ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಹಾಗೂ ಹಿಂದುಗಳ ಹೊಸ ವರ್ಷದಲ್ಲಿ ರೈತರ ಜೀವನದಲ್ಲಿ ಹೊಸತನವನ್ನು ತರಲಿ…..
ಕಲ್ಯಾಣ ಕರ್ನಾಟಕದ ಶಾಶ್ವತ ನೀರಾವರಿ ಹೋರಾಟ ಸಮಿತಿ ಕಲಬುರ್ಗಿ ಬೀದರ್ ಯಾದಗಿರಿ
ಹಸಿವು ನೀಗಿಸುವ ಭೂಮಿಯು ಬೀಳು ಬಿಟ್ಟು ಫಲವೇನು ಮಧ್ಯಮ ಕೆರೆ ಸಣ್ಣಕೆರೆಗಳಲ್ಲಿ ಜಲವಿದ್ದು ಫಲವೇನು ಭೀಮಾ ಏತ ನೀರಾವರಿ, ಅಮರ್ಜಾ, ಚುಳೂಕಿ ನಾಲ, ಕಾರಂಜ, ಚಂದ್ರಂಪಳ್ಳಿ, ಕೆಳದಂಡೆ ಮುಲ್ಲಾಮಾರಿ, ಮೇಲ್ದಂಡೆ ಮುಲ್ಲಾಮರಿ, ಗಂಡೂರಿನಾಲ, ಬೆಣ್ಣೆ ತೊರೆ, ಹತ್ತಿಕುಣಿ ಅಣೆಕಟ್ಟುಗಳಿದ್ದು ಫಲವೇನು. ಅನ್ನದಾತನಿಗೆ ಸಿಗದ ಜೀವಜಲ ಇದ್ದರೇನು. ಹಸಿದವರಿಗೆ ಅನ್ನ ನೀಡಿ ದಣಿದವರಿಗೆ ನೀರು ಕೊಟ್ಟ ರೈತರ ಮೇಲೆ ಕರುಣೆ ಇರಲಿ. ಹಸಿರಿಂದ ನಾಡು ಕಂಗೊಳಿಸಲಿ ರೈತ ದೇಶದ ಅಸ್ತಿ ಅವನ ಏಳಿಗೆಯೇ ದೇಶದ ಸಂಪತ್ತು. ನೀರಿನ ಸಮರ್ಪಕ ಕಾಲುವೆಗಳ ಬಳಕೆ. ನೀರಾವರಿಯ ಉದ್ದೇಶಗಳ ಬಗ್ಗೆ. ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವು ಹಮ್ಮಿಕೊಳ್ಳಲಾಗಿದೆ ಇಂತಿ
ಭೀಮಶೆಟ್ಟಿ ಮುಕ್ಕಾ ಭೀಮಾ ಮಿಷನ್ ಅಧ್ಯಕ್ಷರು