09/06/2025 10:16 AM

Translate Language

Home » ಲೈವ್ ನ್ಯೂಸ್ » ಬೀದರ | ATM ದರೋಡೆಕೋರರ ಬಗ್ಗೆ ನೀಡಿದರೆ ಸುಳಿವು ನೀಡಿದವರಿಗೆ ರೂ.5 ಲಕ್ಷ ಬಹುಮಾನ.!

ಬೀದರ | ATM ದರೋಡೆಕೋರರ ಬಗ್ಗೆ ನೀಡಿದರೆ ಸುಳಿವು  ನೀಡಿದವರಿಗೆ ರೂ.5 ಲಕ್ಷ ಬಹುಮಾನ.!

Facebook
X
WhatsApp
Telegram

ಬೀದರ.15.ಫೆ.25:- ಬೀದರ್ ನಗರದ ಮುಖ್ಯ ಶಾಖಾ ಎಸ್‌ಬಿಐ ಬ್ಯಾಂಕ್‌ನ ಎಟಿಎಂಗೆ ತುಂಬಲು ತಂದಿದ್ದ 94 ಲಕ್ಷ ರೂಪಾಯಿ ದರೋಡೆ ಹಾಗೂ ಓರ್ವ ಸಿಬ್ಬಂದಿ ಹತ್ಯೆ ಪ್ರಕರಣ ಸಂಬಂಧ ಆರೋಪಿಗಳ ಮಾಹಿತಿಯನ್ನು ಬೀದರ್ ಜಿಲ್ಲಾ ಪೊಲೀಸ್ ಪ್ರಕಟಿಸಿದೆ.

ಆರೋಪಿಗಳ ಪತ್ತೆಗೆ ಸುಳಿವು ನೀಡಿದವರಿಗೆ ರೂ.5 ಲಕ್ಷ ಬಹುಮಾನ ನೀಡುವುದಾಗಿ ಪೊಲೀಸರು ಘೋಷಣೆ ಮಾಡಿದ್ದಾರೆ.

ಒಂದು ತಿಂಗಳು ಕಳೆದರೂ ಆರೋಪಿಗಳ ಪತ್ತೆಯಾಗದ ಹಿನ್ನೆಲೆಯಲ್ಲಿ ಈ ಬಹುಮಾನವನ್ನು ಘೋಷಣೆ ಮಾಡಲಾಗಿದೆ.

ಇಬ್ಬರು ಆರೋಪಿಗಳಾದ ಅಮನಕುಮಾರ್ ಸಿಂಗ್ ಹಾಗೂ ಅಲೋಕ್ ಕುಮಾರ್ ಸುಳಿವಿಗೆ ಬಹುಮಾನವನ್ನು ಘೋಷಿಸಲಾಗಿದೆ.

ಕಳೆದ ಜ.16 ರಂದು ಬೈಕ್ ಮೇಲೆ ಬಂದ ಇಬ್ಬರು ದರೋಡೆಕೋರರು ಗುಂಡು ಹಾರಿಸಿ ಹಣವನ್ನು ದೋಚಿ ತೆಲಂಗಾಣದತ್ತ ಎಸ್ಕೇಪ್ ಆಗಿದ್ದರು.

ಅಲ್ಲಿಂದಲೂ ಖದೀಮರು ಪರಾರಿಯಾಗಿದ್ದರು. ಹಣ ದೋಚುವಾಗ ಘಟನೆಯಲ್ಲಿ ಓರ್ವ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದಿದ್ದರು. ಇನ್ನೋರ್ವ ಸಿಬ್ಬಂದಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ.

ಆರೋಪಿಗಳ ಪತ್ತೆಗೆ ಸುಳಿವು ನೀಡಿದವರಿಗೆ ರೂ.5 ಲಕ್ಷ ಬಹುಮಾನ ಘೋಷಣೆ ಮಾಡಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!