08/06/2025 8:17 PM

Translate Language

Home » ಲೈವ್ ನ್ಯೂಸ್ » ಯಳಂದೂರು ಪಟ್ಟಣ ಪಂಚಾಯತಿಯಲ್ಲಿ ಉಳಿತಾಯ ಬಜೆಟ್ ಮಂಡಿಸಿದರು.

ಯಳಂದೂರು ಪಟ್ಟಣ ಪಂಚಾಯತಿಯಲ್ಲಿ ಉಳಿತಾಯ ಬಜೆಟ್ ಮಂಡಿಸಿದರು.

Facebook
X
WhatsApp
Telegram

ಚಾಮರಾಜನಗರ.28.ಮಾರ್ಚ್.25:-ಯಳಂದೂರು: ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ಗುರುವಾರ 2024 -25 ಸಾಲಿನ ಪರಿಷ್ಕೃತ ಹಾಗೂ 2025-26 ನೇ ಸಾಲಿನ ಸಾಮಾನ್ಯ ಸಭೆ ಮತ್ತು ಆಯವ್ಯಯವು ಶಾಸಕ ಎ ಆರ್ ಕೃಷ್ಣಮೂರ್ತಿ ನೇತೃತ್ವದಲ್ಲಿ ಹಾಗೂ ಪಟ್ಟಣ ಪಂಚಾಯತಿ ಅಧ್ಯಕ್ಷೆ ಲಕ್ಷ್ಮೀ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಳದೆ ವರುಷದ ಅನುಪಾಲನವರದಿಯನ್ನು ಮುಖ್ಯಾಧಿಕಾರಿ ತಿಳಿಸಿದರು.

ಶಾಸಕರ ಅನುದಾನದಲ್ಲಿ ಪಟ್ಟಣ ಪಂಚಾಯತಿಗೆ ನೀಡಿರುವ 50 ಲಕ್ಷವನ್ನು ಟೆಂಡರ್ ಕರೆಯದೆ ಹಾಗೇ ಏಕೆ ಉಳಿಸಿಕೊಂಡಿದ್ದಾರಾ ಎಂದು ಶಾಸಕರು ಗರಂ ಆದರೂ.
ಪಪಂ ಮುಖ್ಯಾಧಿಕಾರಿ ಡಿಜಿಟಲ್ ಕೀ ಯನ್ನು  ದುರುಪಯೋಗ ಮಾಡಿಕೊಂಡಿರುವುದ ಬಗ್ಗೆ ತನಿಖೆ ನಡೆಯುತ್ತಿದ್ದು ವರದಿ ಬಂದ ಮೇಲೆ ಮುಂದಿನ ಕಾನೂನು ಕ್ರಮವನ್ನು ಜರುಗಿಸಲಾಗುತ್ತದೆ.


ಮೊತ್ತದ ಕೇರಿಯಲ್ಲಿ  ಒಂದೇ ಜಾಗಕ್ಕೆ ಇಬ್ಬರೂ ಪೋಟೋ ತೆಗೆಸಿ ನಮೂನೆ 3 ಏಕೆ ? ನೀಡಿದಿರಿ ಎಂದು ಶಾಸಕರು ತರಾಟೆಗೆ ತೆಗೆದುಕೊಂಡರು.


ಸರಕಾರಿ ಪದವಿ ಕಾಲೇಜಿಗೆ ದಾನಿಯೊಬ್ಬರೂ ಪಟ್ಟಣದ ಹೊರವಲಯದಲ್ಲಿ ಜಾಗ ನೀಡಿದರು ಅಲ್ಲಿ ಎರಡು ಕೋಟಿ ಅನುದಾನವನ್ನು ನೀಡಿದರು ಅಲ್ಲಿ ಸಮಸ್ಯೆಯಾಗಿರುವುದರಿಂದ ಆ ಸ್ಥಳವನ್ನು ಕ್ರೀಡಾಂಗಣ ಮಾಡಬಹುದು. ಪದವಿ ಕಾಲೇಜನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿಯೇ  ತಹಶೀಲ್ದಾರ್ ಬಸವರಾಜ್ ರವರೆಗೆ ಹೇಳಿ ಸ್ಥಳ ಪರಿಶೀಲನೆ ಮಾಡಲಾಗಿದೆ ಎರಡು ಕೋಟಿ ವೆಚ್ಚದಲ್ಲಿ ಕಾಲೇಜು ಆವರಣದಲ್ಲಿಯೇ ಮೂರು ಅಂತಸ್ತು ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತದೆ ಈ ಸಂಬಂಧ ಉನ್ನತ ಶಿಕ್ಷಣ ಸಚಿವರಾದ ಸುಧಾಕರ್ ರವರೆಗೆ ತಿಳಿಸಿಲಾಗಿದೆ ಎಂದು ಶಾಸಕ ಎ ಆರ್ ಕೃಷ್ಣಮೂರ್ತಿ ತಿಳಿಸಿದರು.

