ಬೆಂಗಳೂರು.31.ಡಿಸೆಂಬರ್.25: ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಚಳಿ, ಹವಾಮಾನ ಇಲಾಖೆಪ್ರಮುಖ ಮಾಹಿತಿ ನೋಡಿ! ರಾಜ್ಯದಲ್ಲಿ ಭಾರೀ ಚಳಿ ಗಾಳಿ ಜನರನ್ನು ಬೆಂಬಿಡದೇ ಕಾಡುತ್ತಲೇ ಇದೆ. ಮುಂಜಾನೆಯ ಮೈಕೊರೆಯುವ ಚಳಿಯಿಂದ ಜನರು ತತ್ತರಿಸಿಹೋಗಿದ್ದಾರೆ. ಅಲ್ಲದೆ ಸ್ವೆಟರ್ ಮೇಲೆ ಸ್ವೆಟರ್ ಹಾಕಿದ್ರು ಚಳಿ ಮಾತ್ರ ಕಡಿಮೆ ಆಗುತ್ತಿಲ್ಲ. ಈ ನಡುವೆ ಶೀತ ಅಲೆ, ಮಂಜು ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆ ಶೀತ ಅಲೆ ಬಗ್ಗೆ ಎಚ್ಚರಿಕೆ ನೀಡಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡಿನ ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಬೆಳಗಿನ ಜಾವದಲ್ಲಿ ಭಾರೀ ಮಂಜು ಬೀಳುವ ಮುನ್ಸೂಚನೆ ನೀಡಿದೆ. ಇದರೊಂದಿಗೆ ರಾಜ್ಯಾದ್ಯಂತ ಶೀತಗಾಳಿ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ. ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ.
ಗಮನಿಸಬೇಕಾದ ವಿಚಾರ ಏನೆಂದರೆ ಬೀದರ್ನಲ್ಲಿ ಕನಿಷ್ಠ ತಾಪಮಾನ ವರದಿಯಾಗಿದೆ. ಈ ಮೂಲಕ ಒಳನಾಡಿನ ಜನರು ತೀವ್ರ ಚಳಿಯ ಅನುಭವ ಪಡೆಯುತ್ತಿದ್ದಾರೆ. ಆದರೆ ಉಳಿದ ಕೆಲವು ಪ್ರದೇಶದಲ್ಲಿ ಶೀತ ಕಡಿಮೆ ಆಗಲಿದೆ ಎಂದು ತಿಳಿದುಬಂದಿದೆ. ಈ ನಡುವೆ ಬೀದರ್, ಧಾರವಾಡ, ಹಾವೇರಿ ಕಲಬುರಗಿ, ವಿಜಯಪುರ, ಬಾಗಲಕೋಟೆ, ಗದಗ ಜಿಲ್ಲೆಗಳಲ್ಲಿ ಶೀತಗಾಳಿ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ. ಆದರೆ ಸಾಮಾನ್ಯ ಶೀತ ಇರಲಿದೆ.
ಈ ಕಡೆ ಕರಾವಳಿ, ಮಲೆನಾಡು ಪ್ರದೇಶಗಳು ಒಣಹವೆಯಿಂದ ಕೂಡಿರುತ್ತವೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದ ಜೊತೆಗೆ ವಿವಿಧ ಕರಾವಳಿ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ ಎಂದು ಮಾಹಿತಿ ಇದೆ. ಹಾಗೆಯೇ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲ ಬೆಳಗಿನ ಮಂಜಿನೊಂದಿಗೆ ಭಾರೀ ಚಳಿಯನ್ನು ನಿರೀಕ್ಷಿಸಲಾಗಿದೆ.
