11/06/2025 5:49 AM

Translate Language

Home » ಲೈವ್ ನ್ಯೂಸ್ » ಬೀದರ | 3 ವರ್ಷ ಕಠಿಣ ಕಾರವಾಸ ಶಿಕ್ಷೆ.!

ಬೀದರ  | 3 ವರ್ಷ ಕಠಿಣ ಕಾರವಾಸ ಶಿಕ್ಷೆ.!

Facebook
X
WhatsApp
Telegram

ಬೀದರ.23.ಏಪ್ರಿಲ್.25:- ಬೀದರ್ ನಗರದಲ್ಲಿ ಸೇಪ್ಟಂಬರ್ 2006 ನೇ ಸಾಲಿನಲ್ಲಿ ಈ ದೋಷಾರೋಪಣೆ ಪತ್ರದ ಕಾಲಂ. ನಂ.3 ರಲ್ಲಿ ನಮೂದು ಮಾಡಿದ ಆರೋಪಿತನು ರಾಜೀವ ಗಾಂಧಿ ಗ್ರಾಮೀಣ ಸ್ವಯಂ ಉದ್ಯೋಗ ಯೋಜನೆ ಅಡಿಯಲ್ಲಿ ಬೀದರ ನಗರದಲ್ಲಿಯ ರಾಂಪುರೆ ಕಾಲೋನಿಯಲ್ಲಿರುವ ಜ್ಞಾನ ಜ್ಯೋತಿ ಪಬ್ಲಿಕ ಶಾಲೆಯಲ್ಲಿ ಒಂದು ಕಛೇರಿ ತೆರೆದು ತಾನು ಅದರ ಮ್ಯಾನೆಜರನಾಗಿರುತ್ತೆನೆಂದು ಸ್ಥಳಿಯ ದಿನ ಪತ್ರಿಕೆಯಲ್ಲಿ ರಾಜೀವ ಗಾಂಧಿ ಗ್ರಾಮೀಣ ಸ್ವಯಂ ಉದ್ಯೋಗ ಯೋಜನೆ ಅಡಿಯಲ್ಲಿ ಎಜೆಂಟರು, ಡೆವಲಪಮೆಂಟ್ ಆಫಿಸರ್ ಹಾಗೂ ಏರಿಯ ಮ್ಯಾನೆಜರ ಹುದ್ದೆಗಾಗಿ ಜಾಹಿರಾತು ಪ್ರಕರಟಿಸಿ ಸಾಕ್ಷಿ ನಂ.1 ಹಾಗೂ 6 ರಿಂದ 13 ರವರಿಗೆ ಸಂದರ್ಶನಕ್ಕೆ ಕರೆದು,

ಸಾಕ್ಷಿ ನಂ.! ಇವರಿಗೆ ಡೆವಲಪಮೆಂಟ್ ಆಫಿಸರ್ ಹಾಗೂ ಸಾಕ್ಷಿ ನಂ.6 ರಿಂದ 13 ರವರಿಗೆ ಏಜಂಟರನ್ನಾಗಿ ನೇಮಕ ಮಾಡಿಕೊಂಡು, ಇದು ರಾಜೀವ ಗಾಂಧಿ ಗ್ರಾಮೀಣ ಸ್ವಯಂ ಉದ್ಯೋಗ ಯೋಜನೆ, ಮೀನಿಸ್ಟ್ರಿ ಆಫ್ ರೂರಲ್ ಡೇವಲಪಮೆಂಟ ಗೌರಮೆಂಟ್ ಆಫ್ ಇಂಡಿಯಾ, ನ್ಯೂ ದೆಹಲಿ ಇದ್ದು, ಕೇಂದ್ರ ಸರ್ಕಾರದ ಸಂಸ್ಥೆ ಆಗಿರುತ್ತದೆ.

