ಬೀದರ 19ಜನವರಿ.25:- ದಿನಾಂಕ:17-01-2025 ರಂದು ರಾಜ್ಯ 5ನೇ ಹಣಕಾಸು ಆಯೋಗದ ಸಭೆಯು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿಸಲಾಯಿತು. ಸಭೆಗೆ ಆಗಮಿಸಿದ ರಾಜ್ಯ 5ನೇ ಹಣಕಾಸು ಆಯೋಗದ ಅಧ್ಯಕ್ಷರು ಡಾ. ಸಿ. ನಾರಾಯಣಸ್ವಾಮಿ ಅವರು ಮಾತನಾಡಿ 5ನೇ ಹಣಕಾಸು ಆಯೋಗದ ಸ್ಥಿತಿಗತಿಯ ಬಗ್ಗೆ ವಿವರಿಸಿದರು.
ತದನಂತರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಗೆ ಸಂಬoಧಿಸಿದoತೆ 15ನೇ ಹಣಕಾಸು, ಲಿಂಕ್ ಡಾಕುಮೆಂಟ್, ರಾಜ್ಯ ಹಣಕಾಸು ಆಯೋಗದ ಪ್ರಗತಿ ಪರಿಶೀಲಿಸಿದರು. ಅಲ್ಲದೇ ಸದರಿಯವರು ಬೀದರ ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿಗಳ ಕರ ವಸೂಲಿಯು ಗಣನೀಯವಾಗಿ ಪ್ರಗತಿ ಸಾಧಿಸಿದೆ ಎಂದು ಸಭೆಯ ಗಮನಕ್ಕೆ ತಂದರು.
ಅದಲ್ಲದೇ ಗ್ರಾಮ ಪಂಚಾಯತಿಯ ಕರ ವಸೂಲಾತಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವೈಯಕ್ತಿಕ ಗಮನ ಹರಿಸಿ ಅಭಿಯಾನ ಜರುಗಿಸಿರುವುದನ್ನು ಅಧ್ಯಕ್ಷರು ಶ್ಲಾಘಿಸಿದರು.
ಆಯೋಗವು ನಗರ ಸ್ಥಳೀಯ ಸಂಸ್ಥೆಗಳ ಆರ್ಥಿಕ ಸ್ಥಿತಿಗತಿ ಬಗ್ಗೆ ಚರ್ಚಿಸಿದರು. ಯೋಜನಾ ನಿರ್ದೇಶಕರಾದ ಮೋತಿಲಾಲ ಅವರು ನಗರ ಸ್ಥಳೀಯ ಸಂಸ್ಥೆಗಳ ಆರ್ಥಿಕ ಸ್ಥಿತಿ ಹಾಗೂ ಯೋಜನೆ ಪ್ರಗತಿಯ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಅಧ್ಯಕ್ಷರು ಮಾತನಾಡಿ ಬೀದರ ಜಿಲ್ಲೆಯ ನೀರಿನ ಕರ ವಸೂಲಾತಿ ತುಂಬಾ ಕಡಿಮೆಯಾಗಿದೆಯೆಂದು ತಿಳಿಸಿದರು. ಈ ಕುರಿತು ಸಂಬAಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕೆಂದು ಸೂಚಿಸಿದರು.
ಸಭೆಯ ಅಧ್ಯಕ್ಷರಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಗಿರೀಶ ದಿಲೀಪ್ ಬದೋಲೆ ಅವರು ಸ್ವಾಗತಿಸಿ, ಮಾತನಾಡಿದರು. ಮುಖ್ಯ ಯೋಜನಾಧಿಕಾರಿಗಳು ಜಿಲ್ಲೆಯ ಸಾಮಾನ್ಯ ಮಾಹಿತಿ ಹಾಗೂ ಜಿಲ್ಲಾ ಪಂಚಾಯತನ ವಿವಿಧ ಯೋಜನೆಗಳ ಬಗ್ಗೆ ಸ್ವವಿವರವಾಗಿ ವಿವರಿಸಿದರು.
ಈ ಸಭೆಯಲ್ಲಿ ಮೊಹಮದ್ ಸನಾವುಲ್ಲಾ ಭಾ.ಆ.ಸೇ. (ನಿವೃತ್ತ) ಸದಸ್ಯರು 5ನೇ ರಾಜ್ಯ ಹಣಕಾಸು ಆಯೋಗದ, ಆರ್. ಎಸ್. ಪೋಂಡೆ ಸದಸ್ಯರು 5ನೇ ರಾಜ್ಯ ಹಣಕಾಸು ಆಯೋಗದ, ಎಂ. ಕೆ. ಕೆಂಪೇಗೌಡ ಸಮಾಲೋಚಕರು 5ನೇ ರಾಜ್ಯ ಹಣಕಾಸು ಆಯೋಗದ, ಸಿ. ಜೆ. ಸುಪ್ರಸನ್ನ ಸಮಾಲೋಚಕರು 5ನೇ ರಾಜ್ಯ ಹಣಕಾಸು ಆಯೋಗದ, ಕೆ. ಯಾಲಕ್ಕಿಗೌಡ ಅದ್ಯಕ್ಷರು ಆಪ್ತಕಾರ್ಯದರ್ಶಿ 5ನೇ ರಾಜ್ಯ ಹಣಕಾಸು ಆಯೋಗದವರು, ಉಪಕಾರ್ಯದರ್ಶಿಗಳು, ಯೋಜನಾ ನಿರ್ದೇಶಕರು, ತಾಲೂಕಿನ ಎಲ್ಲ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ ಬೀದರ ಹಾಗೂ ಇತರರು ಉಪಸ್ಥಿತರಿದ್ದರು.