ಮಾಜಿ ಸೈನಿಕರಿಗೆ, ಹಿರಿಯ ನಾಗರಿಕರಿಗೆ ಒಂದು ದಿವಸದ ಆರೋಗ್ಯಕರ ಹಾಗೂ ಸುಖಕರ ಜೀವನದ ವಿಷಯ ಕುರಿತು ಉಪನ್ಯಾಸ
ಬೀದರ.16.ಜುಲೈ.25:- ಬೀದರ್ ಜಿಲ್ಲೆಯ ಎಲ್ಲಾ ಮಾಜಿ ಸೈನಿಕರಿಗೆ, ಹಿರಿಯ ನಾಗರಿಕರಿಗೆ ಮತ್ತು ಅವರ ಕುಟುಂಬಸ್ಥರಿಗೆ ” ಒಂದು ದಿವಸದ ಆರೋಗ್ಯಕರ ಹಾಗೂ ಸುಖಕರ ಜೀವನದ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ
ಮುಂಬೈನ ಸುಪ್ರಸಿದ್ಧ ಹಾಗು ಅನುಭವಿ ವೈದ್ಯರಾದ ಬಿ.ಕೆ. ಡಾ|| ಸಚಿನ್ ಪರಬ (MBBS, MBA, M.Sc, PDCR) ಅವರು ಜುಲೈ 16 ರಂದು ಬೆಳಗ್ಗೆ 10 ಗಂಟೆಗೆ ನಗರದ ಬ್ರಹ್ಮಕುಮಾರಿಸ ಪಾವನಧಾಮ ಜೆಪಿ ನಗರ ಜನವಾಡ ರಸ್ತೆ ಬೀದರ್ನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾಜಿ ಸೈನಿಕರು ಮತ್ತು ಹಿರಿಯ ನಾಗರಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲಾ ಮಾಜಿ ಸೈನಿಕರಿಗೂ ಹಾಗೂ ಹಿರಿಯ ನಾಗರಿಕರು ಮತ್ತು ಅವರ ಕುಟುಂಬಸ್ಥರಿಗೆ ದಿನನಿತ್ಯದ ಜೀವನದ ಹಾಗೂ ತಮ್ಮಆರೋಗ್ಯದ ಬಗ್ಗೆ ತಮ್ಮನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಈ ಕಾರ್ಯಕ್ರಮದಲ್ಲಿ ಭಾಗ ವಹಿಸುವ ವೀರನಾರಿಯರು ಹಾಗೂ ಕಾರ್ಗಿಲ್ ಮತ್ತು ಆಪರೇಷನ್ ಸಿಂಧೂರಿನಲ್ಲಿ ಭಾಗವಹಿಸಿದ ಮಾಜಿ ಸೈನಿಕರಿಗೂ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಅಶೋಕ್ ಕುಮಾರ್ ಕಾರಂಜಿ ಮಾಜಿ ಅಧ್ಯಕ್ಷರು ಮಾಜಿ ಸೈನಿಕ ಸಂಘ ಬೀದರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

