|

ಯುವಕರು ದುಶ್ಚಟಗಳಿಂದ ದೂರವಿರಿ : ಮನಮತಪ್ಪ ಸ್ವಾಮಿ

ಔರಾದ.31.ಮೇ.25:- ಬೀದರ ವಿಶ್ವವಿದ್ಯಾಲಯ, ಬೀದರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಔರಾದ್  ವತಿಯಿಂದ ಆಯೋಜಿಸಿದ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದ ಸಮಾರೋಪ  ಸಮಾರಂಭದಲ್ಲಿ ಮಾತನಾಡುತ್ತಾ ಯುವಕರು ತಮ್ಮ ಪ್ರತಿಭೆಯನ್ನು ಸಾಧನೆಯನ್ನು ತೋರಿಸಿ ದೇಶದ ಉನ್ನತ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಬೇಕು ಹಾಗೂ ಪತ್ರಿಕೋದ್ಯಮದಲ್ಲಿ ಸಾಕಷ್ಟು ಅವಕಾಶಗಳಿವೆ ಮತ್ತು ವಿದ್ಯಾರ್ಥಿಗಳು ಗ್ರಾಮದ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಬೇಕೆಂದು ಕರೆಕೊಟ್ಟರು.

ಅತಿಥಿ ಸ್ಥಾನವನ್ನು ವಹಿಸಿದ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಅಧ್ಯಾಪಕರಾದ ಡಾ. ದಯಾನಂದ್ ಬಾವುಗೆ  ಮಾತನಾಡುತ್ತಾ ವಿದ್ಯಾರ್ಥಿಗಳು ತಂದೆ ತಾಯಿಗಳಿಗೆ ಗೌರವ ನೀಡುವುದರ ಮೂಲಕ ಮತ್ತು ಜೀವನದಲ್ಲಿ ಬದುಕುವ ಕಲೆಯನ್ನು ಅರಿತು ಕೊಂಡಾಗ ಮಾತ್ರ ಅತ್ಯುತ್ತಮವಾಗಿ ಭವಿಷ್ಯವನ್ನು ರೂಪಿಸಿಕೊಳ್ಳಬಹುದೆಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

ಕಾರ್ಯಕ್ರಮದ ಅಧ್ಯಕ್ಷೀಯ ಸ್ಥಾನವನ್ನು ವಹಿಸಿದಂತಹ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಅಂಬಿಕಾದೇವಿ ಕೊತ್ಮಿರ್ ಅವರು ಮಾತನಾಡುತ್ತಾ ಮಹಿಳೆಯರು ಸಬಲರಾಗಬೇಕು ನಾರಿ ಶಕ್ತಿ ಏನು ಎಂಬುದನ್ನು ನಾವು ಆಪರೇಷನ್ ಸಿಂಧೂರಿನಲ್ಲಿ ಕಂಡಿದ್ದೇವೆ  ಕರ್ನಲ್ ಸೂಫಿಯಾ ಖುರೇಶಿ ಮತ್ತು ವಿಂಗ್ ಕಮಾಂಡರ  ವೂಮೀಕಾಸಿಂಗ್ ಅವರು ನಡೆಸಿದ ಕಾರ್ಯವನ್ನು  ಶ್ಲಾಘಿಸಿದರು.

ಅದೇ ರೀತಿ ಸೇವಾ ಯೋಜನೆಯ ಅಧಿಕಾರಿಯದ ಪ್ರೊ. ವಿನಾಯಕ ಕೊತ್ಮಿರ್ ಅವರು ಪ್ರಾಸ್ತಾವಿಕ ಮಾತನಾಡಿ ಅತಿ ಅತಿಥಿ ಗಣ್ಯರನ್ನು ಸ್ವಾಗತಿಸಿದರು ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಸಂಜೀವಕುಮಾರ ತಾಂದಳೆ ಯವರು ನಿರೂಪಿಸಿದರೆ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ  ಶ್ರೀಮತಿ ಕೆ. ಅಂಬಿಕಾ ವಂದಿಸಿದರು ಈ ಕಾರ್ಯಕ್ರಮದಲ್ಲಿ ಶ್ರೀ ಮಹೇಶ ಕುಮಾರ .ಆರ್, ಡಾ.ಪದ್ಮಾಂಜಲಿ, ಕುಮಾರಿ ಗುಡದಮ್ಮ ಶ್ರೀ ವಿಠಲರಾವ್ ಕಾಂಬಳೆ ಶ್ರೀ ರಾಜಕುಮಾರ್ ಗಡ್ರೆ, ಶ್ರೀ ಮುಲಗೆ ಸುಬ್ಬಣ್ಣ, ಶ್ರೀ ಆನಂದ ಡೊಂಬಾಳೆ,  ಶ್ರೀ ಮಹೇಶಕುಮಾರ ಬೀದರಕರ್, ಡಾ ಮಿಲಿಂದ್, ಶ್ರೀ ಆನಂದ್ ಗಾಯಕವಾಡ, ಶ್ರೀ ದೇವೇಂದ್ರಪ್ಪ ತಡಕಲೆ,  ಶ್ರೀ ಆಮೆರ ಅಲಿ , ಶ್ರೀ ಜಾವೇದ್, ಸುನೀಲ ಮಾಳಗೆ ಹಾಗೂ  ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

Similar Posts

Leave a Reply

Your email address will not be published. Required fields are marked *