08/06/2025 9:42 PM

Translate Language

Home » ಲೈವ್ ನ್ಯೂಸ್ » ಮಣ್ಣಿನ ಫಲವತ್ತೆಯ ಬಗ್ಗೆ ವಿಶೇಷ ಕಾಳಜಿ
ವಹಿಸಿ ತೋಟಗಾರಿಕೆ ಬೆಳೆ ಬೆಳೆಯಬೇಕು-ಡಾ.ಎಸ್.ವಿ.ಪಾಟೀಲ್

ಮಣ್ಣಿನ ಫಲವತ್ತೆಯ ಬಗ್ಗೆ ವಿಶೇಷ ಕಾಳಜಿ
ವಹಿಸಿ ತೋಟಗಾರಿಕೆ ಬೆಳೆ ಬೆಳೆಯಬೇಕು-ಡಾ.ಎಸ್.ವಿ.ಪಾಟೀಲ್

Facebook
X
WhatsApp
Telegram


ಬೀದರ, 06ಡಿಸೆಂಬರ್24 ಬೀದರ:- ಜಿಲ್ಲೆಯ ರೈತರು ತಮ್ಮ ಹೊಲಗಳ ಮಣ್ಣಿನ ಫಲವತ್ತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಬೇಕೆಂದು ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ ಹೇಳಿದರು.


ಅವರು ಇತ್ತೀಚಿಗೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ಮತು ತೋಟಗಾರಿಕೆ ಮಹಾವಿದ್ಯಾಲಯ, ಬೀದರ ಇವರುಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ರಾಜೇಶ ಬಸನಾಳೆ ಇವರ ಪಪಾಯ ಕ್ಷೇತ್ರದಲ್ಲಿ “ಪಪಾಯ ಬೆಳೆಯ ಕ್ಷೇತ್ರೋತ್ಸವ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಪಪಾಯ ಬೆಳೆಯು ಒಂದು ಲಾಭದಾಯಕ ಬೆಳೆಯಾಗಿದ್ದು, ಸೂಕ್ತವಾದಂತಹ ತಳಿ ಆಯ್ಕೆ, ನೂರಿತ ವಿಜ್ಷಾನಿಗಳಿಂದ ಮಾಹಿತಿ ಹಾಗೂ ಮಾರುಕಟ್ಟೆ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಿದ್ದಲ್ಲಿ, ರೈತರು ಉತ್ತಮ ಲಾಭವನ್ನು ಪಡೆದು ಆರ್ಥಿವಾಗಿ ಸದೃಢರಾಗಬಹುದೆಂದರು.


ಔರಾದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಲಕ್ಷಿö್ಮÃ ಪಾಟೀಲ ಮಾತನಾಡಿ, ರೈತರು ಬೀದರ ಜಿಲ್ಲೆಯಲ್ಲಿ ಸಂಬAಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ತಾವು ಎದುರಿಸುತ್ತಿರುವಂತಹ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು ಹಾಗೂ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ರೈತ ವರ್ಗಕ್ಕೆ ಲಭ್ಯವಿರುವಂತಹ ಯೋಜನೆಗಳು ಮತ್ತು ಸಹಾಯಾನುದಾನಗಳ ಬಗ್ಗೆ ಸಮಗ್ರವಾದಂತಹ ಮಾಹಿತಿಯನ್ನು ನೀಡಿದರು.


ಪ್ರಗತಿಪರ ರೈತ ರಾಜೇಶ ಬಸನಾಳೆ ಮಾತನಾಡಿ, ಪಪಾಯ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮವು ತಮ್ಮ ಕ್ಷೇತ್ರದಲ್ಲಿ ಆಯೋಜಿಸಿರುವುದರಿಂದ ಹರ್ಷವನ್ನು ವ್ಯಕ್ತಪಡಿಸಿ, ಇದರಿಂದ ನಮ್ಮ ಗ್ರಾಮದ ಸುತ್ತಮುತ್ತಲಿನ ಗ್ರಾಮದ ರೈತರಿಗೂ ಸಹ ಪಪಾಯ ಬೆಳೆಯ ಬಗ್ಗೆ ಆಸಕ್ತಿಯನ್ನುಂಟು ಮಾಡಿದೆ ಎಂದು ಹೇಳಿದರು. ಮತ್ತು ತಮ್ಮ ವಯಕ್ತಿಕ ಪಪಾಯ ಬೆಳೆಯ ಬಗ್ಗೆ ಅನಿಸಿಕೆಯನ್ನು ಎಲ್ಲಾ ರೈತವರ್ಗ ಹಾಗೂ ಗಣ್ಯರೊಂದಿಗೆ ಹಂಚಿಕೊAಡರು.

ನಂತರ ಎಲ್ಲಾ ರೈತರಿಗೆ ರಾಜೇಶ ಬಸನಾಳೆಯವರು ಬೆಳೆದಿರುವಂತಹ ಪಪಾಯ ಬೆಳೆಯ ಕ್ಷೇತ್ರಕ್ಕೆ ಭೇಟಿ ನೀಡಿ, ಮೌಖೀಕವಾಗಿ ಮಾಹಿತಿಯನ್ನು ನೀಡಲಾಯಿತು.


ಈ ಸಂದರ್ಭದಲ್ಲಿ ಡಾ. ವಿ.ಪಿ. ಸಿಂಗ್., ವಿಸ್ತರಣಾ ಮುಂದಾಳು, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ಬೀದರ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿ ಹೇಳಿದರು. ಡಾ. ವಿಜಯಮಹಾಂತೇಶ, ಸಹಾಯಕ ಪ್ರಾಧ್ಯಾಪಕರು ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಪ್ರಶಾಂತ, ಸಹಾಯಕ ಪ್ರಾಧ್ಯಾಪಕರು, ಇವರು ವಂದಿಸಿದರು.

ಬೀದರ ಜಿಲ್ಲೆಯ 80 ಪ್ರಗತಿಪರ ರೈತರುಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಇದರ ಲಾಭ ಪಡೆದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!