13/06/2025 4:50 PM

Translate Language

Home » ಲೈವ್ ನ್ಯೂಸ್ » ಬೀದರ | ಮಸಿ ಬಳಿದು, ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕನ್ನಡಪರ್ ವಿವಿಧ ಸಂಘಟೆನೆ ಕಠಿಣ ಶಿಕ್ಷೆಗೆ ಆಗ್ರಹ.!

ಬೀದರ  | ಮಸಿ ಬಳಿದು, ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕನ್ನಡಪರ್ ವಿವಿಧ ಸಂಘಟೆನೆ ಕಠಿಣ ಶಿಕ್ಷೆಗೆ ಆಗ್ರಹ.!

Facebook
X
WhatsApp
Telegram

ಬೀದರ.22.ಮಾರ್ಚ್.25:- ಕೆಲವು ದಿನ ಹಿಂದೆ ಬೆಳಗಾವಿಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿರ್ವಾಹಕನಿಗೆ ಮಸಿ ಬಳಿದು, ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ವಿವಿಧ ಕನ್ನಡಪರ್ ಸಂಘಟನೆಳ ಘಟಕದ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಕನ್ನಡ ಬಾವುಟದೊಂದಿಗೆ ನಗರದ ಪ್ರಮುಖ ಮಾರ್ಗಗಳಲ್ಲಿ ಹೆಜ್ಜೆ ಹಾಕುತ್ತ, ಜೈಘೋಷ ಹಾಕಿದರು. ಕ್ರಮಕ್ಕೆ ಒತ್ತಾಯಿಸಿದರು. ಆನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಗೆ ಬರೆದ ಮನವಿ ಪತ್ರವನ್ನು ಉಪವಿಭಾಗಾಧಿಕಾರಿ ಮುಹಮ್ಮದ್‌ ಶಕೀಲ್‌ ಅವರಿಗೆ ಸಲ್ಲಿಸಿದರು.

ಕರ್ನಾಟಕ ಬಸ್‌ಗಳಿಗೆ ಕಪ್ಪು ಮಸಿ ಹಚ್ಚಿದವರು, ಬಸ್‌ ನಿರ್ವಾಹಕನೊಂದಿಗೆ ಅನುಚಿತವಾಗಿ ನಡೆದುಕೊಂಡವರ ಮೇಲೆ ಶೀಘ್ರ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಕರವೇ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ಪ್ರಶಾಂತ ಭಾವಿಕಟ್ಟಿ, ಉಪಾಧ್ಯಕ್ಷ ಅಮೃತ ಸಿಕೇನಪೂರ, ರಾಜಶೇಖರ ಹಲ್ಮಡಗೆ, ಕಾರ್ಯದರ್ಶಿ ಅಮರ ಕೋಟೆ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಅರುಣಕುಮಾರ ಬಹಾದ್ದೂರ, ನಗರ ಘಟಕದ ಅಧ್ಯಕ್ಷ ಮುಹಮ್ಮದ್‌ ಮಜೀದ್‌, ಗೌರವ ಅಧ್ಯಕ್ಷ ಜಾಫೆಟ್‌ ಕಡ್ಯಾಳ, ನಗರ ಘಟಕದ ಉಪಾಧ್ಯಕ್ಷ ಮೋಹನ ಗುನ್ನಳ್ಳಿ, ಸಿದ್ದಾರ್ಥ ಕೋಟೆ, ಪುಟ್ಟರಾಜ, ವೀರ ಕನ್ನಡಿಗರ ಸೇನೆ ರಾಜ್ಯ ಸಂಚಾಲಕ ಸುಬ್ಬಣ್ಣ ಕರಕನಳ್ಳಿ, ಕರವೇ ಕಾವಲು ಪಡೆ ಜಿಲ್ಲಾಧ್ಯಕ್ಷ ಅವಿನಾಶ ಬುಧೇರಕರ್, ಕರವೇ ಸ್ವಾಭಿಮಾನಿ ಸೈನ್ಯ ಜಿಲ್ಲಾಧ್ಯಕ್ಷ ಸಂತೋಷ ಶೇರಿಕಾರ ಪಾಲ್ಗೊಂಡಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!