23/06/2025 4:14 AM

Translate Language

Home » ಲೈವ್ ನ್ಯೂಸ್ » ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರ

ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರ

Facebook
X
WhatsApp
Telegram


ಬೀದರ.13.ಮೇ.12:- ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ತೋಟಗಾರಿಕೆ ಬೆಳೆಗಳ ಮಹತ್ವ, ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ಕ್ರಮದ ಬಗ್ಗೆ ಹಾಗೂ ಎಲ್ಲಾ ಶಿಬಿರಾರ್ಥಿಗಳನ್ನು ತಮ್ಮ ಮಕ್ಕಳಂತೆ ಭಾವಿಷಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ ಹೇಳಿದರು.


ಅವರು ರವಿವಾರದಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟ ಅಡಿಯಲ್ಲಿ ಬರುವ ತೋಟಗಾರಿಕೆ ಮಹಾವಿದ್ಯಾಲಯ ಬೀದರನಿಂದ ಚಟ್ನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಏಳು ದಿನದ ರಾಷ್ಟಿçÃಯ ಸೇವಾ ಯೋಜನೆ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.


ಡಾ. ವಿಜಯಮಹಾಂತೇಶ, ಸಹಾಯಕ ಪ್ರಾಧ್ಯಾಪಕರು, ರಾಷ್ಟಿçಯ ಸೇವಾ ಯೋಜನೆ ಅಧಿಕಾರಿಗಳು, ತೋಟಗಾರಿಕೆ ಮಹಾವಿದ್ಯಾಲಯ, ಬೀದರ ಇವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಇತಿಹಾಸ, ಮಹತ್ವ, ್ತ ಲಾಭ ಮತು ಒಂದು ವಾರದ ಶಿಬಿರದ ವೇಳಾಪಟ್ಟಿ ಹಾಗೂ ಆಯೋಜಿಸಿದ ವಿವಿಧ ಕಾರ್ಯಕ್ರಮಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.


ಈ ಸಂದರ್ಭದಲ್ಲಿ ಚಟ್ನಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷ ಮಹಾದೇವಿ ಮಲ್ಲಪ್ಪ, ಚಟ್ನಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾದ ವಾಚುಸಿಂಗ್, ಡಾ. ಎಸ್.ಎಂ. ಪ್ರಸನ್ನ, ಸಹಾಯಕ ಪ್ರಾಧ್ಯಾಪಕರು, ಡಾ. ದುಷಂತ ಓಲೇಕಾರ, ರಾಷ್ಟಿçÃಯ ಸೇವಾ ಯೋಜನೆ ಅಧಿಕಾರಿಗಳು ತೋ.ಮ.ವಿ., ಬೀದರ ಮತ್ತು ಚಟ್ನಳ್ಳಿ ಗ್ರಾಮದ ಮುಖಂಡರಾದ ಶಂಕ್ರಪ್ಪಾ ಬಿರಾದಾರ, ನಾಗೇಶ, ಘಾಳೆಪ್ಪಾ ಚಟ್ನಳ್ಳಿ, ಓಂಕಾರ, ಅಧ್ಯಕ್ಷರು, ಎಸ್.ಡಿ.ಎಮ್.ಸಿ., ಛೋಟುಮಿಯಾ ಹಾಗೂ ಗ್ರಾ. ಪಂ. ಸದಸ್ಯರುಗಳಾದ ವೀರಶೆಟ್ಟಿ ಪಾಟೀಲ, ಶರಣಪ್ಪಾ ಮುದ್ದಾ ಹಾಗೂ ಇತರರು ಉಪಸ್ಥಿತರಿದ್ದರು.


ಸ್ವಯಂ ಸೇವಕಿ ಭವಾನಿ ಅವರು ಕಾರ್ಯಕ್ರಮ ನಿರೂಪಣೆಯನ್ನು ನಡೆಸಿಕೊಟ್ಟರು, ಅಶ್ವಿನಿ ಇವರು ಎಲ್ಲಾ ಸಭೀಕರನ್ನು ಸ್ವಾಗತಿಸಿದರು. ಅಲೋಕ ಪಾಟೀಲ ಇವರು ವಂದಿಸಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!