ಬೆಂಗಳೂರು.20.ಮೇ.25:- ರಾಜ್ಯ ಸರ್ಕಾರ ಆಸ್ತಿ ಫಲಾನುಭವಿಗಳಿಗೆ ಒಂದು ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಿರುವ ಸರಕಾರ, ಆಸ್ತಿ ವಿವರ ವಹಿಯಲ್ಲಿ ಮಾಲಕನ ಹೆಸರು ಸೇರ್ಪಡೆ, ಬದಲಾವಣೆಗಾಗಿ ಪಾವತಿಸಬೇಕಾದ 1,000 ರೂ.ಗಳನ್ನು ನಾಲ್ಕು ಕಂತಿನಲ್ಲಿ ಪಾವತಿಸಲು ಅವಕಾಶ ಕಲ್ಪಿಸಿದೆ.
ರಾಜ್ಯ ಸರಕಾರಕ್ಕೆ 2 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಂಗಳವಾರ ಹೊಸಪೇಟೆ ಯಲ್ಲಿ ನಡೆಯಲಿರುವ ಸಾಧನಾ ಸಮಾವೇಶದಲ್ಲಿ 1 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಿದೆ.
ಈ ಆಸ್ತಿಗಳ ಮಾಲಕರು ತಲಾ 1 ಸಾವಿರ ರೂ.ಗಳನ್ನು ಗ್ರಾ.ಪಂ.ಗೆ ಮ್ಯುಟೇಶನ್ ಶುಲ್ಕವಾಗಿ ಪಾವತಿಸಬೇಕಿತ್ತು. ಕರ್ನಾಟಕ ಭೂಕಂದಾಯ ಅಧಿನಿಯಮ 1964ರ ಪ್ರಕರಣ 94(ಸಿ), 94 (ಸಿ.ಸಿ) ಹಾಗೂ 94 (ಡಿ) ಮತ್ತು ಕರ್ನಾಟಕ ಭೂ ಕಂದಾಯ ಕಾಯ್ದೆ 1961ರ ಕಲಂ 38(ಅ) ಅಡಿಯಲ್ಲಿ ನಿವೇಶನ ಮತ್ತು ಮನೆ ನೀಡುವ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ 9 ಮತ್ತು 11(ಎ) ವಿತರಿಸುವಾಗ ಮಾಲಕರ ಹೆಸರು ಸೇರ್ಪಡೆ, ಪರಿಷ್ಕರಣೆಗೂ ಅವಕಾಶ ನೀಡಿದೆ.