08/06/2025 9:48 PM

Translate Language

Home » ಲೈವ್ ನ್ಯೂಸ್ » ಮಾ.22 ರಂದು”ಅಖಂಡ ಕರ್ನಾಟಕ ಬಂದ್” ಡಿಸಿಎಂ ಡಿಕೆಶಿ ಹೇಳಿದ್ದೇನು?

ಮಾ.22 ರಂದು”ಅಖಂಡ ಕರ್ನಾಟಕ ಬಂದ್” ಡಿಸಿಎಂ ಡಿಕೆಶಿ ಹೇಳಿದ್ದೇನು?

Facebook
X
WhatsApp
Telegram

ಬೆಂಗಳೂರು.20.ಮಾರ್ಚ.25:- ರಾಜ್ಯದ ಗಡಿಭಾಗಜೆಲೆಯೆಲ್ಲಿ ಬೆಳಗಾವಿಯೆಲ್ಲಿ ಕೆಎಸ್‌ಆರ್ಟಿಸಿ ಕಂಡಕ್ಟರ್ ಮೇಲೆ ಮರಾಠಿಗರು ಹಲ್ಲೆ ಮಾಡಿದನ್ನು ಖಂಡಿಸಿ, ಇದೇ ಮಾರ್ಚ್ 22 ರಂದು ಅಖಂಡ ಕರ್ನಾಟಕ ಬಂದ್ ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿವೆ. ಅಲ್ಲದೆ ಮಾರ್ಚ್ 22 ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಿದ್ದು, ಈ ಕುರಿತು ವಿಧಾನ ಪರಿಷತ್ತಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಸದ್ಯಕ್ಕೆ ಬಂದ್ ಅವಶ್ಯಕತೆ ಇರಲಿಲ್ಲ.

ಸಂಜೆ ವೇಳೆಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಕುರಿತು ತೀರ್ಮಾನಿಸಲಾಗುತ್ತದೆ ಎಂದು ತಿಳಿಸಿದರು.

ಪರಿಷತ್ ನಲ್ಲಿ ಕನ್ನಡ ಸಂಘಟನೆಗಳು 22ನೇ ತಾರೀಕು ಕರ್ನಾಟಕ ಬಂದ್ ಘೋಷಣೆ ಮಾಡಿದ್ದಾರೆ. ಅದೇ ದಿವಸ ಲಕ್ಷಾಂತರ ವಿದ್ಯಾರ್ಥಿಗಳು SSLC ಪರೀಕ್ಷೆ ಬರೆಯುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಆತಂಕದಲ್ಲಿ ಇದ್ದಾರೆ. ಈ ರೀತಿ ಬಂದ್ ಆಚರಣೆ ಆಗಿದ್ದೆ ಆದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ.ಅದಕ್ಕೆ ಸರ್ಕಾರದ ಕ್ರಮ ಏನು? ಎಂದು ಪರಿಷತ್ ನಲ್ಲಿ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಡಿಸಿಎಂ ಡಿಕೆ ಶಿವಕುಮಾರ್ ಬಂದ್ ಗಳನ್ನು ನಾವು ಎನ್ ಕರೆಜ್ ಮಾಡುವುದಿಲ್ಲ.ಈ ಬಗ್ಗೆ ಕನ್ನಡಪರ ಸಂಘಟನೆಗಳಿಗೆ ತಿಳುವಳಿಕೆ ಕೊಡುತ್ತೇವೆ ಬಂದ್ ಸರಿ ಇಲ್ಲ ಅಂತ ನಾವು ಅವರಿಗೆ ಹೇಳುತ್ತೇವೆ.

ಕರ್ನಾಟಕ ಬಂದ್ ಸದ್ಯಕ್ಕೆ ಅವಶ್ಯಕತೆ ಇರಲಿಲ್ಲ. ಅಲ್ಲದೆ ಮಾರ್ಚ್ 22 ರಂದು ಕರ್ನಾಟಕ ಬಂದ್ ಬಗ್ಗೆ ಸಂಜೆ ಅಧಿಕಾರಿಗಳ ಜೊತೆಗೆ ಮಾತನಾಡಿ ತೀರ್ಮಾನಿಸುತ್ತೇವೆ ಎಂದು ತಿಳಿಸಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!