ಹಲಸೂರು.10.ಜೂನ್.25:- ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಾ.ಹುಲಸೂರನಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಸಲುವಾಗಿ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು.
ಈ ತರಬೇತಿಯನ್ನು ತಹಶೀಲ್ದಾರರು ಹಾಗೂ ತಾಲೂಕಾ ದಂಡಾಧಿಕಾರಿಗಳಾದ ಶ್ರೀ ಶಿವಾನಂದ ಮೇತ್ರೆ ಅವರು ಮಾತನಾಡುತ್ತಾ ಈಗಾಗಲೇ ಪ್ರತಿಯೊಂದು ಮತಗಟ್ಟೆವಾರು ತಮ್ಮ ಹತ್ತಿರ ಮತದಾರರ ಪಟ್ಟಿಯಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯಲ್ಲಿ ಏನಾದರು ತಿದ್ದುಪಡಿ, ಸೆರ್ಪಡೆ, ಅಳಿಸುವುದು, ಹೂಸ ಭಾವಚಿತ್ರ ಅಳವಡಿಸುವುದು ಮತ್ತು ಸ್ಥಳಾಂತರ ಗೊಳಿಸುವ ಇದ್ದರೆ ತ್ವರಿತವಾಗಿ ಕಾರ್ಯಪರ್ವತರಾಗಿ.
ಮುಂಬರುವ ತಾಲೂಕಾ ಮತ್ತು ಜಿಲ್ಲಾ ಪಂಚಾಯತ ಚುನಾವಣಾ ಸಂಬಂಧ ತಮ್ಮ ಮತದಾರರ ಪಟ್ಟಿಯಲ್ಲಿರುವ ಗಣ್ಯ ವ್ಯಕ್ತಿಗಳ ಮತದಾರರ ಪಟ್ಟಿಯಲ್ಲಿ ಹೆಸರು ಕೈ ಬಿಡದಂತೆ ಎಚ್ಚರ ವಹಿಸಬೇಕು.ತಮ್ಮ ಬಿಎಲ್ಒ ಯಾಪ್ ನಲ್ಲಿ ಪ್ರತಿದಿನ ಬಂದ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಹಾಗೂ
ವಿಶೇಷ ಅರ್ಹತಾ ದಿನಾಂಕದವರೆಗೆ
ಮತದಾರರ ಪಟ್ಟಿ ಪರಿಷ್ಕರಣೆ ಆಗಬೇಕು.
ಕೆಲವು ಮತಗಟ್ಟೆಯಲ್ಲಿ 1200 ಕ್ಕಿಂತ ಹೆಚ್ಚು ಮತದಾರರಿದ್ದರೆ ಅದೇ ಕಾಂಪೌಂಡನಲ್ಲಿ ಇನ್ನೊಂದು ಮತಗಟ್ಟೆಯಲ್ಲಿ ಕಡಿಮೆ ಮತದಾರರ ಪಟ್ಟಿಯಲ್ಲಿ ಹೆಸರು ಸ್ಥಾಳಂತರ ಗೊಳಿಸಬೇಕು ಎಂದರು.
ಈ ಚುನಾವಣೆ ತರಬೇತಿ ಮಾಸ್ಟರ್ ಟ್ರೈನರ್ ಸಂಜೀವಕುಮಾರ ನಡುಕರ ಮಾತನಾಡುತ್ತಾ ಈಗಾಗಲೇ ತಾವುಗಳು ಪರಿಶಿಷ್ಟ ಜಾತಿ ಗಣತಿ ಕಾರ್ಯದಲ್ಲಿ ನಿರತವಾಗಿದ್ದು ಅತ್ಯುತ್ತಮ ಕಾರ್ಯ ಮಾಡುತ್ತಿದ್ದಿರಿ.ಮತದಾರರ ಪಟ್ಟಿಯಲ್ಲಿ ಮತದಾರರ ಫೋಟೋ ಬಹಳ ಹಳೆಯದಾದರೆ ಹೊಸ ಫೋಟೋ ಹಾಕಿ, 17 ವರ್ಷ ಮೇಲ್ಪಟ್ಟ ಯುವಕ ಮತ್ತು ಯುವತಿಯವರ ಹೆಸರನ್ನು ಚುನಾವಣಾ ಗುರುತಿನ ಚೀಟಿ ಪಡೆಯಲು ಅರ್ಜಿ ಹಾಕಬಹುದು.
18 ವರ್ಷ ಪೂರ್ಣಗೊಂಡಾಗ ತನ್ನಿಂತಾನೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳ್ಳುತ್ತದೆ.
ನಮೂನೆ,6,7ಮತ್ತು 8 ಅರ್ಜಿಗಳು ಬಂದರೆ ವಿಲೇವಾರಿ ಮಾಡುತ್ತಾ ಚುನಾವಣೆ ಶಾಖೆಯ ಶಿರಸ್ತೆದಾರರಿಗೆ ಪ್ರತಿದಿನ ಮಾಹಿತಿ ನೀಡಿ ಎಂದರು.
ಈ ತರಬೇತಿಯಲ್ಲಿ 48 ಮತಗಟ್ಟೆಯ ಮತಗಟ್ಟೆ ಮಟ್ಟದ ಅಧಿಕಾರಿಗಳು ಹಾಜರಿದ್ದು .