09/06/2025 1:53 AM

Translate Language

Home » ಲೈವ್ ನ್ಯೂಸ್ » ಯಳಂದೂರು ತಾಲ್ಲೂಕಿನಲ್ಲಿ ಬಲಗೈ ಸಮುದಾಯ 95.6% ಸಮೀಕ್ಷೆ ಮುಗಿದಿದೆ.

ಯಳಂದೂರು ತಾಲ್ಲೂಕಿನಲ್ಲಿ ಬಲಗೈ ಸಮುದಾಯ 95.6% ಸಮೀಕ್ಷೆ ಮುಗಿದಿದೆ.

Facebook
X
WhatsApp
Telegram

ಯಳಂದೂರು: ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ಅಂಬೇಡ್ಕರ್ ಸೇವಾ ಸಮಿತಿ ಮತ್ತು ಆಚರಣಾ ಸಮಿತಿ ವತಿಯಿಂದ ರಾಜ್ಯ ಸರಕಾರ ನಾಗಮೋಹನ್ ದಾಸ್ ಒಳಮೀಸಲಾತಿಯ ಅಂಗವಾಗಿ ಜಾತಿ ಗಣತಿ ಕಾರ್ಯವನ್ನು ರಾಜ್ಯಾದ್ಯಂತ ನಡೆಸುತ್ತಿರುವ ಹಿನ್ನಲೆ ಯಳಂದೂರು ತಾಲ್ಲೂಕು ಬಲಗೈ ಸಮುದಾಯದ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದರು.

ದಲಿತ ಮುಖಂಡ ವಡಗೆರೆ ದಾಸ್ ಮಾತನಾಡಿ .
ಯಳಂದೂರು ತಾಲ್ಲೂಕಿನಲ್ಲಿ ಕಳೆದ ಹದಿನೈದು ದಿನಗಳಿಂದ ನಡೆಯುತ್ತಿರುವ ಜಾತಿ ಗಣತಿಯಲ್ಲಿ ಬಲಗೈ( ಹೊಲಯ)  ಸಮುದಾಯ 95.6% ಸಮೀಕ್ಷೆ ಮುಗಿದೆ. ಸಮೀಕ್ಷೆ ದಿನವನ್ನು ಮತ್ತೇ 29 ರ ತನಕ ಮುಂದೂಡಿದರಿಂದ 100% ಆಗುತ್ತದೆ.

ಒಟ್ಟು ಹೊಲಯ ಕುಟುಂಬ ಪಡಿತರ ಚೀಟಿಯ ಪ್ರಕಾರ 5956 ಕುಟುಂಬಗಳಿವೆ.ಇದರಲ್ಲಿ
ನೋಂದಾಯಸಿರುವ 5683.


ನೋಂದಣಿ ಆಗದೇ ಇರುವ 273. ಒಟ್ಟು 95.6% ಆಗಿದೆ. ಉಳಿದ 273 ಕುಟುಂಬದವರದು ತಾಂತ್ರಿಕ ದೋಷದಿಂದ ಕೂಡಿದೆ ಅದನ್ನು ಉಳಿದ ದಿನಗಳಲ್ಲಿ ಮುಗಿಸಿ 100% ಮಾಡುವುದಕ್ಕೆ ಪ್ರಯತ್ನ ಮಾಡುತ್ತಿದ್ದೇವೆ.

ಯಳಂದೂರು ತಾಲ್ಲೂಕಿನಲ್ಲಿ ಕಿನಕಹಳ್ಳಿ, ಕಂದಹಳ್ಳಿ, ಮೆಲ್ಲಹಳ್ಳಿ, ಅಗರ, ರಾಮಾಪುರ, ಅಗ್ರಹಾರ, ಬಿ ಆರ್ ಹಿಲ್ಸ್ ಗಳಲ್ಲಿ 100% ಆಗಿದೆ ಎಂದರು.

ಕಿನಕಹಳ್ಳಿ ರಾಚಯ್ಯ ಮಾತನಾಡಿ ನಮ್ಮ ಬಲಗೈ ಸಮುದಾಯದ ಮುಖಂಡರುಗಳಾದ ಎಚ್ ಸಿ ಮಹದೇವಪ್ಪ, ಸುನೀಲ್ ಬೋಸ್, ಎ ಆರ್ ಕೃಷ್ಣ ಮೂರ್ತಿರವರ ಮಾರ್ಗದರ್ಶನದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಒಳಮೀಸಲಾತಿ ಜಾತಿ ಗಣತಿಯಲ್ಲಿ ಬಲಗೈ ಸಮುದಾಯದ ಪ್ರತಿಯೊಬ್ಬರೂ ಹೊಲಯವೆಂದು ನಮೂದಿಸಿ ಎಂದು ಹೇಳಿದ್ದಾರೆ ಈ ಹಿನ್ನಲೆ ಯಳಂದೂರು ತಾಲ್ಲೂಕು 95%  ಸಮೀಕ್ಷೆ ಮುಗಿದಿದೆ.

ಜಿಲ್ಲೆಯಲ್ಲಿ ಪಡಿತರ ಚೀಟಿಯ ಪ್ರಕಾರ ಒಟ್ಟು 70243 ಕುಟುಂಬವಿದೆ ಒಟ್ಟು ಸದಸ್ಯರ ಸಂಖ್ಯೆ 2.33.603 ಇದೆ ಎಂದರು.


ಈ ಸಂದರ್ಭದಲ್ಲಿ ಕೆಸ್ತೂರು ಸಿದ್ದರಾಜು, ಗುಂಬಳ್ಳಿ ಮಹದೇವ್, ಯರಿಯೂರು ರಾಜಣ್ಣ, ಜಯರಾಮ್,ಹೊನ್ನೂರು ವೆಂಕಟೇಶ್, ಮಲ್ಲಿಕಾರ್ಜುನ, ಮದ್ದೂರು ಉಮಾಶಂಕರ್,  ವೈ ಕೆ ಮೋಳೆ ನಂಜುಂಡ, ಯರಿಯೂರು ನಾಗೇಂದ್ರ, ಗೌತಮ್ ಬಡಾವಣೆ ವಜ್ರಮುನಿ, ಶಶಿ ಹಾಜರಿದ್ದರು.

ವರದಿ‌.ಪ್ರಸನ್ನಕುಮಾರ್ ಕೆಸ್ತೂರು

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!