14/06/2025 12:25 PM

Translate Language

Home » ಲೈವ್ ನ್ಯೂಸ್ » ಬೀದರ | ಪ್ರತಿಯೊಬ್ಬ ರೈತರು ಐದು ಗಿಡ ಮರಗಳನ್ನು ಬೆಳೆಸುವಂತೆ ಸಿದ್ರಾಮಯ್ಯ ಸ್ವಾಮಿ ಕರೆ.!

ಬೀದರ | ಪ್ರತಿಯೊಬ್ಬ ರೈತರು ಐದು ಗಿಡ ಮರಗಳನ್ನು ಬೆಳೆಸುವಂತೆ ಸಿದ್ರಾಮಯ್ಯ ಸ್ವಾಮಿ ಕರೆ.!

Facebook
X
WhatsApp
Telegram

ಬೀದರ.10.ಏಪ್ರಿಲ್.25:- ಪ್ರತಿಯೊಬ್ಬ ರೈತರು ಸರ್ಕಾರದಿಂದ ನೀಡುವ ಸಬ್ಸಡಿ ದರದಲ್ಲಿ ಬೀಜ, ಗೊಬ್ಬರ ಹಾಗೂ ಯಂತ್ರೋಪಕರಣಗಳು ಪಡೆಯುವ ಸಂದರ್ಭದಲ್ಲಿ ರೈತರು ಐದು ಗಿಡಗಳು (ಮಾವು, ನೆಲ್ಲೆಕಾಯಿ, ಬೇವಿನ, ಸಪೋಟಾ ಜಾಪುಳ) ಹಾಗೂ ಸುತ್ತಮುತ್ತ ಇತರೆ ಮರ ಗೀಡಗಳನ್ನು ಬೆಳೆಸಬೇಕೆಂದು ಬೀದರ ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಸಿದ್ರಾಮಯ್ಯಾ ಎಸ್.ಸ್ವಾಮಿ ಕರೆ ನೀಡಿದರು.


ಅವರು ಬೀದರ ಸಹಾಯಕ ಕೃಷಿನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಹಾಗೂ ಮುಂಗಾರು ಹಂಗಾಮಿನ ಸಿದ್ಧತೆ ಕುರಿತು ಕರೆದಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಶೇ಼ಷವಾಗಿ ಸಿರಿಧಾನ್ಯ ಬೆಳೆಯಲು ಹಾಗೂ ಅದರ ಮಹತ್ವದ ಬಗ್ಗೆ ಸರಕಾರದ ಯೋಜನೆಯ ಸದುಪಯೋಗವನ್ನು ಜಿಲ್ಲೆಯ ರೈತಬಾಂಧವರು ಪಡೆದುಕೊಳ್ಳಬೇಕೆಂದರು.


ಬೀದರ ಸಹಾಯಕ ಕೃಷಿ ನಿರ್ದೇಶಕರಾದ ಅನ್ಸಾರಿ ಎಮ್.ಎ.ಕೆ ಅವರು ಕೃಷಿ ಇಲಾಖೆ ವತಿಯಿಂದ ದೊರೆಯುವ ಸೌಲಭ್ಯಗಳು ಹಾಗೂ ಕೃಷಿ ಭಾಗ್ಯ ಯೋಜನೆಯ ಕೃಷಿ ಹೊಂಡಗಳ ಪ್ರಚಾರ ಮಾಡಿ ರೈತರಿಗೆ ಪ್ರಯೋಜನೆ ಪಡೆಯುವಂತಾಗಬೇಕು. ಸರ್ಕಾರದ ಸಹಾಯ ಧನ ದಲ್ಲಿ ದೊರೆಯುವ ತುಂತುರು ನೀರಾವರಿ ಘಟಕ, ಕೃಷಿ ಯಾಂತ್ರಿಕರಣ, ಸಮಗ್ರ ಕೃಷಿ ಪದ್ದತಿ, ಬಿತ್ತನೆ ಬೀಜದ ಕುರಿತು ಸಭೆಗೆ ಮಾಹಿತಿ ನೀಡಿದರು.


