15/06/2025 7:22 AM

Translate Language

Home » ಲೈವ್ ನ್ಯೂಸ್ » ಬೆಂಗಳೂರನ್ನು ಸಿಂಗಾಪುರ ಮಾಡಿಕೊಳ್ಳಿ ಪರವಾಗಿಲ್ಲ, ನಮ್ಮ‌ ಕಲಬುರಗಿಯನ್ನು ಮೈಸೂರು, ಬೆಂಗಳೂರು ಮಾಡಿ ಸಾಕು. ಖರ್ಗೆ

ಬೆಂಗಳೂರನ್ನು ಸಿಂಗಾಪುರ ಮಾಡಿಕೊಳ್ಳಿ ಪರವಾಗಿಲ್ಲ, ನಮ್ಮ‌ ಕಲಬುರಗಿಯನ್ನು ಮೈಸೂರು, ಬೆಂಗಳೂರು ಮಾಡಿ ಸಾಕು. ಖರ್ಗೆ

Facebook
X
WhatsApp
Telegram

ಯಾದಗಿರಿ.14.ಜೂನ್.25:- ಕೊಕಲ್ಯಾಣ ಕರ್ಣಾಟಕ ಆಭಿವೃದ್ಧಿ ಹೇಗೆ ಸಾಧ್ಯ ಅಧಿಕಾರಿಗಳು ಹಣವನ್ನು ಖರ್ಚು ಮಾಡುವುದಿಲ್ಲ ಎನ್ನುವ ಸಿದ್ದರಾಮಯ್ಯನವರ ಮಾತನ್ನು ಮುರಿದು, ಕಪ್ಪು ಚುಕ್ಕೆಯನ್ನು ತೊಳೆದು ಜನರ ಸೌಲಭ್ಯಕ್ಕೆ ಅನುಗುಣವಾಗಿ ಕೆಲಸಗಳನ್ನು ಕೈಗೊಂಡು ಸರ್ಕಾರದ ಮಂತ್ರಿಗಳು ಮತ್ತು ಇಲ್ಲಿನ ಅಧಿಕಾರಿಗಳು ಹಾಗೂ ಕಾರ್ಯಕರ್ತರು, ಅಭಿಮಾನಿಗಳು ಸೇರಿ ಲಕ್ಷಾಂತರ ಜನರನ್ನು ಸೇರಿಸಿದ್ದಕ್ಕಾಗಿ ವಿಶೇಷ ಧನ್ಯವಾದಗಳು ಸಲ್ಲಿಸುವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಇಂದು ಶನಿವಾರ ಯಾದಗಿರಿಯಲ್ಲಿ ಆರೋಗ್ಯ ಆವಿಷ್ಕಾರ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ದಯವಿಟ್ಟು ಕಕ ಅನುದಾನದ ಹಣವನ್ನು ಬೇಗ ಖರ್ಚು ಮಾಡಿ, ಮತ್ತೆ ಸಿದ್ದರಾಮಯ್ಯನವರನ್ನು ಹಣ ಕೇಳಬೇಕು. ನಾನು ನೀನು ಎಂದು ಕಚ್ಚಾಡಿದರೆ, ಯಾವ ಕೆಲಸಗಳು ಆಗುವುದಿಲ್ಲ, 5000 ಕೋಟಿ ಹಣವನ್ನು ಉಪಯೋಗಿಸಿ, ಖರ್ಚು ಮಾಡಿ ತೋರಿಸಬೇಕು‌ ಎಂದರು.

ಶಿಕ್ಷಕರ ಕೊರತೆ ಕಾರಣ, ಏಳು ಜಿಲ್ಲೆಗಳ ಫಲಿತಾಂಶದಲ್ಲಿ ಕೊನೆಯ ಸ್ಥಾನಗಳಲ್ಲಿದೆ. ಇಲ್ಲಿನ ಶೈಕ್ಷಣಿಕ ಭಡ್ತಿ ಹೆಚ್ಚಾಗಲಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ನೌಕರಿಗಳ ಭಡ್ತಿ ಸರ್ಕಾರದ ಮಟ್ಟದಲ್ಲಿ ಹೆಚ್ವಾಗಬೇಕು. ನಮಗೆ, ನಿಮಗೆ ಆರ್ಥಿಕ ತೊಂದರೆ ಇಲ್ಲ ಎಂದು ಹೇಳಿದರು.

ಆರ್ಥಿಕ ಅನುಮತಿ ಸಿಎಂ ಅವರ ಕೈಯಲ್ಲಿಯೇ ಇರುವುದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ‌ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ. ಕ್ಯಾಬಿನೆಟ್ ಪ್ರಸ್ತಾಪ ಮಾಡಿ ಎಂದು ವೇದಿಕೆ ಮೇಲಿದ್ದ ಸಿಎಂ ಸಿದ್ದರಾಮಯ್ಯನವರಿಗೆ ತಿಳಿಸಿದರು.

ಯಾವ ಜನರಿಗೆ ಸಮಸ್ಯೆ ಇದೆ, 15, 18 ಪ್ರತಿಶತ ಜನರಿಗಾಗಿ 82 ಪ್ರತಿಶತ ಜನರ ಮಕ್ಕಳಿಗೆ ನ್ಯಾಯ ಕೊಡಿಸದೆ ಹೋದರೆ, ನಮ್ಮ‌ನಿಮ್ಮ ಮಕ್ಕಳು ಬೀದಿ ಪಾಲಾಗುತ್ತಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತಪಡಿಸಿದರು.

ಬೆಂಗಳೂರನ್ನು ಸಿಂಗಾಪುರ ಮಾಡಿಕೊಳ್ಳಿ ಪರವಾಗಿಲ್ಲ, ನಮ್ಮ‌ ಕಲಬುರಗಿಯನ್ನು ಮೈಸೂರು, ಬೆಂಗಳೂರು ಮಾಡಿ ಸಾಕು. ಸಿದ್ದರಾಮಯ್ಯನ ಮೈಸೂರು, ಶಿವಕುಮಾರ್ ಅವರ ಬೆಂಗಳೂರಿನ ರೀತಿ ಕಲಬುರಗಿ, ಕಲ್ಯಾಣ ಕರ್ನಾಟಕವನ್ನು ಮಾಡಿ ಎಂದು ಖರ್ಗೆ ಅವರು ನಗೆ ಚಟಾಕಿ ಹಾರಿಸಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!