09/06/2025 4:18 PM

Translate Language

Home » ಲೈವ್ ನ್ಯೂಸ್ » ಮಾರ್ಚ.21 ರಿಂದ ಏಪ್ರಿಲ್.4 ರವರೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆ:

ಮಾರ್ಚ.21 ರಿಂದ ಏಪ್ರಿಲ್.4 ರವರೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆ:

Facebook
X
WhatsApp
Telegram

>ಮಾರ್ಚ.21 ರಿಂದ ಏಪ್ರಿಲ್.4 ರವರೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆ:
>ಪರೀಕ್ಷೆಗೆ ಜಿಲ್ಲಾಡತದಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ-ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ.

ಬೀದರ.19.ಮಾರ್ಚ.25:-ಮಾರ್ಚ್.21 ರಿಂದ ಏಪ್ರಿಲ್.4 ರವರೆಗೆ ನಡೆಯಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

1. ಮಾರ್ಚ.21 ರಂದು ಪ್ರಥಮ ಭಾಷೆ,

2. ಮಾರ್ಚ.24 ರಂದು ಗಣಿತ,

3. ಮಾರ್ಚ.26 ರಂದು ದ್ವಿತೀಯ ಭಾಷೆ,

4. ಮಾರ್ಚ.29 ರಂದು ಸಮಾಜ ವಿಜ್ಞಾನ,

5. ಏಪ್ರಿಲ್.2 ರಂದು ವಿಜ್ಞಾನ.

6. ಏಪ್ರಿಲ್.4 ರಂದು ತೃತೀಯ,

…….ಭಾಷೆಗೆ ಪ್ರಥಮ ಬಾರಿಗೆ 25409, ಖಾಸಗಿ ಅಭ್ಯರ್ಥಿಗಳು 840, ಪುನರಾವರ್ತಿತ 2353 ಸೇರಿ ಒಟ್ಟು 28602 ವಿದ್ಯಾರ್ತಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.


SSLC ಎಸ್‌ಎಸ್‌ಎಲ್‌ಸಿ ಪರೀಕ್ಷೆ-01ಕ್ಕೆ ನೊಂದಾಯಿಸಿರುವ ಒಟ್ಟು ಶಾಲೆಗಳು 571, ಇದ್ದು, 91 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದ್ದು, ಕೊಠಡಿಗಳ ಒಟ್ಟು ಸಂಖ್ಯೆ 1264 ಇದ್ದು ಇದಕ್ಕೆಲ್ಲ ಸಿ.ಸಿ. ಟಿವಿ ಅಳವಡಿಸಲಾಗಿರುತ್ತದೆ.

ವೆಬ್‌ಕಾಸ್ಟಿಂಗ್‌ಗಾಗಿ ಇಂಟರ್ನೆಟ್ ಸೌಲಭ್ಯ ಹೊಂದಿರುವ ಕೇಂದ್ರಗಳ ಸಂಖ್ಯೆ 91 ಇದ್ದು, ಪ್ರಶ್ನೆ ಪತ್ರಿಕೆಗೆ ವಿತರಣೆಗಾಗಿ ರಚಿಸಲಾದ ಮಾರ್ಗಗಳ ಸಂಖ್ಯೆ 47 ಇದ್ದಿರುತ್ತವೆಂದರು.
ಮಾರ್ಚ್/ಏಪ್ರಿಲ್-2025 ರ ಎಸ್.ಎಸ್.ಎಲ್.ಸಿ. ಪರೀಕ್ಷೆ-01 ರ ಕುರಿತು ಮಾಡಿರುವ ಸಿದ್ಧತೆಗಳು: ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಮೂಲಭೂತ ಸೌಲಭ್ಯಗಳು ಇರುವುದನ್ನು ಖಾತ್ರಿ ಪಡಿಸಿಕೊಳ್ಳಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೇರಾಗಳನ್ನು ಕಡ್ಡಾಯವಾಗಿ ಅಳವಡಿಸಲು ಕ್ರಮವಹಿಸಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಮುಖ್ಯಅಧೀಕ್ಷಕರ ಮತ್ತು ಪ್ರಶ್ನೆ ಪತ್ರಿಕೆ ಅಭಿರಕ್ಷಕರ ನೇಮಕಾತಿ ಮಾಡಲಾಗಿದೆ.

