09/06/2025 9:03 AM

Translate Language

Home » ಯಾದಗಿರ » ಮೈಲಾಪುರದ ಮಲ್ಲಯ್ಯನ ಜಾತ್ರೆಯ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ. ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.

ಮೈಲಾಪುರದ ಮಲ್ಲಯ್ಯನ ಜಾತ್ರೆಯ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ. ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.

Facebook
X
WhatsApp
Telegram

ಯಾದಗಿರಿ.15.ಜನವರಿ.25.:-ಮೈಲಾಪುರದ ಮಲ್ಲಯ್ಯನ ಜಾತ್ರೆಯ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ. ಕುರಿ ಮರಿಗಳನ್ನು ಹಾರಿಸುವ ಪದ್ಧತಿ ಯಾದಗಿರಿ ಜಿಲ್ಲೆಯಾದ ನಂತರ ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.

ಆದರೆ ಈ ವರ್ಷ ಇಂದು ನಡೆದ ಮೈಲಾಪುರದ ಜಾತ್ರೆಯ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ ಕುರಿ ಮರಿಗಳು ಹಾರಿಸಿದ್ದು ಅನೇಕ ವರ್ಷಗಳಿಂದ ನಿಷೇಧವಿದ್ದರೂ ಇಂದು ಜಿಲ್ಲಾಡಳಿತ ಮುಂಜಾಗ್ರತವಾಗಿ ಮೈಲಾಪುರಕ್ಕೆ ತೆರಳುವ ಎಲ್ಲಾ ರಸ್ತೆಗಳು ಮಾರ್ಗ ಮಧ್ಯದಲ್ಲಿ ಪೊಲೀಸರು ಮುಂಜಾಗ್ರತವಾಗಿ ಚೆಕ್ ಪೋಸ್ಟ್ಗಳನ್ನು ನಿರ್ಮಿಸಿ ಕುರಿ ಮರಿಗಳು ಹೋಗದಂತೆ ತಡೆಯಬೇಕಾಗಿತ್ತು.

ಆದರೆ ಜಿಲ್ಲಾಡಳಿತದ ನಿಷ್ಕಾ ಳಜಿಯಿಂದ ಇವತ್ತು ಜಾತ್ರೆಯಲ್ಲಿ ಕುರಿ ಮರಿಗಳನ್ನು ಹಾರಿಸಿ ಕಾನೂನು ಬಾಹಿರವಾಗಿ ಯಾವುದೇ ಭಯವಿಲ್ಲದೆ ಮೌಡ್ಯಾಚರಣೆ ನಡೆದಿರುತ್ತದೆ. ಈ ಒಂದು ಘಟನೆಯನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣಾ ಖಂಡಿಸುತ್ತದೆ.

ಇನ್ನು ಮುಂದಾದರೂ ಜಿಲ್ಲಾಡಳಿತ ಇಡೀ ಜಿಲ್ಲೆಯಲ್ಲಿ ಮತ್ತು ವಿಶೇಷವಾಗಿ ಸುರಪೂರು ತಾಲೂಕಿನಲ್ಲಿ ಜನವರಿ ಮತ್ತು ಫೆಬ್ರವರಿ ತಿಂಗಳು ಅಂತ್ಯದವರೆಗೆ ದೇವತೆಗಳ ಹೆಸರಿನಲ್ಲಿ ಕುರಿ ಕೋಣಗಳನ್ನು ಬಲಿಕೊಡುವ ಪದ್ಧತಿ ನಡೆಯುತ್ತದೆ. 

ಇನ್ನು ಮುಂದಾದರು ಜಿಲ್ಲೆಯಲ್ಲಿ ನಡೆಯುವ ಇಂತಹ ಅನಿಷ್ಟ ಪದ್ಧತಿಗಳನ್ನು ಜಿಲ್ಲಾಡಳಿತ ತಡೆಯಬಹುದೇ?ಎಂದು ಕಾದು ನೋಡಬೇಕಾಗಿದೆ ರಾಜ್ಯ ಸಂಘಟನಾ ಸಂಚಾಲಕರು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣ ಬೆಂಗಳೂರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!