ಬೀದರ.14.ಜನವರಿ.25. ಇಂದು ಬೀದರ್ ನಗರ
ಜಿಲ್ಲಾಡಳಿತದ ವತಿಯಿಂದ ಮಂಗಳವಾರ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿ. ಸಹಾಯಕ ಆಯುಕ್ತ ಮೊಹ್ಮದ್ ಶಕೀಲ್ ಹಾಗೂ ಸಮಾಜದ ಗಣ್ಯರು ಸಿದ್ದರಾಮೇಶ್ವರ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಭೋವಿ ಸಮಾಜದ ಜಿಲ್ಲಾಧ್ಯಕ್ಷ ಮಾಣಿಕರಾವ ವಾಡೇಕರ್, ಬೀದರ ತಾಲ್ಲೂಕಾ ಅಧ್ಯಕ್ಷ ಪುಂಡಲೀಕ್ ನಿಂಗದಲ್ಲಿಕರ್, ರಮೇಶ ಹಳ್ಳಿಖೇಡ್, ಬಸವರಾಜ ಕಾಳೆ, ವಿಜಯಕುಮಾರ ಸೋನಾರೆ, ಶಿವಪುತ್ರಪ್ಪಾ ಪಾಟೀಲ್, ಸುರೇಶ ಪಾಟೀಲ್, ಸಂತೋಷ ಏಣಕುರೆ,ರಮೇಶ್ ಬಿರಾದಾರ, ಸೋಮನಾಥ ಸಂತಪುರೆ, ರಾಜು ಭೋವಿ, ಚಿತ್ರ ಭೋವಿ, ಅಶೋಕ್ ಗಡವಂತಿ, ನಾಗೇಶ್ ಭೋವಿ, ಚಂದು ಬೀದರ, ಅಶೋಕ್ ಮನ್ನಾಏಖೇಳಿ, ಮಾಣಿಕ ನಿಜಾಮಪುರ್, ಸೇರಿದಂತೆ ಇತರರು ಉಪಸ್ಥಿತರಿದ್ದರು.