ಜಿಲ್ಲಾವಾರು ಗರಿಷ್ಠ ಹಾಗೂ ಕನಿಷ್ಠ ತಾಪಮಾನ ವಿವರ
✓ಮಂಡ್ಯ: 31-16
✓ಮಡಿಕೇರಿ: 28-14
✓ರಾಮನಗರ: 29-15
✓ಹಾಸನ: 27-13
✓ಚಾಮರಾಜನಗರ: 30-14
✓ಚಿಕ್ಕಬಳ್ಳಾಪುರ: 26-14
✓ಕೋಲಾರ: 26-14
✓ತುಮಕೂರು: 27-14
✓ಉಡುಪಿ: 32-21
✓ಕಾರವಾರ: 33-20
✓ಚಿಕ್ಕಮಗಳೂರು: 26-13
✓ದಾವಣಗೆರೆ: 31-15
✓ಹುಬ್ಬಳ್ಳಿ: 30-13
✓ವಿಜಯಪುರ: 29-14
✓ಬೀದರ್: 28-12
✓ಕಲಬುರಗಿ: 31-14
✓ಬಾಗಲಕೋಟೆ: 30-14
✓ಚಿತ್ರದುರ್ಗ: 28-15
✓ಹಾವೇರಿ: 31-15
✓ಬಳ್ಳಾರಿ: 29-14
✓ಗದಗ: 29-13
✓ಕೊಪ್ಪಳ: 29-14
✓ರಾಯಚೂರು: 31-16
✓ಯಾದಗಿರಿ: 31-16
✓ಬೆಂಗಳೂರು: 27-16
✓ಮಂಗಳೂರು: 32-22
✓ಶಿವಮೊಗ್ಗ: 31-15
✓ಬೆಳಗಾವಿ: 29-16
✓ಮೈಸೂರು: 30-16
ಚಳಿಗಾಲಕ್ಕಾಗಿ ಸರಳ ಮತ್ತು ಪ್ರಾಯೋಗಿಕ ಜೀವನಶೈಲಿ ಸಲಹೆಗಳು
ಸ್ಮಾರ್ಟ್ ಉಡುಗೆ
ದೊಡ್ಡದಾಗಿ ಕಾಣದಂತೆ ಬೆಚ್ಚಗಿರಲು ಲೇಯರ್ಡ್ ಬಟ್ಟೆಗಳನ್ನು ಧರಿಸಿ. ಶೀತ ಗಾಳಿಯಿಂದ ರಕ್ಷಿಸಲು ಉಣ್ಣೆಯ ಸಾಕ್ಸ್, ಸ್ಕಾರ್ಫ್ಗಳು, ಕ್ಯಾಪ್ಗಳನ್ನು ಬಳಸಿ. ಚರ್ಮದ ಕಿರಿಕಿರಿಯನ್ನು ತಪ್ಪಿಸಲು ಒಳಗೆ ಹತ್ತಿ, ಹೊರಗೆ ಉಣ್ಣೆಯನ್ನು ಆದ್ಯತೆ ನೀಡಿ.
ಪೌಷ್ಟಿಕ ಆಹಾರವನ್ನು ಸೇವಿಸಿ
ಸೂಪ್ಗಳು, ರಸಂ, ತರಕಾರಿ ಸ್ಟ್ಯೂಗಳು, ಖಿಚಡಿಗಳನ್ನು ಸೇರಿಸಿ.ಬಾದಾಮಿ, ವಾಲ್ನಟ್ಸ್, ಖರ್ಜೂರ ಮತ್ತು ಅಂಜೂರದಂತಹ ಒಣ ಹಣ್ಣುಗಳನ್ನು ಸೇವಿಸಿ. ಶುಂಠಿ, ಮೆಣಸು, ಅರಿಶಿನ, ಬೆಳ್ಳುಳ್ಳಿಯಂತಹ ಬೆಚ್ಚಗಿನ ಮಸಾಲೆಗಳನ್ನು ಬಳಸಿ.
