ಬೀದರ.18.ಮಾರ್ಚ.25:-: ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015, ತಿದ್ದುಪಡಿ ಕಾಯ್ದೆ 2021 ಹಾಗೂ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಮಾದರಿ ನಿಯಮಗಳು 2016, ತಿದ್ದುಪಡಿ ಮಾದರಿ ನಿಯಮಗಳು 2022 ರನ್ವಯ ಬೀದರ ಮಕ್ಕಳ ಕಲ್ಯಾಣ ಸಮಿತಿಗೆ ಅಧ್ಯಕ್ಷ, ಸದಸ್ಯರುಗಳನ್ನು ಆಯ್ಕೆಯಾಗಿರುತ್ತಾರೆ ಎಂದು ಬೀದರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಯ್ಕೆಯಾಗಿರುವ ಅಧ್ಯಕ್ಷ, ಸದಸ್ಯರುಗಳ ವಿವರ: ಶೀಮಪ್ಪ ವಿಶ್ವನಾಥ ಮೇತ್ರೆ (ಅಧ್ಯಕ್ಷರು), ರೇಣುಕಾ (ಸದಸ್ಯರು), ಶಾಲಿನಿ ಫ್ಲಾರೆನ್ಸ್ (ಸದಸ್ಯರು), ಸುಧಾಕರ್ ಯಲ್ಲನೋರ್ (ಸದಸ್ಯರು), ಮನ್ಮಥ ಕಾಶಿನಾಥ (ಸದಸ್ಯರು).
ಕಾರಣ ಮಕ್ಕಳ ಕಲ್ಯಾಣ ಸಮಿತಿಗೆ ಆಯ್ಕೆಯಾಗಿರುವ ಅಧ್ಯಕ್ಷ, ಸದಸ್ಯರುಗಳು ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ/ವ್ಯಕ್ತಿಗಳೊಂದಿಗೆ/ಪಕ್ಷಗಳೊoದಿಗೆ ಸಂಪರ್ಕ ಹೊಂದಿರುವ ಬಗ್ಗೆ ಸಾರ್ವಜನಿಕರಲ್ಲಿ ಯಾವುದಾದರೂ ಆಕ್ಷೇಪಣೆಗಳು ಇದ್ದಲ್ಲಿ
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಮೈಲೂರ ಬೀದರ ಅವರ ಕಛೇರಿಯ ದೂರವಾಣಿ ಸಂಖ್ಯೆ: 08482-234003 ಅಥವಾ ಇಮೇಲ್
dcpobidar@gmail.com ಗೆ ದಿನಾಂಕ: 21-03-2025 ರೊಳಗಾಗಿ ಮಾಹಿತಿ ನೀಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.