ಬೆಂಗಳೂರು.20.ಮೇ.25:- ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳ ಬಲವರ್ಧನೆ, ಶಿಕ್ಷಣ ಸಂಸ್ಥೆಗಳಲ್ಲಿ ಉತ್ಕೃ ಪ್ರತಾ ಕೇಂದ್ರ ಸ್ಥಾಪನೆ ಹಾಗೂ ಸಂಶೋಧನಾ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಮುಂದಿನ ನಾಲ್ಕು ವರ್ಷದಲ್ಲಿ ವಿಶ್ವಬ್ಯಾಂಕ್ ನೆರವಿನೊಂದಿಗೆ 2,500 ಕೋಟಿ ರೂ. ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿತ್ತು.
ಈಗ ವಿಶ್ವ ಬ್ಯಾಂಕ್ ಬದಲಾಗಿ ಎಷ್ಯಾ ಬ್ಯಾಂಕ್ನೊಂದಿಗೆ ಮಾತುಕತೆ ನಡೆಯುತ್ತಿದೆ. ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್ಗಳಿಗೆ ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಮೂಲಸೌಕರ್ಯ ಕಲ್ಪಿಸುವುದು ಆದ್ಯತೆಯಾಗಿದೆ ಎಂದು ಡಾ. ಎಂ.ಸಿ.ಸುಧಾಕರ್ ಹೇಳಿದರು
2 ವರ್ಷದಲ್ಲಿ ಇಲಾಖೆ ಸಾಧನೆಗಳು
* ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಕ್ರಮವಾಗಿ 8 ಸಾವಿರ ರೂ. ಗೌರವಧನ ಹೆಚ್ಚಳ, ನಿವೃತ್ತಿ
ಸಮಯದಲ್ಲಿ 5 ಲಕ್ಷ ರೂ.ಗಳ ಇಡುಗಂಟು
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ವಿಶೇಷವಾಗಿ ಸಿಇಟಿಯಲ್ಲಿ ಡಿಜಿಟಲ್ ವ್ಯವಸ್ಥೆಯನ್ನು ಸಾಕಷ್ಟು ವಿಧಾನದಲ್ಲಿ ಉನ್ನತೀಕರಿಸುವ ಮೂಲಕ ವಿದ್ಯಾರ್ಥಿಗಳ ತಾಂತ್ರಿಕ ಸಮಸ್ಯೆಗೆ ಪರಿಹಾರ,
* ಪಾರದರ್ಶಕವಾಗಿ ಸಿಇಟಿ ನಡೆಸಲು ವೆಬ್ ಕಾಸ್ಟಿಂಗ್ ವ್ಯವಸ್ಥೆ ಜಾರಿ, ಸೀಟು ಬ್ಲಾಕಿಂಗ್, ಖಾಸಗಿ ಕಾಲೇಜುಗಳು ಯದ್ವಾತದ್ವಾ ಶುಲ್ಕ ಪಡೆಯುವುದನ್ನು ನಿಯಂತ್ರಿಸಲು ಹಾಗೂ ನಕಲು ಅಭ್ಯರ್ಥಿಗಳ ಹಾವಳಿ ತಡೆಗೆ ಫೇಸ್ ರೆಕಾಗ್ನಿಷನ್, ಮೊಬೈಲ್ ಆ್ಯಪ್, ಬಾಟ್ಬಾಟ್ ಹಲವು ಸುಧಾರಣೆ,
* ಸರ್ಕಾರಿ ಪದವಿ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಇಂಗ್ಲೆಂಡ್ ಪ್ರತಿಷ್ಠಿತ ವಿವಿಯಲ್ಲಿ ‘ಜೆವೆನಿಂಗ್ ಕರ್ನಾಟಕ ಮಾಸ್ಟರ್ಸ್ ಫೆಲೋಶಿಪ್
ಶಿಕ್ಷಣ ಇಲಾಖೆಯ ಬೋಧಕರಿಗೆ ಬೋಧನೆ ಮತ್ತು ಕಲಿಕೆಯನ್ನು ಉತ್ತಮಪಡಿಸಲು 3 ವರ್ಷದೊಳಗೆ ಪುನರ್ಮನನ ತರಬೇತಿ.
ವಿದ್ಯಾರ್ಥಿಗಳಿಗೆ ಮಾರುಕಟ್ಟೆ ಆಧಾರಿತ ಕೌಶಲ ತರಬೇತಿ ಒದಗಿಸಿ ಉದ್ಯೋಗಕ್ಕೆ ಸಜ್ಜುಗೊಳಿಸಲು ಕೈಗಾರಿಕೆಗಳ ಸಹಭಾಗಿತ್ವದಲ್ಲಿ ‘ಇಂಟರ್ನ್ಶಿಪ್ ಪ್ರೋಗ್ರಾಂ’ ಹಾಗೂ ವಿಶೇಷ ತರಬೇತಿ ಯೋಜನೆ. ಇದನ್ನು 44 ಕಾಲೇಜುಗಳಲ್ಲಿ ಆರಂಭ