09/06/2025 4:37 PM

Translate Language

Home » ಲೈವ್ ನ್ಯೂಸ್ » ರಸ್ತೆ ಅಪಘಾತದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರೆ ₹25,000 ಬಹುಮಾನ. ಕೇಂದ್ರ ಸರಕಾರ.!

ರಸ್ತೆ ಅಪಘಾತದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರೆ ₹25,000 ಬಹುಮಾನ. ಕೇಂದ್ರ ಸರಕಾರ.!

Facebook
X
WhatsApp
Telegram

ಭಾರತ ಸರ್ಕಾರ ಹೊಸ ಹೊಸ ಯೋಜನೆಗಳ ರೋಪಿಸ್ತಿದೆ ಈ ಕೇಂದ್ರ ರಸ್ತೆ ಸರಿಗೆ ಸಚಿವರಾದ ನಿತಿನ್ ಗಡ್ಕರಿ  ಅವರು ಈ ಒಂದು ಹೊಸ ಯೋಜನೆ ಬಗೆ ಮಾತನಾಡಿ ಹೇಳಿದರು.

ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರನ್ನು ಗೋಲ್ಡನ್ ಅವರ್ (ಮೊದಲ ಗಂಟೆ) ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸುವ ಉತ್ತಮ ನಾಗರಿಕರಿಗೆ ನೀಡುವ ಬಹುಮಾನದ ಮೊತ್ತವನ್ನು ಕೇಂದ್ರ ಸರ್ಕಾರ ₹5,000ರಿಂದ ₹25,000ಕ್ಕೆ ಹೆಚ್ಚಿಸಿದೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಬಗ್ಗೆ ಮಾತನಾಡಿ, ಗಾಯಾಳುಗಳಿಗೆ ಗಂಟೆಯೊಳಗೆ ತುರ್ತು ಚಿಕಿತ್ಸೆ ದೊರೆತರೆ ಚೇತರಿಕೆ ಸಾಧಿಸಲು ಉತ್ತಮ ಅವಕಾಶಗಳಿರುತ್ತದೆ ಎಂದು ಹೇಳಿದ್ದಾರೆ.

ಗೋಲ್ಡನ್ ಅವರ್’ ಎಂದರೆ ಅಪಘಾತವಾದ ನಂತರದ ಮೊದಲ ಗಂಟೆ, ಇದರಲ್ಲಿ ಸಮಯೋಚಿತ ಚಿಕಿತ್ಸೆ ನೀಡುವುದು ಜೀವ ಉಳಿಸಲು ಮುಖ್ಯವಾಗಿದೆ.

ಈ ಹೊಸ ಯೋಜನೆಯು ಜನರನ್ನು ಗಾಯಾಳುಗಳಿಗೆ ಸಹಾಯ ಮಾಡಲು ಪ್ರೇರೇಪಿಸುವ ನಿಟ್ಟಿನಲ್ಲಿ ಮೂಡಿಬಂದಿದ್ದು, ತುರ್ತು ಚಿಕಿತ್ಸಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಮತ್ತು ಅಪಘಾತದ ನಂತರದ ಮರಣ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶವಿದೆ.

ಇದೇ ಕಾರಣದಿಂದ, ಸಾರ್ವಜನಿಕರು ಹೆದರಿಕೆ ಅಥವಾ ಸಂಶಯವಿಲ್ಲದೆ ಗಾಯಾಳುಗಳಿಗೆ ಸಹಾಯ ಮಾಡಲು ಮುಂದೆ ಬರಬೇಕು ಎಂಬ ಸಂದೇಶವನ್ನು ಸರ್ಕಾರ ರವಾನಿಸಿದೆ.

ರಸ್ತೆ ಅಪಘಾತದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರೆ ₹25,000 ಬಹುಮಾನ

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!