ಮಾಜಿ ಕೇಂದ್ರ ಸಚಿವರಾದ ಭಗವಂತ ಅವರಿಗೆ ನೀಡಲಾದ
ಭದ್ರತೆ ನಿಯಮಾನುಸಾರ ಹಿಂಪಡೆಯಲಾಗಿದೆ-ಎಸ್ಪಿ ಪ್ರದೀಪ ಗುಂಟಿ
ಬೀದರ.15.ಮೇ.25:-ಮಾಜಿ ಕೇಂದ್ರ ಸಚಿವರಾದ ಭಗವಂತ ಖೂಬಾ ಅವರಿಗೆ ತಮ್ಮ ಗೃಹ ಕಚೇರಿ ಹತ್ತಿರ ಭದ್ರತೆ ಗೋಸ್ಕರ ನಿಯೋಜಿಸಲಾಗಿದ್ದ 3 ಜನ ಸೆಂಟ್ರಿ ಅವರನ್ನು ನಿಯಮ ಅನುಸಾರವಾಗಿ ಹಿಂಪಡೆಯಲಾಗಿದೆ. ಹಾಗೂ ಸರ್ಕಾರದ ನಿಯಮ ಅನುಸಾರವಾಗಿ ಅವರಿಗೆ ಗನ್ ಮ್ಯಾನ್ ಮುಂದುವರಿಸಲಾಗಿದೆ ಎಂದು ಬೀದರ್ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಪ್ರದೀಪ್ ಗುಂಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
