ಬೆಂಗಳೂರು.30.ಮಾರ್ಚ್.25:- ಏಳು ವಿಶ್ವವಿದ್ಯಾಲಯಗಳ ಸ್ಥಿತಿಗತಿ ಅಧ್ಯಯನಕ್ಕೆ ರಚನೆ ಆಗಿರುವ ಸಂಪುಟ ಉಪಸಮಿತಿಯು ವರದಿ ಸಲ್ಲಿಸಿದ ಬಳಿಕ ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಅವರು ತಿಳಿಸಿದರು.
ಮಂಗಳೂರು ವಿಶ್ವವಿದ್ಯಾಲಯ 43ನೇ ಘಟಿಕೋತ್ಸವದಲ್ಲಿ ಸಚಿವರು ಡಾ. ಎಂ ಸಿ ಸುಧಾಕರ ಅವರು ಭಾಗಿ ಆಗಿದರು
ವಿಶ್ವವಿದ್ಯಾಲಯಗಳಿಗೆ ಸರ್ಕಾರ ಸ್ವಾಯತ್ತತೆ ನೀಡಿದೆ. ನಿರಂತರ ಆರ್ಥಿಕ ನೆರವು ನೀಡಲಾಗದು. ಈ ನಡುವೆ ವ ಗಳನ್ನು ಉಳಿಸುವುದು ಕೂಡ ನಮ್ಮ ಜವಾಬ್ದಾರಿ.
ವಿಶ್ವವಿದ್ಯಾಲಯಗಳ ವ್ಯವಸ್ಥೆಯನ್ನು ಮತ್ತೆ ಸೃಷ್ಟಿಸುವುದು ಸುಲಭವಲ್ಲ. ಸರ್ಕಾರ ಎಲ್ಲ ವಿಚಾರಗಳನ್ನು ಚರ್ಚಿಸಿ ತೀರ್ಮಾನಿಸಲಿದೆ ಎಂದರು.