ಅಂತ ಸುಳ್ಳು ದಾಖಲಾತಿಗಳಾದ ಪಾಸಬುಕ್ ರಸೀದಿ, ಸೀಲ್, ಮಾಹಿತಿ ಪುಸ್ತಕ ಹಾಗೂ ಅರ್ಜಿ ನಮೂನೆಗಳನ್ನು ಸೈಹಿಸಿ, ಸಾಕ್ಷಿ ನಂ.! ಹಾಗೂ 6 ರಿಂದ 13 ರವರ ಸಹಾಯದಿಂದ ಸಾರ್ವಜನಿಕರಿಗೆ ಸುಳ್ಳು ಭರವಸೆ ನೀಡಿ ಆರ್.ಡಿ ಅಕೌಂಟ ರೀತಿಯಲ್ಲಿ ಹಣ ಸಂಗ್ರಹಿಸಿಕೊಂಡು ಸದರಿ ಹಣ ಮೆಚೂರಿಟಿ ಅವಧಿ ಮುಗಿದ ನಂತರ ಸಂಗ್ರಹಿಸಿದ ಹಣಕ್ಕಿಂತ ಹೆಚ್ಚು ಹಣ ಕೊಡುವದಾಗಿ ಹಾಗೂ ಯಾರೂ ಚೆನ್ನಾಗಿ ಕೆಲಸ ನಿರ್ವಹಿಸುತ್ತಾರೋ ಅವರಿಗೆ ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ಬಹುಮಾನ ರೂಪದಲ್ಲಿ ಕೊಡವದಾಗಿ ಹಾಗೂ ಸರಕಾರದಿಂದ ಸಾಲ ಕೊಡಿಸುವುದಾಗಿ ಸುಳ್ಳು ಆಶ್ವಾಸನೆ ನೀಡಿ ಖೋಟಾ ದಾಖಲಾತಿಗಳು ಸೃಷ್ಟಿಸಿ ಸಾರ್ವಜನಿಕರಿಂದ ಸುಮಾರು 18,00,000/-ರೂ ಪಡೆದುಕೊಂಡು ಮೋಸ ಮಾಡಿರುತ್ತಾನೆ.

ಆರೋಪಿತನು ಕಲಂ.420, 465, 468, 471 ಐ.ಪಿ.ಸಿ ನೇದ್ದರಲ್ಲಿ ಅಪರಾಧ ಎಸಗಿದ್ದು ಆರೋಪಿತನ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಲಾಗಿದೆ.

ಈ ಪ್ರಕರಣವು ಬೀದರಿನ ಮಾನ್ಯ ಪ್ರಧಾನ ಜೆ.ಎಮ್.ಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಬಂದಿದ್ದು, ಪ್ರಕರಣದ ಸಾಕ್ಷಿದಾರರ ಸಾಕ್ಷ್ಯ ಹಾಗೂ ದಾಖಲೆಗಳನ್ನು ಪರೀಶಿಲಿಸಿ ಮಾನ್ಯ ಪ್ರಧಾನ ಜೆ.ಎಮ್.ಎಫ್‌.ಸಿ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ ಕಾಡಪ್ಪಾ ಹುಕ್ಕೇರಿ ಇವರು ಆರೋಪಿತನಾದ ಈಶ್ವರ ತಂದೆ ಸೂರಪ್ಪಾ ಖಂಡಾರೆ ಸಾಕ್ಷಿ ಚಿಲ್ಲರ್ಗಿ ಗ್ರಾಮ ತಾ॥ ಜಿ ಬೀದರ, ರವರು ತಪ್ಪಿಷ್ಟನು ಎಂದು ತೀರ್ಪು ನೀಡಿ ಆರೋಪಿತನಿಗೆ ಭಾರತ ದಂಡ ಸಂಹಿತೆ ಕಲಂ:420, 465, 468. 471 ಐ.ಪಿ.ಸಿ ಅಪರಾಧಕ್ಕೆ 3 ವರ್ಷ ಕಠಿಣ ಕಾರವಾಸ ಶಿಕ್ಷೆ ಮತ್ತು 20,000/-ರೂ ದಂಡ, ಹಾಗೂ ದಂಡ ಕೊಡಲು ತಪ್ಪಿದಲ್ಲಿ 06 ತಿಂಗಳ ಹೆಚ್ಚಿನ ಕಠಿಣ ಕಾರವಾಸ ಶಿಕ್ಷೆ ಅನುಭವಿಸುವಂತೆ ಶಿಕ್ಷೆ ವಿಧಿಸಿ ದಿ:21-04-2025 ರಂದು ಆದೇಶ ಹೊರಡಿಸಿದ್ದು ಇರುತ್ತದೆ.

ಅಭಿಯೋಜನಾ ಪರವಾಗಿ ಸಹಾಯಾಕ ಸರ್ಕಾರಿ ಅಭಿಯೋಜಕರಾದ ಶ್ರೀ ನಂದುಕುಮಾರ ಇವರು

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!