ಬೆಂಗಳೂರು.18.ಜೂನ್.25:- ರಾಜ್ಯ ಸರ್ಕಾರ 2024-25ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದ/ ತತ್ಸಮಾನ ವೃಂದದ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರು ಮತ್ತು ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು/ತತ್ಸಮಾನ ವೃಂದ, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕರು/ತತ್ಸಮಾನ ವೃಂದದ ಸಾಮಾನ್ಯ ಅಧಿಕಾರಿಗಳ ವರ್ಗಾವಣೆಯ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಪತ್ರದಲ್ಲಿ 2024-25ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರನ್ನೊಳಗೊಂಡಂತೆ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಹೆಚ್ಚುವರಿ, ಕೋರಿಕೆ, ಪರಸ್ಪರ ಹಾಗೂ ಸಾಮಾನ್ಯ ವರ್ಗಾವಣೆಗಳನ್ನು ಸಂಬಂಧ ಬಗ್ಗೆ ಉಲ್ಲೇಖದ ಅಧಿಸೂಚನೆಯಲ್ಲಿ ನೀಡಿರುವ ಶಿಕ್ಷಕರ ವರ್ಗಾವಣೆ ಕಾಯ್ದೆಗಳನ್ವಯ ಹಾಗೂ ನಿರ್ದೇಶನ ಮತ್ತು ಮಾರ್ಗದರ್ಶನದಂತೆ ನಿಗಧಿಪಡಿಸಿರುವ ವರ್ಗಾವಣಾ ವೇಳ ಪಟ್ಟಿಯಂತೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿರುವ ಹಿನ್ನಲೆಯಲ್ಲಿ ವರ್ಗಾವಣೆಗಳನ್ನು ಗಣಕೀಕೃತ ಕೌನ್ಸಿಲಿಂಗ್ ಮೂಲಕ ಮಾಡಬೇಕಾಗಿರುವುದರಿಂದ ಸದರಿ ಅಧಿಸೂಚನೆಯಲ್ಲಿ ತಿಳಿಸಿರುವ ಎಲ್ಲಾ ನಿಯಮಗಳು, ಅಧಿಕೃತ https://schooleducation.karnataka.gov.in ಪ್ರಕಟಿಸಲಾಗಿದೆ ಹಾಗೂ ವರ್ಗಾವಣೆ ಬಗ್ಗೆ ಕಾಲಕಾಲಕ್ಕೆ ಬಂದಿರುವ ಅಧಿಸೂಚನೆ/ಆದೇಶ/ಸುತ್ತೋಲೆ ಮಾಹಿತಿಗಳನ್ನು ಸಹ ಮೇಲೆ ತಿಳಿಸಿದ ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟಿಸಿರುತ್ತಾರೆ. ಸದರಿ ವೆಬ್ ಸೈಟ್ ಮತ್ತು Transfer Cell -ಮೇಲ್ ಇಂದ ಸ್ವೀಕೃತ ಮೇಲ್ಗಳನ್ನು ಪರಿಶೀಲಿಸಿ, ಮಾಹಿತಿ ಪಡೆದುಕೊಂಡು ಅದರಂತೆ ಕ್ರಮವಹಿಸಲು ತಿಳಿಸಿದೆ.
ನಿಮ್ಮ ಜಿಲ್ಲಾ ವ್ಯಾಪ್ತಿಯಲ್ಲಿನ ಶಿಕ್ಷಕ ವೃಂದದವರಿಂದ ವರ್ಗಾವಣೆಗೆ ಸಂಬಂಧಿಸಿದಂತೆ ಹೆಚ್ಚು ಆಕ್ಷೇಪಣೆಗಳಿಗೆ ಅವಕಾಶ ನೀಡದೆ ಹಾಗೂ ಶಿಕ್ಷಕರ ಕುಂದು. ಕೊರತೆಗಳನ್ನು ಹಾಗೂ ಶಿಕ್ಷಕರ ವೇಯ್ಸಜ್ (ಶಿಕ್ಷಕರ ಸೇವಾ ಅಂಕಗಳು) ಅಂಕಗಳಿಗೆ ಸಂಬಂಧಿಸಿದಂತೆ ಕೂಲಂಕಷವಾಗಿ ಪರಿಶೀಲಿಸಿಕೊಂಡು, ವಿಭಾಗ ಮಟ್ಟದ ಕುಂದುಕೊರತೆ ವಿಭಾಗಕ್ಕೆ ಹೆಚ್ಚು ಆಕ್ಷೇಪಣೆಗಳು ಬರದಂತೆ, ನಿಮ್ಮ ಜಿಲ್ಲಾ ಹಂತದಲ್ಲಿಯೇ ಕೂಲಂಕಷವಾಗಿ ವರ್ಗಾವಣೆ ಕಾಯ್ದೆ / ನಿಯಮಗಳನ್ವಯ ಪರಿಶೀಲಿಸಿ, ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಕ್ರಮವಹಿಸುವುದು. ನ್ಯಾಯಾಲಯದ ಪ್ರಕರಣಗಳಿಗೆ ಅವಕಾಶ ಕಲ್ಪಿಸದಂತೆ ನಿಮ್ಮ ವೈಯಕ್ತಿಕ ಗಮನ ಹರಿಸುವುದು.
ಮುಂದುವರೆದು 2024-25ನೇ ಸಾಲಿನ ವರ್ಗಾವಣೆಯ ವೇಳಾಪಟ್ಟಿ ಅನ್ವಯ ಅಂತಿಮ ತಾತ್ಕಾಲಿಕ ಆದ್ಯತಾ ಪಟ್ಟಿಯಿಂದ ಭಾದಿತರಾದ ಶಿಕ್ಷಕರು ಈ ಕೆಳಕಂಡಂತೆ ಕುಂದು ಕೊರತೆ ವಿಭಾಗದ ಅಧಿಕಾರಿಗಳಾದ ವಿಭಾಗೀಯ ಕಾರ್ಯದರ್ಶಿಗಳು ಮತ್ತು ಪದನಿಮಿತ್ತ ಜಂಟಿನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಶಾಲಾ ಪರೀಕ್ಷೆ& ಮೌಲ್ಯ ನಿರ್ಣಯ ಮಂಡಳಿ, ಮೈಸೂರು ವಿಭಾಗ ಮೈಸೂರು ರವರಿಗೆ ಲಿಖಿತವಾಗಿ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು ಈ ಬಗ್ಗೆ ನಿಮ್ಮ ಜಿಲ್ಲೆಯಲ್ಲಿ ಹೆಚ್ಚಿನ ಪ್ರಚಾರ ಪಡಿಸುವಂತೆ ಸೂಚಿಸಿದೆ.