ಹೈಡ್ರೇಟೆಡ್ ಆಗಿರಿ
ತಣ್ಣೀರಿನ ಬದಲಿಗೆ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಹರ್ಬಲ್ ಟೀಗಳನ್ನು ಪ್ರಯತ್ನಿಸಿ (ಶುಂಠಿ ಚಹಾ, ತುಳಸಿ ಚಹಾ, ದಾಲ್ಚಿನ್ನಿ ಚಹಾ)
. ಹೆಚ್ಚು ಕೆಫೀನ್ ಮತ್ತು ತಂಪು ಪಾನೀಯಗಳನ್ನು ತಪ್ಪಿಸಿ.
ಚರ್ಮ ಮತ್ತು ಕೂದಲಿನ ಬಗ್ಗೆ ಕಾಳಜಿ ವಹಿಸಿ
ಡ್ರೈ ತಪ್ಪಿಸಲು ಪ್ರತಿದಿನ ಮಾಯಿಶ್ಚರೈಸರ್ ಅಥವಾ ತೆಂಗಿನ ಎಣ್ಣೆಯನ್ನು ಹಚ್ಚಿ ಚರ್ಮ. ತುಟಿ ಬಿರುಕು ಬಿಡುವುದನ್ನು ತಡೆಯಲು ಲಿಪ್ ಬಾಮ್ ಬಳಸಿ. ವಾರಕ್ಕೆ ಒಂದು ಅಥವಾ ಎರಡು ಬಾರಿ ನಿಮ್ಮ ಕೂದಲಿಗೆ ಎಣ್ಣೆ ಹಚ್ಚಿ ಶುಷ್ಕತೆಯನ್ನು ಕಡಿಮೆ ಮಾಡಿ.
ಚೆನ್ನಾಗಿ ನಿದ್ರೆ ಮಾಡಿ
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು 7-8 ಗಂಟೆಗಳ ನಿದ್ರೆ ಮಾಡಿ. ರಾತ್ರಿಯಲ್ಲಿ ಸರಿಯಾದ ಹೊದಿಕೆಗಳೊಂದಿಗೆ ನಿಮ್ಮನ್ನು ಬೆಚ್ಚಗಿಟ್ಟುಕೊಳ್ಳಿ.ತಡರಾತ್ರಿ ಸ್ಕ್ರೀನ್ ಸಮಯವನ್ನು ತಪ್ಪಿಸಿ.
ಆಕ್ಟಿವ್ ಆಗಿರಿ
ಲಘು ವ್ಯಾಯಾಮ, ಯೋಗ, ಸ್ಟ್ರೆಚಿಂಗ್ ಅಥವಾ ಬೆಳಗಿನ ನಡಿಗೆ ಮಾಡಿ. 15-20 ನಿಮಿಷಗಳ ಕಾಲ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ವಿಟಮಿನ್-ಡಿಗೆ ಸಹಾಯ ಮಾಡುತ್ತದೆ. ಶೀತದಿಂದಾಗಿ ದೈಹಿಕ ಚಟುವಟಿಕೆಯನ್ನು ಬಿಟ್ಟುಬಿಡುವುದನ್ನು ತಪ್ಪಿಸಿ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ
ಬೆಳಿಗ್ಗೆ ಜೇನುತುಪ್ಪ ಮತ್ತು ನಿಂಬೆಯೊಂದಿಗೆ ಬೆಚ್ಚಗಿನ ನೀರನ್ನು ಕುಡಿಯಿರಿ. ಮಲಗುವ ಮೊದಲು ಅರಿಶಿನ ಹಾಲು ಸೇರಿಸಿ. ಸೋಂಕುಗಳನ್ನು ತಪ್ಪಿಸಲು ಆಗಾಗ್ಗೆ ಕೈಗಳನ್ನು ತೊಳೆಯಿರಿ ಮತ್ತು ಬೆಚ್ಚಗಿಡಿ.






Any questions related to ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಚಳಿ,ಗಾಳಿ ಹವಾಮಾನ ಇಲಾಖೆಯ ಮುನ್ಸೂಚನೆಗಳು.?