09/06/2025 7:12 PM

Translate Language

Home » ಬೀದರ » ಮಕ್ಕಳು ಜಂತುಹುಳು ಮಾತ್ರೆ ಸೇವಿಸುವುದರ ಮೂಲಕ ಜಂತುಹುಳು
ನಾಶ ಮಾಡಬೇಕೆಂದು ಕರೆ-ಡಿಎಚ್‌ಓ ಡಾ.ಧ್ಯಾನೇಶ್ವರ ನೀರಗುಡೆ!

ಮಕ್ಕಳು ಜಂತುಹುಳು ಮಾತ್ರೆ ಸೇವಿಸುವುದರ ಮೂಲಕ ಜಂತುಹುಳು
ನಾಶ ಮಾಡಬೇಕೆಂದು ಕರೆ-ಡಿಎಚ್‌ಓ ಡಾ.ಧ್ಯಾನೇಶ್ವರ ನೀರಗುಡೆ!

Facebook
X
WhatsApp
Telegram

13 ಡಿಸೆಂಬರ್24ಬೀದರ್:- ಜಿಲ್ಲೆಯಲ್ಲಿ 1 ವರ್ಷದಿಂದ 19 ವರ್ಷದ 06-ಲಕ್ಷಕ್ಕಿಂತ ಹೆಚ್ಚು ಮಕ್ಕಳಿಗೆ ಮಕ್ಕಳಿಗೆ ಅಲ್ಬೆಂಡೋಜಲ್ ಮಾತ್ರೆಯನ್ನು ಪ್ರತಿ ಶಾಲಾ ಕಾಲೇಜುಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ವಿತರಿಸಲಾಗುತ್ತಿದ್ದು, ಉಳಿದ ಮಕ್ಕಳಿಗೆ ದಿನಾಂಕ:16-12-2024 ರಂದು ಮಾಪ್ ಅಪ್ ಕಾರ್ಯಕ್ರಮದ ಮೂಲಕ ನೀಡಲಾಗುತ್ತದೆ.

ಈ ಮಾತ್ರೆಯನ್ನು ಪ್ರತಿಯೊಬ್ಬ ಮಕ್ಕಳು ಚೀಪಿಸಿ ದೇಹದಲ್ಲಿರುವ ಪೋಷಕಾಂಶ ಹಾನಿಕಾರಕ ಜಂತುಹುಳುವನ್ನು ನಾಶ ಮಾಡಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅದಿಕಾರಿ ಡಾ.ಧ್ಯಾನೇಶ್ವರ ನೀರಗುಡೆ ಕರೆ ನೀಡಿದರು.
ಅವರು ಇತ್ತೀಚಿಎಗೆ ಸಿದ್ಧಾರೂಢ ಗುರುಕುಲ ಶಾಲೆ ಗುಂಪಾ ಬೀದರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೀದರ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ನೌಬಾದ ಅವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟಿçÃಯ ಜಂತುಹುಳ ನಿವಾರಣಾ ದಿನ ಹಾಗೂ ಡಿ.16 ರಂದು ಮಾಪ್‌ಅಪ್ ದಿನ ನಿಮಿತ್ಯ ನಡೆಯುವ ಅಲ್ಬೆಂಡೋಜಲ್ ಮಾತ್ರೆ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾಡಿ ಮಕ್ಕಳಿಗೆ ಅಲ್ಬೆಂಡೋಜಲ್ ಮಾತ್ರೆ ನುಂಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಈ ಅಲ್ಬೆಂಡೋಜಲ್ ಮಾತ್ರೆಯು ವರ್ಷದಲ್ಲಿ ಎರಡು ಬಾರಿ ಸೇವಿಸುವುದರಿಂದ ದೇಹದಲ್ಲಿರುವ ಜಂತುಹುಳುವನ್ನು ನಿಯಂತ್ರಿಸಿ ಮಕ್ಕಳ ಅಪೌಷ್ಠಿಕತೆಯನ್ನು ನಿಯಂತ್ರಿಸಬಹುದಾಗಿದೆ. ಅಲ್ಲದೆ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ವೃದ್ಧಿಯಾಗಿ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ವೃದ್ಧಿಯಾಗುತ್ತದೆ, ಕಾರಣ ಎಲ್ಲರೂ ಈ ಮಾತ್ರೆಯನ್ನು ಸೇವಿಸಬೇಕೆಂದರು.
ಡಾ|| ಶಿವಶಂಕರ.ಬಿ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳು ಪ್ರಾಸ್ತಾವಿಕವಾಗಿ ಮಾತನಾಡಿ, ಜಂತುಹುಳು ನಿವಾರಣಾ ಕಾರ್ಯಕ್ರಮದ ಉದ್ದೇಶ ಹಾಗೂ ಮಹತ್ವದ ಕುರಿತು ವಿವರಿಸಿದರು. ಹಾಗೂ ಜಂತುಹುಳು, ಅನಿಮಿಯಾ ನಿಯಂತ್ರಿಸಲು ತುಂಬಾ ಪ್ರಯೋಜನಕಾರಿ ಎಂದು ವಿವರಿಸಿದರು.


ಈ ಸಂದರ್ಭದಲ್ಲಿ ಬೀದರ ಸಿದ್ಧಾರೂಢ ಗುರುಕುಲ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಪ್ರಾಂಶುಪಾಲರಾದ ಬಸವರಾಜ ಮ್ಯಾಗೇರಿ, ಬೀದರ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ರಾಜಶೇಖರ ಪಾಟೀಲ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ದಿಲೀಪ ಡೋಗರೆ, ಬೀದರ ತಾಲ್ಲೂಕಾ ಆರೋಗ್ಯ ಅಧಿಕಾರಿ ಡಾ.ಸಂಗಾರೆಡ್ಡಿ, ಬೀದರ ಐಟಿಐ ಕಾಲೇಜಿನ ಪ್ರಾಚಾರ್ಯರ ಲಕ್ಷಿö್ಮÃಕಾಂತ, ಉಮೇಶ ಬಿರಾದರ ಸೇರಿದಂತೆ ಇತರರು ಹಾಗೂ ಸಿಬ್ಬಂದಿಯವರು, ಶಾಲೆಯ ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು. ಓಂಕಾರ ಮಲ್ಲಿಗೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಬೀದರ ಕಾರ್ಯಕ್ರಮ ನಿರೂಪಣೆ ಹಾಗೂ ವಂದನಾರ್ಪಣೆ ಕಾರ್ಯಕ್ರಮ ನೆರವೇರಿಸಿದರು.

Source: www.prajaprabhat.com

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!