09/06/2025 7:29 PM

Translate Language

Home » ಲೈವ್ ನ್ಯೂಸ್ » ರಾಜ್ಯ ಕರ್ನಾಟಕ ವೈದ್ಯ ರತ್ನ ಪ್ರಶಸ್ತಿಗೆ ಅರ್ಜಿ ಅಹ್ವಾನ

ರಾಜ್ಯ ಕರ್ನಾಟಕ ವೈದ್ಯ ರತ್ನ ಪ್ರಶಸ್ತಿಗೆ ಅರ್ಜಿ ಅಹ್ವಾನ

Facebook
X
WhatsApp
Telegram

ಬೀದರ.16.ಫೆಬ್ರುವರಿ.25: -ಕರ್ನಾಟಕ ಸರಕಾರದ ಕರ್ನಾಟಕ ಜೀವವೈವಿದ್ಯ ಮಂಡಳಿ ಬೆಂಗಳೂರು, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರು ಪಾರಂಪರಿಕ ವೈದ್ಯ ಪರಿಷತ್ತು ಕರ್ನಾಟಕ ಬೆಂಗಳೂರು ಜಾಗೂ ಜಿಲ್ಲಾಡಳಿತ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಬರುವ ಮಾರ್ಚ.2, 3 ಮತ್ತು 4 ರಂದು ಬೀದರನಲ್ಲಿ ಕರ್ನಾಟಕ ರಾಜ್ಯ ಮಟ್ಟದ ಪಾರಂಪರಿಕ ವೈದ್ಯ ಸಮ್ಮೇಳನ ಆಯೋಜಿಸಲಾಗುತ್ತಿರುವುದರಿಂದ ವೈದ್ಯರಿಗೆ ರಾಜ್ಯ ಕರ್ನಾಟಕ ವೈದ್ಯ ರತ್ನ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೀದರ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಈ ಸಮ್ಮೇಳನದಲ್ಲಿ ಐದು ಜನ ಪಾರಂಪರಿಕ ವೈದ್ಯರಿಗೆ ಕರ್ನಾಟಕ ವೈದ್ಯ ರತ್ನ ಪ್ರಶಸ್ತಿ ನೀಡಲಾಗುತ್ತದೆ.

ಕನಿಷ್ಠ 20 ವರ್ಷ ಪಾರಂಪರಿಕ ವೈದ್ಯ ಕ್ಷೇತ್ರದಲ್ಲಿ ಗಣನೀಯ ಸೇವೆಗೈದ ಪಾರಂಪರಿಕ ವಐದ್ಯರು ತಮ್ಮ ಹೆಸರು, ಪೂರ್ಣ ವಿಳಾಸ, ಪಾರಂಪಾರಿಕ ಗುರುವಿನಲ್ಲಿ ಅಭ್ಯಾಸ, ಗಮನಾರ್ಹ ಸೇವೆ ಹಾಗು ಸಾಧನೆಗಳ ಕುರಿತು ಸಮಗ್ರ ದಾಖಲಾತಿಗಳ ಮಾಹಿತಿಯೊಂದಿಗೆ ಅಭ್ಯಾಸ, ಗಮನಾರ್ಹ ಸೇವೆ ಹಾಗೂ ಸಾಧನೆಗಳ ಕುರಿತು ಸಮಗ್ರ ದಾಖಲಾತಿಗಳ ಮಾಹಿತಿಯೊಂದಿಗೆ ಅರ್ಜಿಯನ್ನು ಅಧ್ಯಕ್ಷರು, ಪಾರಂಪರಿಕ ವೈದ್ಯ ರತ್ನ ಪ್ರಶಸ್ತಿ ಸಮಿತಿ, ಸಾಮಾಜಿಕ ಅರಣ್ಯ ವಿಭಾಗ ಐ.ಎಂ.ಎ.ಹಾಲ್ ಎದುರುಗಡೆ ಕೆ.ಇ.ಬಿ. ರಸ್ತೆ ಬೀದರ ಈ ವಿಳಾಸಕ್ಕೆ ದಿನಾಂಕ: 22-02-2025 ರೊಳಗಾಗಿ ತಲುಪುವಂತೆ ಕಳುಹಿಸಕೊಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!