09/06/2025 7:33 PM

Translate Language

Home » ಲೈವ್ ನ್ಯೂಸ್ » ಯುಜಿಸಿ ನಿಯಮ,ಉದ್ಯಮಿಗಳು ಕುಲಪತಿಯಾಗುವ ಅವಕಾಶಕ್ಕೆ ವಿರೋಧ..!

ಯುಜಿಸಿ ನಿಯಮ,ಉದ್ಯಮಿಗಳು ಕುಲಪತಿಯಾಗುವ ಅವಕಾಶಕ್ಕೆ ವಿರೋಧ..!

Facebook
X
WhatsApp
Telegram

ಬೆಂಗಳೂರು. ರಾಷ್ಟ್ರಾದ್ಯಂತ ಚರ್ಚೆಗೆ ಕಾರಣ ವಾಗಿರುವ ವಿಶ್ವವಿದ್ಯಾಲಯ ಅನುದಾನ ಆಯೋಗ ಕರಡು 2025. ಯುಜಿಸಿ ಕರಡು-2025ರಲ್ಲಿರುವ ಕೈಗಾರಿಕಾ ಕ್ಷೇತ್ರದಲ್ಲಿ 10 ವರ್ಷ ಅನುಭವವುಳ್ಳವರು ಕುಲಪತಿ ಆಗಬಹುದು ಎಂಬ ನಿಯಮ ಸೇರಿದಂತೆ ಅನೇಕ ಶಿಕ್ಷಣ ವಿರೋಧಿ, ಜನವಿರೋಧಿ ನೀತಿಗಳಿವೆ ಎಂದು ವಿವಿಧ ಶಿಕ್ಷಣ ತಜ್ಞರು ವಿರೋಧಿಸಿದರು.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎಐಎಸ್‌ಇಸಿ) ಶನಿವಾರ ಹಮ್ಮಿಕೊಂಡಿದ್ದ ‘ವಿಶ್ವವಿದ್ಯಾಲಯದ ಸ್ವಾಯತ್ತತೆಯನ್ನು ಹಿಂಪಡೆಯೋಣ’ ದುಂಡುಮೇಜಿನ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಸಾರ್ವಜನಿಕ ಸಮಾಲೋಚನೆಗೆ ಹೊಸ ಕರಡನ್ನು ಬಿಡುಗಡೆ ಮಾಡಿದೆ. ಫೆ.5ರ ಒಳಗೆ ಸಲಹೆ, ಸೂಚನೆಗಳನ್ನು ನೀಡಲು ಅವಕಾಶ ನೀಡಿದೆ. ಈ ಕಾರಣದಿಂದ ದುಂಡುಮೇಜಿನ ಸಭೆ ಹಮ್ಮಿಕೊಳ್ಳಲಾಗಿತ್ತು.

ಕುಲಾಧಿಪತಿಗೆ ಸರ್ವ ಅಧಿಕಾರವನ್ನು ನೀಡಲಾಗಿದೆ. ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ಇದರಿಂದ ಹೆಚ್ಚಿನ ಅಧಿಕಾರ ಬರುವುದು ಒಂದು ಕಡೆಯಾದರೆ, ಖಾಸಗಿ ವಿಶ್ವವಿದ್ಯಾಲಯಗಳಿಗೆ ರಾಜ್ಯಪಾಲರು ಕುಲಾಧಿಪತಿ ಆಗಿರುವುದಿಲ್ಲ. ಅದನ್ನು ನಿಯಂತ್ರಿಸುವವರೇ ಇಲ್ಲದಾಗುತ್ತದೆ ಎಂಬ ಆತಂಕವು ವ್ಯಕ್ತವಾಯಿತು.

ಪ್ರಾಧ್ಯಾಪಕರ ನೇಮಕಾತಿಗೆ ನಿಗದಿ ಪಡಿಸಿದ ಅರ್ಹತೆಗಳೂ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಗೊಳಿಸುವ ಒತ್ತಡದ ಭಾಗವಾಗಿವೆ. ಎನ್‌ಇಪಿಯಲ್ಲಿ ನ್ಯಾಷನಲ್‌ ಕ್ರೆಡಿಟ್ ಫ್ರೇಂವರ್ಕ್‌ ನಿಗದಿ‍ಪಡಿಸಿರುವುದು ಇದಕ್ಕೆ ಸಾಕ್ಷಿ. ಎನ್‌ಇಪಿ ಅಳವಡಿಸದ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡಿದವರಿಗೆ ಮಾನ್ಯತೆ ಇಲ್ಲದಂತೆ ಮಾಡುವ ಹುನ್ನಾರ ಇದು ಎಂದು ತಜ್ಞರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಾದೇಶಿಕ ಭಾಷೆಗೆ ಮಾನ್ಯತೆ ಇಲ್ಲ, ರಾಜ್ಯ ಸರ್ಕಾರಕ್ಕೆ ‍ಪ್ರಾತಿನಿಧ್ಯ ಇಲ್ಲ. 3000ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದರೆ ಮಾನ್ಯತೆ ಇಲ್ಲ. ಈ ಎಲ್ಲವೂ ಶಿಕ್ಷಣ ತಜ್ಞರು ರೂಪಿಸಿದ ಕರಡಿನಂತೆ ಕಾಣುತ್ತಿಲ್ಲ. ಇದು ರಾಜಕೀಯ ಕರಡು. ಶಿಕ್ಷಣ ವ್ಯವಸ್ಥೆಯನ್ನು ಪೂರ್ಣವಾಗಿ ಕೇಂದ್ರ ಸರ್ಕಾರ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮಾಡಿದ ಕರಡು ಇದು. ಇದು ಅನುಮೋದನೆಗೊಂಡು ಜಾರಿಯಾದರೆ, ಅನೇಕ ವಿಶ್ವವಿದ್ಯಾಲಯಗಳು ಮುಚ್ಚಿ ಹೋಗಲಿವೆ ಎಂದು ಎಚ್ಚರಿಸಿದರು.

ದುರ್ಬಲವರ್ಗದವರು, ಮಹಿಳೆ, ಗ್ರಾಮೀಣ, ಹಿಂದುಳಿದವರ್ಗಗಳ, ಅಂಗವಿಕಲರನ್ನು ಶಿಕ್ಷಣದಿಂದ ವಂಚಿತರನ್ನಾಗಿಸಲು ಅಪ್ರಜಾತಾಂತ್ರಿಕ ಕ್ರಮದಲ್ಲಿ ಕರಡು ರೂಪಿಸಲಾಗಿದೆ. ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮಾತ್ರವಲ್ಲ ರಾಜ್ಯ ಸರ್ಕಾರ ಕೂಡ ಎಚ್ಚೆತ್ತುಕೊಂಡು ಇದರ ವಿರುದ್ಧ ಹೋರಾಟ ಮಾಡಬೇಕು ಎಂದು ಒತ್ತಾಯಿಸಿದರು.

ಈ ತರಹ ಅವ್ಯೈದ್ಯಾಣಿಕ್ ನಿಯಮಗಳು ಅಲ್ವಾಡಿಕೆ ಮಾಡಿದ್ರೆ ದೇಶದ ಭವಿಷ್ಯ ಸುಧಾರಿಸಲು ಕಷ್ಟ ಆಗುತ್ತೆ.!

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!