08/06/2025 7:53 PM

Translate Language

Home » ಲೈವ್ ನ್ಯೂಸ್ » ಮೇ.31 ರಂದು ಖಾನಾಪುರ ಜಂಕ್ಷನ್‍ನಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮ

ಮೇ.31 ರಂದು ಖಾನಾಪುರ ಜಂಕ್ಷನ್‍ನಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮ

Facebook
X
WhatsApp
Telegram


ಬೀದರ.29. ಮೇ.25:- ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಮೇ.31 (ಶನಿವಾರ) ಖಾನಾಪುರ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಸರಕು ಸಾಗಣೆ ಶೆಡ್ ನಿರ್ಮಾಣ ಹಾಗೂ ಲೆವೆಲ್ ಕ್ರಾಸಿಂಗ್ ಸಂಖ್ಯೆ 71 ರ ಬದಲಿಗೆ ರಸ್ತೆ ಕೆಳ ಸೇತುವೆ (RUB) ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆಂದು ದಕ್ಷಿಣ ಮಧ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಖಾನಾಪುರದಲ್ಲಿ ಸರಕು ಸಾಗಣೆ ಶೆಡ್ ನಿರ್ಮಾಣ ಯೋಜನೆ: ವಿಕಾರಾಬಾದ್ – ಬೀದರ್ – ಪಾರ್ಲಿ ರೈಲು ಮಾರ್ಗದಲ್ಲಿರುವ ಖಾನಾಪುರ ಜಂಕ್ಷನ್ ನಿಲ್ದಾಣವು, ಕಲಬುರಗಿ, ಬೀದರ್ ಮತ್ತು ಭಾಲ್ಕಿ ರೈಲ್ವೆ ನಿಲ್ದಾಣಗಳನ್ನು ಸಂಪರ್ಕಿಸುವ ಪ್ರಮುಖ ಕೇಂದ್ರೀಯ ನಿಲ್ದಾಣವಾಗಿದೆ. ಈ ನಿಲ್ದಾಣವು ಜಂಕ್ಷನ್‍ನಾಗಿ ಇರುವ ಕಾರಣ, ಸರಕು ರೈಲುಗಳ ಚಲನೆಗೆ ಅನುಕೂಲಕರವಾಗಿದೆ.

ಇಂತಹ ಪ್ರಾಮುಖ್ಯತೆಯ ಹಿನ್ನೆಲೆಯಲ್ಲಿ, ಖಾನಾಪುರದಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಹೊಸ ಸರಕು ಸಾಗಣೆ ಶೆಡ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಕಾಮಗಾರಿ ಜೂನ್ 2026 ರೊಳಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ.


ಲೆವೆಲ್ ಕ್ರಾಸಿಂಗ್ ಸಂಖ್ಯೆ 71 ಬದಲಿಗೆ ರಸ್ತೆ ಕೆಳ ಸೇತುವೆ (RUB) ನಿರ್ಮಾಣ: ಸಿಕಂದರಾಬಾದ್ ವಿಭಾಗದ ವಿಕಾರಾಬಾದ್ – ಪಾರ್ಲಿ ವೈಜನಾಥ್ ಮಾರ್ಗದಲ್ಲಿರುವ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 71, ಭಾಲ್ಕಿ ನಿಲ್ದಾಣದ ಬಳಿ ಇದ್ದು, ಭಾಲ್ಕಿ ಮತ್ತು ಬೀದರ್ ಪಟ್ಟಣಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಮಾರ್ಗದಲ್ಲಿದೆ.

ಈ ಮಾರ್ಗದ ವಾಹನ ಸಂಚಾರ ದಟ್ಟವಾಗಿದ್ದು, ಲೆವೆಲ್ ಕ್ರಾಸಿಂಗ್ ಗೇಟ್ ನಿಂದ ಆಗುವ ತಡೆಗಳನ್ನು ನಿವಾರಿಸಲು 10.85 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕೆಳ ಸೇತುವೆ (RUB ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈ ಸೇತುವೆ ನಿರ್ಮಾಣದಿಂದ ಭಾಲ್ಕಿ ಮತ್ತು ಬೀದರ್ ನಡುವಿನ ವಾಹನ ಸಂಚಾರ ಸುಗಮವಾಗಲಿದ್ದು, ರಸ್ತೆ ಹಾಗೂ ರೈಲು ಪ್ರಯಾಣಿಕರ ಸುರಕ್ಷತೆ ಹೆಚ್ಚಳವಾಗುತ್ತದೆ. ಜೊತೆಗೆ, ಪ್ರಯಾಣದ ಸಮಯವೂ ಕಡಿಮೆಯಾಗಲಿದೆ.


ಈ ಕಾರ್ಯಕ್ರಮದಲ್ಲಿ ಗಣ್ಯರು ಮತ್ತು ಹಿರಿಯ ರೈಲ್ವೆ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆಂದು ಅವರು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!