ನಂತರ ಪಪಂ ಅಧ್ಯಕ್ಷೆ ಲಕ್ಷ್ಮೀ ಮಲ್ಲು ರವರು ಬಜೆಟ್ ಮಂಡಿಸಿದರು
ಒಟ್ಟಾರೆ ಅಂದಾಜು‌ ವೆಚ್ಚ 12,10,01,827 ( ಹನ್ನೆರಡು ಕೋಟಿ ಹತ್ತು ಲಕ್ಷದ ಒಂದು ಸಾವಿರದ ಎಂಟು ನೂರ ಇಪ್ಪತ್ತೇಳು ರೂ) 2025 -26 ನೇ ಸಾಲಿಗೆ 15,82,289 ಉಳಿತಾಯದ ಆಯವ್ಯಯ ಬಜೆಟ್ ವಿಶೇಷ ಸಭೆಯಲ್ಲಿ ಎಲ್ಲಾ ಸದಸ್ಯರುಗಳ ಸಮ್ಮುಖದಲ್ಲಿ ಮಂಡಿಸಿದರು.

ಈ ಸಾಲಿನ ಆಯವ್ಯಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ  ಯಳಂದೂರು ಪಟ್ಟಣ ಪಂಚಾಯತಿಗೆ ನಿರೀಕ್ಷಿಸಲಾಗಿರುವ ಅನುದಾನಗಳಿಂದ ಹಾಗೂ ಪಟ್ಟಣ ಪಂಚಾಯತಿಯ ಸ್ವಂತ ಸಂಪನ್ಮೂಲಗಳಿಂದ ಅನೇಕ ಕಾರ್ಯಕ್ರಮಗಳನ್ನು ಉದ್ದೇಶಿಸಲಾಗಿದೆ.

ಒಳಚರಂಡಿ ವ್ಯವಸ್ಥೆಗೆ 46 ಕೋಟಿ ಗೆ ಸಭೆಯಲ್ಲಿ ಅನುಮೋದನೆ ಪಡೆದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ.

ಘನತ್ಯಾಜ್ಯ ವಸ್ತು ನಿರ್ವಹಣೆ ಮತ್ತು ವಾಹನ ಯಂತ್ರೋಪಕರಣ ಖರೀದಿ.
ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆ ಜಾರಿ.ಯಳಂದೂರು ಪಟ್ಟಣದಲ್ಲಿರುವ ತರಕಾರಿ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸುವುದು ತಾಲ್ಲೂಕು ಮಟ್ಟದ ಡಿಜಿಟಲ್ ಗ್ರಂಥಾಲಯ, ಎಲ್ಲಾ ಜನಾಂಗದ ಸಾರ್ವಜನಿಕ ಸ್ಮಶಾನ ಅಭಿವೃದ್ಧಿ
ಇನ್ನೂ ಅನೇಕ ಗುರಿಗಳನ್ನು ಇರಿಸಲಾಗಿದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಶಾಂತಮ್ಮ, ಪಪಂ ಮುಖ್ಯಾಧಿಕಾರಿ ಮಹೇಶ್ ಕುಮಾರ್ ಸದಸ್ಯರುಗಳಾದ ಮಹೇಶ್, ರಂಗನಾಥ್ ವೈ ಎಂ,ರವಿ, ಸುಶೀಲಾ, ಆರ್ ಪ್ರಭಾವತಿ,ಸವಿತಾ, ಮಹದೇವನಾಯಕ್ ,ಮಂಜು, ಮಹದೇವ, ನಾಮನಿರ್ದೇಶನ ಸದಸ್ಯರಾದ ಲಿಂಗರಾಜು ಮೂರ್ತಿ, ಶ್ರೀಕಂಠಸ್ವಾಮಿ, ಮುನಾವರ್ ಬೇಗಂ  ಹಾಗೂ ಸಿಬ್ಬಂದಿಗಳು ಹಾಜರಿದ್ದರು


ವರದಿ.ಪ್ರಸನ್ನಕುಮಾರ್ ಕೆಸ್ತೂರು

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!