ಲೋಕ ಸೇವಾ ಆಯೋಗದ UPSC ಪರೀಕ್ಷೆಯಲ್ಲಿ ಕಲಬುರಗಿ ಜಿಲ್ಲೆಯ ರೈತನ ಮಗ ಉತ್ತಮ ರ್ಯಾಂಕ್ ಪಡೆಯುವ ಮೂಲಕ ಉತ್ತೀರ್ಣರಾಗಿದ್ದಾರೆ.
ಅದರಲ್ಲೂ ಕಲ್ಯಾಣ ಕರ್ನಾಟಕದಿಂದ ಯುಪಿಎಸ್ಸಿ ಪರೀಕ್ಷೆ ಪಾಸಾದ ಏಕೈಕ ಅಭ್ಯರ್ಥಿಯಾಗಿದ್ದಾರೆ.
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೋರ ಜಂಬಗಾ ಗ್ರಾಮದ ರೈತ ಸಂಗಣ್ಣಗೌಡ ಪಾಟೀಲ್ ಪುತ್ರ ಮೋಹನ ಪಾಟೀಲ್ ಯುಪಿಎಸ್ ಸಿ ರಾಷ್ಟ್ರ ಮಟ್ಟದ ಪರೀಕ್ಷೆಯಲ್ಲಿ ಆಯ್ಕೆಯಾಗದ್ದಾರೆ.
ಮೋಹನ ಪಾಟೀಲ್ ಯುಪಿಎಸ್ ಸಿ ಪರೀಕ್ಷೆಯಲ್ಲಿ 984 ರ್ಯಾಂಕ್ ಪಡೆದು ಗಮನಾರ್ಹ ಸಾಧನೆ ತೋರಿದ್ದಾರೆ. ಮಗ ಯುಪಿಎಸ್ಸಿ ಪರೀಕ್ಷೆ ಪಾಸಾಗಿದ್ದಕ್ಕೆ ರೈತ ಸಂಗಣ್ಣಗೌಡ ಪಾಟೀಲ್ ಖುಷಿಗೊಂಡಿದ್ದು, ಮಗ ರೈತರ ಹಾಗೂ ಬಡವರ ಸೇವೆ ಮೂಲಕ ಹೆಸರು ತರಲಿ ಎಂದು ಆಶೀಸಿದ್ದಾರೆ.
ಮೋಹನ್ ಪಾಟೀಲ್ ಯುಪಿಎಸ್ ಸಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದಿದ್ದಕ್ಕೆ ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹರ್ಷ ವ್ಯಕ್ತಪಡಿಸಿ, ವಿದ್ಯಾರ್ಥಿ ಗೆ ಅಭಿನಂದನೆ ಸಲ್ಲಿಸಿದ್ದಾರೆ.