24/06/2025 12:51 PM

Translate Language

Home » ಲೈವ್ ನ್ಯೂಸ್ » ರಾಜ್ಯಾದ್ಯಂತ ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬಿಡಿ-ಪುಸ್ತಕ ಹಿಡಿ ಕಾರ್ಯಕ್ರಮ.!

ರಾಜ್ಯಾದ್ಯಂತ ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬಿಡಿ-ಪುಸ್ತಕ ಹಿಡಿ ಕಾರ್ಯಕ್ರಮ.!

Facebook
X
WhatsApp
Telegram

ಬೆಂಗಳೂರು.24.ಜೂನ್.25:- ರಾಜ್ಯಾದ್ಯಂತ ಶಾಲಾ-ಕಾಲೇಜುಗಳಲ್ಲಿ `ಮೊಬೈಲ್ ಬಿಡಿ-ಪುಸ್ತಕ ಹಿಡಿ’  ಅರಿವಿನ ಅಭಿಯಾನವನ್ನು ಕಾರ್ಯಕ್ರಮ

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ. ರಾಮನಗರ ತಾಲ್ಲೂಕು, ಬಿಡದಿ ಹೋಬಳಿ, ಬನ್ನಿಕುಪ್ಪೆ(ಬಿ)ಕ್ಲಸ್ಟರ್ನಲ್ಲಿ ಸಮೂಹ ಸಂಪನ್ಮೂಲ ಶಿಕ್ಷಕರಾದ (ಸಿ.ಆರ್.ಪಿ) ಶ್ರೀ ಚಿಕ್ಕವೀರಯ್ಯ ಟಿ.ಎನ್ ಹಾಗೂ ಇವರ ಶಿಕ್ಷಕರ ತಂಡದ ವತಿಯಿಂದ ದಿನಾಂಕ:14.02.2025 ರಿಂದ “ಮೊಬೈಲ್ ಬಿಡಿ-ಪುಸ್ತಕ ಹಿಡಿ” ಅರಿವಿನ ಅಭಿಯಾನವನ್ನು ಪ್ರಾರಂಭಿಸಿದ್ದು, ಈ ಅಭಿಯಾನವು ವಿದ್ಯಾರ್ಥಿಗಳು/ಪೋಷಕರು ಹಾಗೂ ಸಾರ್ವಜನಿಕರು ಮೊಬೈಲ್ ಬಳಸುವ ಪ್ರಮಾಣವನ್ನು ಕಡಿಮೆಗೊಳಿಸಿ, ಪುಸ್ತಕ ಓದುವ ಅಭಿರುಚಿಗೆ ಪೂರಕವಾಗಿ ಜನಪ್ರಿಯವಾಗುತ್ತಿದೆ.

ಸದರಿ ಅಭಿಯಾನವು ರಾಜ್ಯಾದ್ಯಂತ ಪ್ರಭಾವ ಬೀರಿ ಸದ್ದು ಮಾಡುತ್ತಿದ್ದು, ಬಹುತೇಕ ಎಲ್ಲಾ ದೃಶ್ಯ/ಮುದ್ರಣ ಮಾಧ್ಯಮ/ಆಕಾಶವಾಣಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುತ್ತಿದೆ.

ಆದ್ದರಿಂದ, 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಇಡೀ ರಾಜ್ಯಾದ್ಯಂತ ಶಾಲಾ ಕಾಲೇಜುಗಳು ಆರಂಭದ ಮೊದಲ ದಿನದಿಂದಲೇ ವಿದ್ಯಾರ್ಥಿಗಳಿಗೆ ಶಾಲಾ ಪ್ರಾರ್ಥನಾ ಅವಧಿಯಲ್ಲಿ ಮತ್ತು ಪೋಷಕರು/ಸಾರ್ವಜನಿಕರಿಗೆ ಅನುಕೂಲಕರವಾದ ವೇಳೆಯಲ್ಲಿ ಈ ಅಭಿಯಾನ ಕುರಿತು ಜಾಗೃತಿ ಮೂಡಿಸುವ ಸಲುವಾಗಿ “ಮೊಬೈಲ್ ಬಿಡಿ-ಪುಸ್ತಕ ಹಿಡಿ” ಎಂಬ ವಿನೂತನ ಕಾರ್ಯಕ್ರಮದ ಬಗ್ಗೆ ಸರ್ಕಾರದಿಂದ ಸುತ್ತೋಲೆ ಹೊರಡಿಸಬೇಕೆಂದು ಮತ್ತು ಈ ಮುಖೇನ ಮೊಬೈಲ್ ಬಳಕೆಯಿಂದಾಗಬಹುದಾದ ದುಷ್ಪರಿಣಾಮ ಹಾಗೂ ಪುಸ್ತಕ ಓದುವುದರಿಂದ ವಿದ್ಯಾರ್ಥಿಗಳಿಂದ ಆಗುವ ಜ್ಞಾನವೃದ್ಧಿಗೆ ನಮ್ಮ ಸರ್ಕಾರ ಆದ್ಯತೆ ನೀಡಬೇಕೆಂದು ಕೋರಿರುತ್ತಾರೆ.

ಈ ಸಂಬಂಧ ಉಲ್ಲೇಖ(01) ಸರ್ಕಾರದ ಪತ್ರದಲ್ಲಿ ಲಗತ್ತಿಸಿರುವ ಪತ್ರದಂತೆ, ತಮ್ಮ ಕಾಲೇಜು/ವಿಭಾಗಗಳಲ್ಲಿ “ಮೊಬೈಲ್ ಬಿಡಿ-ಪುಸ್ತಕ ಹಿಡಿ” ಅರಿವಿನ ಅಭಿಯಾನವನ್ನು ಅನುಷ್ಠಾನಗೊಳಿಸಲು ಅಗತ್ಯ ಕ್ರಮವಹಿಸುವಂತೆ ಈ ಮೂಲಕ ತಿಳಿಸಲಾಗಿದೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!