13 ಡಿಸೆಂಬರ್24 ಬೀದರ್:- ಭಾಲ್ಕಿ ನಗರದ ಎಲ್ಲಾ ಆಹಾರ ಪದಾರ್ಥಗಳ ತಯಾರಕರು, ಮತ್ತು ಇತರೆ ಆಹಾರ ಪದಾರ್ಥಗಳ ಮಾರಾಟಗಾರರು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ನೋಂದಣಿ ಹಾಗೂ ಪರವಾನಿಗೆ ಮಾಡಿಸುವುದು ಕಡ್ಡಾಯವಾಗಿರುತ್ತದೆ ಎಂದು ಬೀದರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿಗಳಾದ ಡಾ.ಸಂತೋಷ ಸೂಚಿಸಿದರು.
ಅವರು ಇಂದು ರೋಟರಿ ಕ್ಲಬ್ ಐಎಂಎ ಹಾಲ್ ಭಾಲ್ಕಿಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಪ್ರಕಾರ ಬೀದಿ ಬದಿ ವ್ಯಾಪಾರಿಗಳು, ಟಿ ಅಂಗಡಿಗಳು, ಜಿಲೇಬಿ ತಯಾರಕರು, ಚೈನಿಸ್ ಫಾಸ್ಟ ಪುಡ್, ಟೀಫಿನ್ ಸೆಂಟರ್, ಜುಸ್ ಸೆಂಟರ್, ಚಿಕನ್ ಮತ್ತು ಕಬಾಬ್ ಸೆಂಟರ್ , ಚಾರ್ಟ ಭಂಡಾರ್ಗಳ ವಿಶೇಷ ನೋಂದಣಿ ಮತ್ತು ಪರವಾನಿಗೆ ಆಂದೋಲನ್ ಬಗ್ಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬೀದಿ ಬದಿ ವ್ಯಾಪಾರಿಗಳು ಯಾವುದೆ ತರಹದ ಕೃತಕ ಪರ್ದಾಥಗಳನ್ನು, ಟೆಸ್ಟಿಂಗ ಪೌಡರಗಳ, ಪಾನಿಪೋರಿ ನೀರಿನಲ್ಲಿ ಸಿಟ್ರಸ್ ಹಾಗೂ ಬಾಳೆ ಹಣ್ಣುಗಳನ್ನು ರೈಪನಿಂಗ ಮಾಡಲು ಕ್ಯಾಲ್ಸಿಯಂ ಕಾರ್ಬೈಡ್ ಬಳಕೆ ಮಾಡದಂತೆ ಎಚ್ಚರಿಕೆ ನೀಡಿದರು ಹಾಗೂ ಒಂದು ವೇಳೆ ಕೃತಕ ಪರ್ದಾಗಳನ್ನು ಉಪೋಗಿಸಿದ ಪಕ್ಷದಲ್ಲಿ ತಮ್ಮ ವಿರುದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ವತಿಯಿಂದ ಸೂಕ್ತ ಕ್ರಮ ಕೈಗೂಳಲಾಗುವುದು. ವ್ಯಾಪಾರಿಗಳು ಸ್ವಚ್ಛೆತೆಯನ್ನು ಕಾಪಾಡುವುದು, ಹ್ಯಾಂಡ ಗ್ಲೋಸ್ ಮತ್ತು ಕ್ಯಾಪಗಳ ಬಳಕೆ ಮಾಡಲು ಅವರು ಸೂಚಿಸಿದರು.
ಈ ಕಾರ್ಯಕ್ರಮದಲ್ಲಿ ಭಾಲ್ಕಿ ಮಾಜಿ ಪೂರಸಭೆ ಅಧ್ಯಕ್ಷರು ಬಸವರಾಜ ವಂಕೆ, ಭಾಲ್ಕಿ ತಾಲ್ಲೂಕ ಆಹಾರ ಸುರಕ್ಷತಾ ಅಧಿಕಾರಿ ಸೋಮನಾಥ ತರನಳ್ಳೆ, ಔರಾದ(ಬಿ) ತಾಲೂಕಾ ಆಹಾರ ಸುರಕ್ಷತಾಧಿಕಾರಿ ಕಿಶೋರ ಕುಮಾರ, ವ್ಯಾಪಾರಿಗಳಾದ ನರಸಿಂಹ ರಾಘವೆಂದ್ರ ಬೇಕರಿ ಮತ್ತು ನಯುಮ ನುಮಾನ ಬೇಕರಿ ಸೇರಿದಂತೆ ಇತರರು ಉಪಸ್ಥಿತರಿದರು.