08/06/2025 7:38 PM

Translate Language

Home » ಲೈವ್ ನ್ಯೂಸ್ » ಬೀದರ ಜಿಲ್ಲೆಗೆ ಹೆಚ್ಚಿನ ಅನುದಾನ ಮತ್ತು ಕೈಗಾರಿಕೆ ಸ್ಥಾಪನೆಗಾಗಿ ಹೆಚ್ಚು ಒತ್ತು ನೀಡಬೇಕೆಂದು ಮುಖ್ಯಮಂತ್ರಿಗಲ್ಲಿ ಪ್ರಥ್ವಿರಾಜ್ ಎಸ್. ಮನವಿ

ಬೀದರ ಜಿಲ್ಲೆಗೆ ಹೆಚ್ಚಿನ ಅನುದಾನ ಮತ್ತು ಕೈಗಾರಿಕೆ ಸ್ಥಾಪನೆಗಾಗಿ ಹೆಚ್ಚು ಒತ್ತು ನೀಡಬೇಕೆಂದು ಮುಖ್ಯಮಂತ್ರಿಗಲ್ಲಿ ಪ್ರಥ್ವಿರಾಜ್ ಎಸ್. ಮನವಿ

Facebook
X
WhatsApp
Telegram

ಪ್ರಜಾಪ್ರಭಾತ: ಬೀದರ: ೦೩, ೩೭೧ಜೆ ಅಡಿಯಲ್ಲಿ ಬರುವ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೆಕವಾಗಿ ಈ ಸಲದ ಬಜೇಟ್‌ನಲ್ಲಿ ವಿಶೇಷ ಅನುದಾನ ಮೀಸಲಿಟ್ಟು ಈ ಭಾಗದ ಏಳ್ಗೆಗಾಗಿ ಅದರಲ್ಲೂ ಬೀದರ ಜಿಲ್ಲಾ ಕೈಗಾರಿಕೆ ಸ್ಥಾಪನೆಗಾಗಿ ಹೆಚ್ಚು ಒತ್ತು ನೀಡಬೇಕೆಂದು ಉದ್ಯಮಿ ಹಾಗೂ ಎಸ್.ಸಿ.ಎಸ್.ಟಿ. ಕೈಗಾರಿಕಾ ಉದ್ಯಮಿದಾರರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಪ್ರಥ್ವಿರಾಜ್ ಎಸ್. ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.


ಈ ಕುರಿತು ಅವರು ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿ ಸಾಮಾಜಿಕ, ಆರ್ಥಿಕ, ಮತ್ತು ಶೈಕ್ಷಣಿಕವಾಗಿ ಬೀದರ ಜಿಲ್ಲೆ ಪ್ರಗತಿ ಹಂತದಲ್ಲಿದ್ದು, ಇನ್ನು ಹೆಚ್ಚಿನ ಅನುದಾನದ ಅವಶ್ಯಕತೆಯಿದೆ. ಹಾಗಾಗಿ ಮಾನ್ಯ ಮುಖ್ಯಮಂತ್ರಿಗಳು ಈ ಸಲದ ಅಧಿವೇಶನದಲ್ಲಿ ಮಂಡಿಸಲಿರುವ ಅಯವ್ಯಯದಲ್ಲಿ ಬೀದರ ಜಿಲ್ಲೆಗೆ ಹೆಚ್ಚಿನ ಒತ್ತು ಕೊಟ್ಟು ಪಗ್ರತಿ ಹಂತದಲ್ಲಿರುವ ಈ ನಾಡಿಗೆ ಇನ್ನೂ ಪುಷ್ಠಿ ನೀಡಿ ಅದರಲ್ಲಿ ಕೈಗಾರಿಕೆ ಕ್ಷೇತ್ರಕ್ಕೆ ಇನ್ನು ಬಲ ತುಂಬಬೇಕಿದೆ. ಇಲ್ಲಿಯ ನಿರುದ್ಯೋಗ ಯುವಕರಿಗೆ ಉದ್ಯೋಗದ ದೃಷ್ಠಿಕೋನದಿಂದ ಇಲ್ಲಿಯ ಕೈಗಾರಿಕೆಗಳ ಉನ್ನತಿ ಅತ್ಯವಶ್ಯಕವಾಗಿದೆ.


ಹಲವಾರು ವರ್ಷಗಳಿದ ನೆನೆಗುದಿಗೆ ಬಿದ್ದಿರುವ ಮಹಿಳಾ ಪಾರ್ಕ್ ಸ್ಥಾಪನೆ ಆದಷ್ಟು ಬೇಗ ಹೆಚ್ಚು ಒತ್ತು ನೀಡಬೇಕು. ಬೀದರ ನಗರದ ಕೊಳಾರ ಕೈಗಾರಿಕಾ ಪ್ರದೇಶದಲ್ಲಿ ಸುಮಾರು ವರ್ಷಗಳಿಂದ ಕುಡಿಯುವ ನೀರಿನ ತೀವ್ರ ಸಮಸ್ಯೆಯಿದ್ದು, ಈಗಾಗಲೆ ಪೈಪಲೈನ್ ಅಳವಡಿಸಿ ಎರಡ್ಮೂರು ವರ್ಷಗಳು ಕಳೆದರೂ ಇಲ್ಲಿಯವರೆಗೆ ಯಾವುದೇ ನೀರಿನ ಸಪ್ಲೆöÊ ನೀಡಲಾಗಿಲ್ಲ. ಇಂತಹ ಮೂಲಭೂತ ಅನೇಕ ಸಮಸ್ಯೆಗಳಿದ್ದು ಈ ಬಗ್ಗೆ ಹೆಚ್ಚಿನ ಒತ್ತು ನೀಡಿ ಈ ಭಾಗದ ಸಮಗ್ರ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕೆಂದು ತಮ್ಮಲ್ಲಿ ಈ ಮೂಲಕ ಮನವಿ ಮಾಡಿಕೊಳ್ಳಲಾಗುತ್ತಿದೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!