ಬೀದರ ಜಿಲ್ಲೆಯಲ್ಲಿ 91 ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳನ್ನು ವಿತರಿಸಲು ಒಟ್ಟು 47 ಮಾರ್ಗಗಳನ್ನು ರಚಿಸಿಕೊಳ್ಳಲಾಗಿದೆ. ಪರೀಕ್ಷಾ ಪಾವಿತ್ಯತೆಯನ್ನು ಕಾಪಾಡಿ ಪರೀಕ್ಷೆಗಳು ವ್ಯವಸ್ಥಿತವಾಗಿ ನಡೆಯುವುದನ್ನು ಖಾತ್ರಿ ಪಡಿಸಲು ಜಿಲ್ಲಾ ಮಟ್ಟದಲ್ಲಿ ವೇಬ್‌ಕಾಸ್ಟಿಂಗ್ (Wಇಃ ಅಂSಖಿIಓಉ) ಮಾಡಲು ಪ್ರತಿ 05 ಪರೀಕ್ಷಾ ಕೇಂದ್ರಗಳಿಗೆ ಒಂದರoತೆ ತಂಡಗಳನ್ನು ರಚಿಸಿ ಜಿಲ್ಲಾ ಪಂಚಾಯತ ಬೀದರದಲ್ಲಿ ವೇಬಕಾಸ್ಟಿಂಗ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಲು ಕಲಂ 144 ಜಾರಿ ಮಾಡಲಾಗಿದೆ. ಪರೀಕ್ಷಾ ಸಿಬ್ಬಂದಿಯನ್ನು ಹೊರತುಪಡಿಸಿ ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಅನಧೀಕೃತ ವ್ಯಕ್ತಿಯನ್ನು ಪ್ರವೇಶಿಸಲು ನಿರ್ಭಂಧಿಸಿದೆ.

ಮೋಬೈಲ್ ಫೋನ್ ಹಾಗೂ ಇನ್ನಿತರ ಡಿಜಿಟಲ್ ಉಪಕರಣಗಳನ್ನು ಬಳಸವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ತಾಲ್ಲೂಕಿಗೆ ಒಂದರoತೆ ಸರದಿ ಪದ್ದತಿಯಲ್ಲಿ ಶಿಕ್ಷಣ ಇಲಾಖೆ ಹೊರತು ಪಡಿಸಿ ಅನ್ಯ ಇಲಾಖೆಯ ಅಧಿಕಾರಿಗಳನ್ನಾಗಿ ಜಾಗೃತದಳ ಅಧಿಕಾರಿಗಳಾಗಿ ನೇಮಿಸಿ 05 ತಂಡಗಳನ್ನು ರಚಿಸಲಾಗಿದೆ.

ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಡಯಟನ ಅಧಿಕಾರಿಗಳನ್ನು ಒಳಗೊಂಡoತೆ ತಾಲ್ಲೂಕಿಗೆ ಒಂದರoತೆ 05 ತಂಡಳನ್ನು ವಿಚಕ್ಷಣ ಜಾಗೃತ ದಳವೆಂದು ನೇಮಿಸಲಾಗಿದೆ.

ಬೇಸಿಗೆ ಅವಧಿಯಲ್ಲಿ ಶಖೆ ಹೆಚ್ಚಾಗಿರುವುದರಿಂದ ಆರೋಗ್ಯ ಇಲಾಖೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿoದ ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಓಆರ್‌ಎಸ್ ನೀಡಲು ಸೂಚಿಸಲಾಗಿದೆ, ಹಾಗೂ 108 ಸೆವೇಯನ್ನು ಪರೀಕ್ಷಾ ಕೇಂದ್ರಗಳ ಸಮಿಪ ಸಿಗುವ ಹಾಗೆ ಕ್ರಮವಹಿಸಲಾಗಿದೆ.

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದವರೆಗೆ ಪ್ರವೇಶ ಪತ್ರ ಸಾದರು ಪಡಿಸಿ ಉಚಿತವಾಗಿ ಪ್ರಯಾಣಿಸಲು ಬಸ್ ಸೌಲಭ್ಯ ಪಡೆಯಬಹುದಾಗಿದೆ. ಯಾವುದೇ ಆತಂಕ ವಿಲ್ಲದೇ ಪರೀಕ್ಷೆಯನ್ನು ಬರೆಯಲು ಎಲ್ಲಾ ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತ ವತಿಯಿಂದ ಶುಭಹಾರೈಸಿರುತ್ತಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!