08/06/2025 11:47 PM

Translate Language

Home » ರಾಯಚುರ » ರಾಯಚೂರು|ಹಿಂದೂ ರಾಷ್ಟ್ರ ವಿರೋಧಿಸಿ ಸಮಾವೇಶ ಜ.30ರಂದು

ರಾಯಚೂರು|ಹಿಂದೂ ರಾಷ್ಟ್ರ ವಿರೋಧಿಸಿ ಸಮಾವೇಶ ಜ.30ರಂದು

Facebook
X
WhatsApp
Telegram

ರಾಯಚೂರು.27.ಜನವರಿ.25:- ಮಸ್ಕಿ: ಆರ್‌ಎಸ್‌ಎಸ್‌ನ ಹಿಂದೂ ರಾಷ್ಟ್ರ ವಿರೋಧಿಸಿ ಜ.30ರಂದು ಲಿಂಗಸೂಗೂರಿನಲ್ಲಿ ಜನತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಫ್ಯಾಸಿಸ್ಟ್ ವಿರೋಧಿ ಜನತಾ ರಂಗದ ಮುಖಂಡ ಸಂತೋಷ ದಿನ್ನಿ ಹೇಳಿದರು.ಲಿಂಗಸೂಗೂರು ಪಟ್ಟಣದ ಬೈಪಾಸ್ ರಸ್ತೆಯಲ್ಲಿನ ಆಯ್ದಕ್ಕಿ ಲಕ್ಕಮ್ಮ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು ವಿವಿಧ ಸ್ವಾಮೀಜಿಗಳು, ಪ್ರಗತಿಪರ ಸಂಘಟನೆಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ.

ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಮನುವಾದ ಸಿದ್ಧಾಂತದಿಂದ ನಮ್ಮ ಸಂವಿಧಾನಕ್ಕೆ ಧಕ್ಕೆ ಬಂದಿದೆ. ಸಂವಿಧಾನ ರಕ್ಷಣೆ ನಮ್ಮ ಮೂಲ ಉದ್ದೇಶವಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಗಾಂಧೀಜಿಯನ್ನು ಕೊಂದ ದಿನ ಜ.30 ಆಗಿದ್ದು ಅದೇ ದಿನ ಈ ಸಮಾವೇಶ ನಡೆಯಲಿದೆ. ಡಾ. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜೀನಾಮೆ ನೀಡಬೇಕು. ನಾಗರಿಕ ಕಾಯ್ದೆ ತಿದ್ದುಪಡಿ ವಾಪಾಸು, ಸಾರ್ವತ್ರಿಕ ಜನಗಣತಿ, ನಾಲ್ಕು ಧಾರ್ಮಿಕ ಸಂಹಿತೆಗಳು ವಾಪಾಸು ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಸಮಾವೇಶದಲ್ಲಿ ಆಗ್ರಹಿಸಲಾಗುವುದು’ ಎಂದರು.

ಮಾರುತಿ ಜಿನ್ನಾಪೂರ, ವೆಂಕಟೇಶ ನಾಯಕ, ತಿರುಪತಿ, ಚಂದ್ರಶೇಖರ ಇದ್ದರು.

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಲಿಂಗಸೂಗೂರಿನಲ್ಲಿ ಜನತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಫ್ಯಾಸಿಸ್ಟ್ ವಿರೋಧಿ ಜನತಾ ರಂಗದ ಮುಖಂಡ ಸಂತೋಷ ದಿನ್ನಿ ಹೇಳಿದರು.ಲಿಂಗಸೂಗೂರು ಪಟ್ಟಣದ ಬೈಪಾಸ್ ರಸ್ತೆಯಲ್ಲಿನ ಆಯ್ದಕ್ಕಿ ಲಕ್ಕಮ್ಮ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು  ಅಂದು ಮಾಹಿತಿ ನೀಡಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!