09/06/2025 11:43 PM

Translate Language

Home » ಲೈವ್ ನ್ಯೂಸ್ » ಬೀದರ ವಿಶ್ವವಿದ್ಯಾಲಯನಲ್ಲಿ ಸಂತ ಸೇವಾಲಾಲ್‌ ಮಹಾರಾಜ ಜಯಂತಿ ಆಚರಣೆ.!

ಬೀದರ ವಿಶ್ವವಿದ್ಯಾಲಯನಲ್ಲಿ ಸಂತ ಸೇವಾಲಾಲ್‌ ಮಹಾರಾಜ ಜಯಂತಿ ಆಚರಣೆ.!

Facebook
X
WhatsApp
Telegram

ಬೀದರ.16.ಫೆ.25: ಇಂದು ಬೀದರ ವಿಶ್ವವಿದ್ಯಾಲಯ ದಲ್ಲಿ ಸಂತ ಸೇವಾಲಾಲ್‌ ಮಹಾರಾಜರ ಜಯಂತಿಯನ್ನು ಶನಿವಾರ ಆಚರಿಸಲಾಯಿತು.

ವಿಶ್ವವಿದ್ಯಾಲಯದಲ್ಲಿ ನಡೆದ ಸೇವಾಲಾಲ್‌ ಜಯಂತಿ ಕಾರ್ಯಕ್ರಮದಲ್ಲಿ ವಿ.ವಿ ಮೌಲ್ಯಮಾಪನ ಕುಲಸಚಿವ ಪ್ರೊ.ಪರಮೇಶ್ವರ ನಾಯಕ ಮಾತನಾಡಿ, ‘ಸಂತ ಸೇವಾಲಾಲ್‌ ಅವರು ಬುಡಕಟ್ಟು ಸಮುದಾಯದಲ್ಲಿನ ಸಮಸ್ಯೆಗಳನ್ನು ಅರಿತು, ಎಲ್ಲರೂ ಕಲಿಯಿರಿ ಮತ್ತು ಎಲ್ಲರನ್ನೂ ಕಲಿಸಿರಿ ಎಂಬ ಮಹತ್ವದ ಸಂದೇಶವನ್ನು ಸಾರಿದರು’ ಎಂದರು.

ಹಿಂದುಳಿದ ಬಂಜಾರ ಸಮುದಾಯದಲ್ಲಿ ಜನಿಸಿದ ಸೇವಾಲಾಲರು ತಮ್ಮ ಆದರ್ಶ ಜೀವನಶೈಲಿಯಿಂದಾಗಿ ಜನಮಾನಸದಲ್ಲಿ ಇಂದಿಗೂ ವಿರಾಜಮಾನರಾಗಿದ್ದಾರೆ. ಸೇವಾಲಾಲರು ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕಾಗಿ ತಮ್ಮ ಕರ್ತವ್ಯ, ಹಕ್ಕುಗಳು, ಧರ್ಮ, ಕ್ರಿಯೆಗಳ ಬಗ್ಗೆ ವಿವರವಾಗಿ ಬೋಧಿಸಿದ್ದಾರೆ. ಅವರು ಸ್ತ್ರೀ-ಪುರುಷರಲ್ಲಿ ಸಮಾನತೆ ಇರಬೇಕೆಂದು ಹೇಳಿದ್ದರು’ ಎಂದು ನೆನೆದರು.

ಕುಲಸಚಿವೆ (ಆಡಳಿತ) ಸುರೇಖಾ ಮಾತನಾಡಿ, ‘ಸಂತ ಸೇವಾಲಾಲರ ಆಧ್ಯಾತ್ಮಿಕ ಅನುಭವದ ಜೊತೆಗೆ ಸಮಾಜದಲ್ಲಿನ ಆಗುಹೋಗುಗಳ ಬಗ್ಗೆ, ಶ್ರಮಜೀವಿಗಳು, ತುಳಿತಕ್ಕೊಳಗಾದವರ ಧ್ವನಿಯಾಗಿ ಅವರ ಸಂದೇಶಗಳು ಮೂಡಿಬಂದಿವೆ. ಅವರು ಸಮಾಜವನ್ನು ಸನ್ಮಾರ್ಗದೆಡೆಗೆ ಕೊಂಡೊಯ್ಯುವ ಆದರ್ಶ ಮಾರ್ಗದರ್ಶಕರಾಗಿದ್ದರು’ ಎಂದರು.

ವಿಶೇಷ ಅಧಿಕಾರಿ ರವೀಂದ್ರನಾಥ ವಿ.ಗಬಾಡಿ, ಶಾಂತಕುಮಾರ ಚಿದ್ರಿ ಮತ್ತಿತರರು ಹಾಜರಿದ್ದರು.

ಜಿಲ್ಲಾ ಬಿಜೆಪಿ: ನಗರದಲ್ಲಿನ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಅವರು ಸಂತ ಸೇವಾಲಾಲರ ಭಾವಚಿತ್ರಕ್ಕೆ ಪುಷ್ಪಮಾಲೆ ಹಾಕಿ ಪೂಜೆ ನೆರವೇರಿಸಿದರು. ರಾಜ್ಯ ಪ್ರಶಿಕ್ಷಣ ಪ್ರಕೋಷ್ಠದ ಸಂಚಾಲಕ ರಾಜಶೇಖರ ನಾಗಮೂರ್ತಿ, ಅರುಣ, ಆದಿನಾಥ್, ಶಿವರಾಜ ಹಾಜರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!