ಬೀದರ.10.ಏಪ್ರಿಲ.25:- ಬೀದರ ಲೋಕಸಭಾ ಕ್ಷೇತ್ರವನ್ನು ಗುಡಿಸಲು ಮುಕ್ತಗೊಳಿಸುವ ನಿಟ್ಟಿನಲ್ಲಿ ಸಂಸದರಾದ ಶ್ರೀ ಸಾಗರ ಖಂಡ್ರೆ ಅವರಿಂದ ಇಂದು ಪಿಎಂಎವೈ (ಗ್ರಾಮೀಣ) ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಮನೆ ಮಂಜೂರಾತಿ ತಿಳುವಳಿಕೆ ಪತ್ರಗಳನ್ನು ವಿತರಿಸಲಾಯಿತು.
ಇಂದು ವಿತರಿಸಲಾದ ಮನೆ ಮಂಜೂರಾತಿಗಳು ಹುಮನಾಬಾದ ತಾಲೂಕಿನ ಈ ಕೆಳಗಿನ ಗ್ರಾಮ ಪಂಚಾಯತಗಳಿಗೆ ಸೇರಿದವು:
1. ಡಾಕೂಳಗಿ – 118 ಮನೆಗಳು
2. ಸೀತಾಳಗೇರಾ – 524 ಮನೆಗಳು
3. ಮದರಗಾಂವ – 179 ಮನೆಗಳು
4. ಬೆನಚಿಂಚೋಳ್ಳಿ – 100 ಮನೆಗಳು
5. ನಂದಾಗಾಂವ – 86 ಮನೆಗಳು
6. ಹುಡಗಿ – 186 ಮನೆಗಳು
ಒಟ್ಟು: 1,193 ಮನೆಗಳು ಇಂದು ವಿತರಿಸಲಾಯಿತು.
