ಯಳಂದೂರು.12.ಜೂನ.25:- ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಲೋಕಾಯುಕ್ತ ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕು
ಸಾರ್ವಜನಿಕ ಕುಂದುಕೊರತೆ ದೂರು ಸ್ವೀಕಾರ ಕಾರ್ಯಕ್ರಮ ಬುಧವಾರ ನಡೆಯಿತು.
ಒಟ್ಟು ನಾಲ್ಕು ದೂರುಗಳ ಬಂದಿರುತ್ತದೆ.ಹೊನ್ನೂರು ಗ್ರಾಮಪಂಚಾಯತಿಯಲ್ಲಿ ಮಾಹಿತಿಗೋಸ್ಕರ ಆರ್ ಟಿ ಐ ಮೂಲಕ ಅರ್ಜಿ ನೀಡಿರುತ್ತೇನೆ ಆದರೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವಿಳಂಬ ಮಾಡುತ್ತಿದ್ದಾರೆ ಎಂದು ಮರಿಸ್ವಾಮಿ ದೂರಿದರು.
ಯೋಜನಾಧಿಕಾರಿ ಚಾಮರಾಜನಗರ ದಿಂದ ಪಟ್ಟಣ ಪಂಚಾಯತಿಗೆ ಆದೇಶ ಪ್ರತಿಯೊಂದು ಬಂದಿರುತ್ತದೆ ಆದರೆ ಪಟ್ಟಣ ಪಂಚಾಯತಿಯವರು ಆದೇಶದ ಪ್ರತಿ ಕೊಡುತ್ತಿಲ್ಲವೆಂದು ವೈ ಎಸ್ ನಾರಾಯಣ್ ಚಾರ್ ದೂರಿದರು.
ಯಳಂದೂರು ಸಬ್ ರಿಜಿಸ್ಟರ್ ಕಛೇರಿಯಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದರು ರಂಗನಾಥ್, ಶಿವಕುಮಾರ್ ರವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೊನ್ನೂರು ಪುಟ್ಟಸ್ವಾಮಿ ದೂರಿದರು.
ನಬನ
ವೈ ಕೆ ಮೋಳೆ ಗ್ರಾಮದ ಅಂಬೇಡ್ಕರ್ ಪ್ರತಿಮೆ ಮುಂದೆ ಮದ್ಯ ಪ್ರಿಯರು ಕುಡಿದು ಅನೈರ್ಮಲ್ಯ ಉಂಟುಮಾಡುತ್ತಿದ್ದಾರೆಂದು ವೈ ಎನ್ ಪ್ರಕಾಶ್ ದೂರಿದರು.

ಲೋಕಾಯುಕ್ತ ಡಿವೈಎಸ್ ಪಿ. ಜಿ ಎಸ್ ಗಜೇಂದ್ರ ಪ್ರಸಾದ್ ಮಾತನಾಡಿ .
ಅಧಿಕಾರಿಗಳು ಸಾರ್ವಜನಿಕರ ಜೊತೆಗೆ ಸೌಜನ್ಯದಿಂದ ವರ್ತಿಸಬೇಕು ಅವರ ಕೆಲಸವನ್ನು ನಿಗದಿತ ಸಮಯದೊಳಗೆ ಮುಗಿಸಬೇಕು. ದ್ವೇಷಮಾಡಬಾರದು,
ಉತ್ತಮ ಆಡಳಿತ ಮಾಡಿ ಕಾನೂನಿಗೆ ಗೌರವ ಕೊಡಬೇಕು. ಭ್ರಷ್ಟಾಚಾರ ರಹಿತ ವಾತವರಣ ಸೃಷ್ಟಿಯಾಗಬೇಕು, ದಲ್ಲಾಳಿ ಗಳ ಮೂಲಕ ಸಾರ್ವಜನಿಕ ಕೆಲಸವಾಗಬಾರದು ಎಂದರು.
ತಾಲ್ಲೂಕಿನಲ್ಲಿ ಪ್ರಭಾರ ಅಧಿಕಾರಿಗಳು ಹೆಚ್ಚಾಗಿದೆ ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗುತ್ತದೆ.
ಈ ಸಂದರ್ಭದಲ್ಲಿ ಲೋಕಾಯುಕ್ತ ಸಬ್ ಇನ್ಸ್ಪೆಕ್ಟರ್
ಸಿ ಆರ್ ಶಶಿಕುಮಾರ್ ,ಲೋಹಿತ್ ಕುಮಾರ್.
ಕೃಷಿ ಅಧಿಕಾರಿ ಅಮೃತೇಶ್, ಚೆಸ್ಕಾಂ ಅಧಿಕಾರಿ ಲಿಂಗರಾಜು, ಇಂಜನಿಯರ್ ಸಂತೋಷ್, ಅಬಕಾರಿ ಅಧಿಕಾರಿ ಮಹದೇವ್, ತಾಲ್ಲೂಕು ಆರೋಗ್ಯ ಅಧಿಕಾರಿ ತನುಜಾ ಹಾಗೂ ಅಧಿಕಾರಿಗಳು ಹಾಜರಿದ್ದರು.