ಬೀದರ ಜಿಲ್ಲೆಯಲ್ಲಿ ಗಣೇಶ ಉತ್ಸವ ನಿಮಿತ್ಯ ಗಣೇಶ ಮಂಡಳಿಯವರು ಹೊರ ರಾಜ್ಯಗಳಿಂದ ಕರ್ಕಶ ಶಬ್ದ ಮಾಡುವ ಸೌಂಡ್ ಸಿಸ್ಟ್ಮಗಳು ಬುಕ್ ಮಾಡಿ ತರದೇ ಇರುವ ಬಗ್ಗೆ.
ದಿನಾಂಕ ೨೭-೦೮-೨೦೨೫ ರಿಂದ ೦೬-೦೮-೨೦೨೫ ರ ವರೆಗೆ ಬೀದರ ಜಿಲ್ಲೆಯಲ್ಲಿ ಗಣೇಶ ಉತ್ಸವ ನಿಮಿತ್ಯ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ, ಮೆರವಣ ಗೆ ಹಾಗೂ ವಿಸರ್ಜನೆ ನಡೆಯಲಿದ್ದು, ಮಾನ್ಯ ಶ್ರೀ ಪ್ರದೀಪ ಗುಂಟಿ (ಐ.ಪಿ.ಎಸ್) ಪೊಲೀಸ್ ಅಧೀಕ್ಷಕರು, ಬೀದರ ಜಿಲ್ಲೆ ರವರು ಜಿಲ್ಲೆಯ ಎಲ್ಲಾ ಗಣೇಶ ಮಂಡಳಿ ರವರಿಗೆ ಈ ಕೆಳಗಿನಂತೆ ಸೂಚಿಸಿರುತ್ತಾರೆ.
ಬೀದರ ಜಿಲ್ಲೆಯ ಎಲ್ಲಾ ಗಣೇಶ ಮಂಡಿಳಿರವರು ಅತಿಹೆಚ್ಚು ವೆಚ್ಚÀದಲ್ಲಿ ಕರ್ಕಶ ಶಬ್ದ ಮಾಡುವ ಸೌಂಡ್ ಸಿಸ್ಟ್ಮಗಳು ಹೊರ ರಾಜ್ಯಗಳಿಂದ ಬುಕ್ ಮಾಡಿ ತರುತ್ತಿರುವುದರ ಬಗ್ಗೆ ಮಾಹಿತಿ ಇದೆ.
ಹೊರ ರಾಜ್ಯಗಳಿಂದ ಬುಕ್ ಮಾಡಿ ತುರವ ಕರ್ಕಶ್ ಶಬ್ದ ಮಾಡುವ ಸೌಂಡ್ ಸಿಸ್ಟ್ಮಗಳನ್ನು ಜಿಲ್ಲೆಯ ಹೊರ ವಲಯದಲ್ಲೇ ನಿಲ್ಲಿಸಲಾಗುವುದು.
ಗಣೇಶ ಮಂಡಳಿರವರು ವೃದಾ ಖರ್ಚು ಮಾಡಿ ನಷ್ಟ ಮಾಡಿಕೊಳ್ಳಬೇಡಿ.
ಗಣೇಶ ಹಬ್ಬವು ಶಾಂತಿಯುತ ಹಾಗೂ ಸೌಹಾರ್ದತೆಯಿಂದ ಆಚರಣೆ ಮಾಡಲು ಬೀದರ ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
