ಬೀದರ.15.ಮೇ.25:- ವಿದ್ಯಾರ್ಥಿಗಳಿಗೆ ಸೃಜನಾತ್ಮಕತೆ ಹಾಗೂ ವೈಜ್ಞಾನಿಕ ಚಿಂತನಾಭಿವೃದ್ಧಿಗೆ ಸಹಾಯವಾಗುವ ಉದ್ದೇಶದಿಂದ 7ನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ತಿಗಳಿಗೆ ದಿನಾಂಕ: 15-05-2025 ರಿಂದ 24-05-2025 ರವರೆಗೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ತಾಲ್ಲೂಕಾ ಹಂತದಲ್ಲಿ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಸಂಗೀತ, ನೃತ್ಯ, ಚಿತ್ರಕಲೆ, ರಾಕೆಟ್ ತಯ್ಯಾರಿಕೆ ಹಾಗೂ ಖಗೋಳಶಾಸ್ತçದ ಮೇಲೆ ಹ್ಯಾಂಡ್ಸ್ ಆನ್ ತರಬೇತಿಯನ್ನು ಪರಣಿತ ಸಂಪನ್ಮೂಲ ವ್ಯಕ್ತಿಗಳಿಂದ ನೀಡಲಾಗುತ್ತಿದೆ.
ಶಿಬಿರಗಳ ನಡೆಯುವ ಸ್ಥಳಗಳ ಹಾಗೂ ನೋಡಲ್ ಅಧಿಕಾರ ಮೊಬೈಲ್ ವಿವರ: ಔರಾದ (ಬಿ) ಆದರ್ಶ ವಿದ್ಯಾಲಯದಲ್ಲಿ 100 ವಿದ್ಯಾರ್ಥಿಗಳಿಗೆ ನೋಡಲ್ ಅಧಿಕಾರಿ ಜಿ.ಆರ್.ಸಿ.ಔರಾದ.ಬಿ (ಮೊ.7483503360), ಬಸವಕಲ್ಯಾಣ ಸರ್ಕಾರಿ (ಬಾಲಕರ) ಪ್ರೌಢ ಶಾಲೆಯಲ್ಲಿ 100 ವಿದ್ಯಾರ್ಥಿಗಳಿಗೆ ನೋಡಲ್ ಅಧಿಕಾರಿ ಜಿ.ಆರ್.ಸಿ. ಬಸವಕಲ್ಯಾಣ (ಮೊ.9071317625), ಭಾಲ್ಕಿ ಸರ್ಕಾರಿ ಪ್ರೌಢ ಶಾಲೆಯಲ್ಲಿ 100 ವಿದ್ಯಾರ್ಥಿಗಳಿಗೆ ನೋಡಲ್ ಅಧಿಕಾರಿ ಜಿ.ಆರ್.ಸಿ. ಭಾಲ್ಕಿ (ಮೊ.8971687267), ಬೀದರ ಕೋರ ಸೈನ್ಸ್ ಆಕ್ಟಿವಿಟಿ ಸೆಂಟರ್ ಹಮೀಲಾಪುರ ರಸ್ತೆ ಬೀದರ (ಅಗಸ್ತç ಪೌಂಡೇಶನ)ದಲ್ಲಿ 100 ವಿದ್ಯಾರ್ಥಿಗಳಿಗೆ ನೋಡಲ್ ಅಧಿಕಾರಿ ಬಿ.ಆರ್.ಸಿ. (ಮೊ. 7259254577) ಹಾಗೂ ಹುಮನಾಬಾದ ತಾಲ್ಲೂಕಿನ ಸರ್ಕಾರಿ (ಬಾಲಕರ) ಪ್ರೌಢ ಶಾಲೆಯಲ್ಲಿ 100 ವಿದ್ಯಾರ್ಥಿಗಳಿಗೆ ನೋಡಲ್ ಅಧಿಕಾರಿ ಬಿ.ಆರ್.ಸಿ. ಹುಮನಾಬಾದ (ಮೊ.9986891973) ಅವರುಗಳು ನೀಡಲಿದ್ದಾರೆ.
ಪ್ರಯುಕ್ತ ಜಿಲ್ಲೆಯ ಆಯಾ ತಾಲ್ಲೂಕಿನ ಕೇಂದ್ರಗಳಲ್ಲಿ ರಚಿಸಲಾದ ಬೇಸಿಗೆ ಶಿಬಿರಗಳಿಗೆ 7ನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಗಳು ನೋಂದಾಯಿಸಿಕೊAಡು ಸದರಿ ಶಿಬಿರ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.