ತೋಟಗಾರಿಕೆ ಇಲಾಖೆಯಿಂದ ಆರ್.ಕೆ.ವಿ.ವೈ ಯೋಜನೆಯಡಿ ಕೃಷಿಕ್ ಯಾಂತ್ರಿಕರಣ ಶೇಖರಣ ಘಟಕಗಳು ಹಾಗೂ ಎನ್.ಎಚ್.ಎಮ್ ಯೋಜನೆಯಡಿ ಪ್ಯಾಕ್‌ಹೌಸ್, ಸೋಲಾರ ಘಟಕಗಳ ವಿವರವಾದ ಮಾಹಿತಿಯನ್ನು ಸಹಾಯಕ ತೋಟಗಾರಿಕೆ ಅಧಿಕಾರಿ ಸೇವಂತಿ ನೀಡಿದರು. ಹಾಗೂ ತಾಲ್ಲೂಕಿನಲ್ಲಿ 95 ಎಕರೆ ರೇಷ್ಮೆ ಬೆಳೆಯಿದ್ದು 45 ರೈತರು ಫಲಾನುಭವಿಯಾಗಿರುತ್ತಾರೆ. ರೇಷ್ಮೆ ಹುಳು ಸಾಕಾಣಿಕೆ ಸಮಾನ್ಯ ವರ್ಗದ ರೈತರಿಗೆ 75% ಮತ್ತು ಪ.ಜಾತಿ/ಪ.ಪಂಗಡ ರೈತರಿಗೆ 90% ರಂತೆ ಸಹಾಯಧನ ದೊರೆಯುವ ಮಾಹಿತಿಯನ್ನು ರೇಷ್ಮೆ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ಕಿರಣಕುಮಾರ ನೀಡಿದರು,
 ಮೀನುಗಾರಿಕೆ ಇಲಾಖೆಯ ಕೃಷಿ ನಿರ್ದೇಶಕರಾದ ರೇಹಮಾನ್ ಮಾತನಾಡಿ, ತಾಲ್ಲೂಕಿನಲ್ಲಿ 28 ಕೆರೆಗಳಿದ್ದು, ಟೆಂಡರ್ ಮತ್ತು ಸಂಸ್ಥೆಗಳ ಮೂಲಕ ಹರಾಜು ಮಾಡಲಾಗಿದೆ, ಮೀನುಗಾರಿಕೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳಾದ ಮೀನುಬಲೆ ಮೀನು ಹೊಂಡದ ಸದುಪಯೋಗ ಪಡೆದುಕೋಳ್ಳಬೇಕೆಂದರು. ಪಶು ಇಲಾಖೆಯಿಂದ ಪ್ರತಿ ವರ್ಷದಲ್ಲಿ ಎರಡು ಬಾರಿಯಂತೆ ಕಾಲು ಬಾಯಿ ರೋಗದ ಲಸಿಕೆ ನೀಡಲಾಗುತ್ತಿದೆಯೆಂದರು. ಹಾಗೂ ಪಶು ಇಲಾಖೆಯಿಂದ ಕೌ-ಮ್ಯಾಟ್, ಚಾಫ್ ಕಟರ್‌ಗಳನ್ನು ಸಹಾಯಧನದಲ್ಲಿ ವಿತರಿಸುವ ಮಾಹಿತಿಯನ್ನು ನೀಡಿದರು.


 ಕೃಷಿ ಸಂಶೋಧನ ಕೇಂದ್ರದ ಮುಖ್ಯಸ್ಥರಾದ ಡಾ. ಭವಾನಿ ಸಿರಿಧಾನ್ಯ ಬೆಳೆಗಳ ಮಹತ್ವದ ಅರಿವು, ಅವುಗಳ ಸೇವನೆಯಿಂದ ಆರೋಗ್ಯದ ವೃದ್ದಿ ಹಾಗೂ ದೈನಂದಿನ ಉಪಹಾರದಲ್ಲಿ ಸಿರಿಧಾನ್ಯ ಬೆಳೆಗಳ ಬಳಕೆಯ ಕುರಿತು ತಿಳಿಸಿದರು.


ಈ ಸಭೆಯಲ್ಲಿ ಸಂಜುಕುಮಾರ ಶರಣಪ್ಪಾ ಖಜಾಂಚಿ, ದಯಾನಂದ ಸ್ವಾಮಿ ಜಿಲ್ಲಾ ಪ್ರತಿ ನಿಧಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾದ ಮನ್ಮಥಸ್ವಾಮಿ, ನಂದಕುಮಾರ ಪಾಟೀಲ್, ವೈಜಿನಾಥ ಭುಯ್ಯಾ, ನಾಗಯ್ಯಾ ಸ್ವಾಮಿ, ಮಹಾದೇವ ಸ್ವಾಮಿ, ಅಶೋಕ್ ಬಿರಾದಾರ ಮತ್ತು ನಾಗಯ್ಯಾ ಹೀರೆಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!